ಆ್ಯಪ್ನಗರ

ನಾನು ಲಿಫ್ಟ್‌ ಸೇವಕನ ಕೆಲಸ ಬಿಟ್ಟೆ

ಲಿಫ್ಟ್‌ ಹತ್ತುವವರೆಲ್ಲಾ ಟೈಂ ಎಷ್ಟು ಎಂದು ಕೇಳುತ್ತಿದ್ದುದರಿಂದ ಬಲು ಬೇಸರವಾಗಿತ್ತು. ಆದ್ದರಿಂದ ಬಾಸ್‌ ಹತ್ತಿರ ಸಮಸ್ಯೆ ಹೇಳಿಕೊಂಡು ಅವರಿಂದ ಅನುಮತಿ ಪಡೆದು ಲಿಫ್ಟ್‌ನಲ್ಲಿ ಒಂದು ಗೋಡೆ ಗಡಿಯಾರವನ್ನು ನೇತು ಹಾಕಿದೆ.

Vijaya Karnataka Web 1 Oct 2018, 4:50 pm
ತಿಮ್ಮಣ್ಣ: ನಾನು ಲಿಫ್ಟ್‌ ಸೇವಕನ ಕೆಲಸ ಬಿಟ್ಟೆ.
Vijaya Karnataka Web jokes


ಗುಂಡಣ್ಣ: ಯಾಕೆ?

ತಿಮ್ಮಣ್ಣ: ಲಿಫ್ಟ್‌ ಹತ್ತುವವರೆಲ್ಲಾ ಟೈಂ ಎಷ್ಟು ಎಂದು ಕೇಳುತ್ತಿದ್ದುದರಿಂದ ಬಲು ಬೇಸರವಾಗಿತ್ತು. ಆದ್ದರಿಂದ ಬಾಸ್‌ ಹತ್ತಿರ ಸಮಸ್ಯೆ ಹೇಳಿಕೊಂಡು ಅವರಿಂದ ಅನುಮತಿ ಪಡೆದು ಲಿಫ್ಟ್‌ನಲ್ಲಿ ಒಂದು ಗೋಡೆ ಗಡಿಯಾರವನ್ನು ನೇತು ಹಾಕಿದೆ. ಇನ್ನು ಮುಂದೆ ಜನ ನನ್ನನ್ನು ಟೈಮ್‌ ಕೇಳಲ್ಲ ಎಂದು ನಿಶ್ಚಿಂತೆ ಇದ್ದೆ.

ಗುಂಡಣ್ಣ: ಆಮೇಲೆ ಏನಾಯ್ತು?

ತಿಮ್ಮಣ್ಣ: ಲಿಫ್ಟ್‌ ಪ್ರವೇಶಿಸುವವರೆಲ್ಲಾ ಈ ಗಡಿಯಾರ ಸರಿ ಇದೆಯಾ ಎಂದು ಕೇಳಲು ಪ್ರಾರಂಭಿಸಿದರು ಅದಕ್ಕೆ ಈ ಕೆಲಸದ ಸಹವಾಸವೇ ಬೇಡಪ್ಪ ಎಂದು ಬಿಟ್ಟೆ.
**
ಮರಿಗುಂಡ: ಜ್ವರ ಬಂದವರಿಗೆ ಡಾಕ್ಟರ್‌ ಹೆಚ್ಚು ನೀರು ಕುಡೀರಿ ಅಂತಾ ಹೇಳ್ತಾರಲ್ಲ. ಅದು ಸರಿನಾ?

ಮರಿತಿಮ್ಮ: ಹೌದು ಸರಿ.

ಮರಿಗುಂಡ: ಅದು ಹೇಗೆ ಹೇಳ್ತೀಯಾ?

ಮರಿತಿಮ್ಮ: ಮೀನುಗಳು ನೀರಿನಲ್ಲೇ ಮೂರು ಹೊತ್ತು ಈಜುತ್ತಾ ನೀರು ಕುಡೀತಾ ಇರ್ತವೆ. ಅವಕ್ಕೆಂದಾದರೂ ಜ್ವರ ಬರುತ್ತಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ