ಆ್ಯಪ್ನಗರ

ವೈದ್ಯರು ಆಪರೇಷನ್‌ಗೂ ‌ಮುನ್ನ ರೋಗಿಗಳ ಪ್ರಜ್ಞೆ ತಪ್ಪಿಸುವುದೇಕೆ ಗೊತ್ತೆ?

Vijaya Karnataka Web 18 May 2020, 4:26 pm
ಸೋಮ: ನಮ್‌ ರಂಗನಿಗೆ ಸಿಟಿ ಹುಡುಗಿನ ತಂದು ಮದುವೆ ಮಾಡಿದ್ರು ನಿನಗೆ ಗೊತ್ತಲ್ವಾ ಭೀಮ.
Vijaya Karnataka Web Jokes

ಭೀಮ: ಹೌದು. ಏನಾಯ್ತು?
ಸೋಮ: ನಿನ್ನೆ ರಂಗನ ಅಮ್ಮ ಆ ಹುಡುಗಿಗೆ ಹಸುಗೆ ಹುಲ್ಲು ಹಾಕಮ್ಮ ಎಂದು ಹೇಳಿದ್ದಾರೆ. ಅವಳು ಹುಲ್ಲು ಹಾಕಲು ಹೋದಾಗ ಹಸು ಬಾಯಲ್ಲಿ ಬಿಳಿ ಜೊಲ್ಲು ಬರುವುದನ್ನು ನೋಡಿ ವಾಪಾಸ್‌ ಹೋಗಿದ್ದಾಳೆ. ರಂಗನ ಅಮ್ಮ ಕೇಳಿದ್ದಾರೆ ಯಾಕಮ್ಮ ವಾಪಸ್‌ ಬಂದೆ ಎಂದು. ಅದಕ್ಕೆ ಅವಳು ಹಸು ಈಗ ಬ್ರಶ್‌ ಮಾಡುತ್ತಿದ್ದೆ ಅತ್ತೆ ಎಂದಳಂತೆ!
***
ಮಗಳು ತುಂಬಾ ಸಮಯದಿಂದ ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತಿದ್ದಳು. ಅದನ್ನು ಅವಳ ತಂದೆಯೂ ಗಮನಿಸುತ್ತಿದ್ದರು. ಸುಮಾರು ಒಂದು ಗಂಟೆ ಮಾತನಾಡಿದ ನಂತರ ಫೋನ್‌ ಕಟ್‌ ಮಾಡಿ ಮಗಳು ಒಳಗೆ ಬಂದಳು.
ಅಪ್ಪ: ಏನಮ್ಮ ಇವತ್ತು ಆಶ್ವರ್ಯವಾಗುತ್ತಿದ್ದೆ. ಯಾವಾಗಲೂ ಎರಡು ಗಂಟೆ ಮಾತನಾಡುವವಳು ಇವತ್ತೇನು ಬೇಗ ಫೋನ್‌ ಇಟ್ಟು ಬಿಟ್ಟಿದ್ದೀಯಾ?
ಮಗಳು: ಅದು ರಾಂಗ್‌ ನಂಬರ್‌ ಅಪ್ಪ!
***
ರಂಗ: ಲೋ ನಿಂಗ ನನಗೊಂದು ಡೌಟ್‌ ಕಣೋ. ಡಾಕ್ಟರ್‌ಗಳು ಆಪರೇಷನ್‌ ಮಾಡೋದಕ್ಕಿಂತ ಮುಂಚೆ ರೋಗಿಗಳ ಪ್ರಜ್ಞೆ ತಪ್ಪಿಸುತ್ತಾರಲ್ಲಾ ಏಕೆ?
ನಿಂಗ: ಅಷ್ಟು ಗೊತ್ತಿಲ್ವೇನೋ ರಂಗ. ಆಪರೇಷನ್‌ ಮಾಡೋದನ್ನ ರೋಗಿಗಳು ಕಲಿತು ಬಿಡ್ತಾರೆ ಅಂತಾ ಕಣೋ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ