ಆ್ಯಪ್ನಗರ

ಜೋಕ್ಸ್‌ಬಾಕ್ಸ್‌: ಮಹಾತ್ಮ ಗಾಂಧಿ ಯಾರು ಎಂದು ಕೇಳಿದ್ದಕ್ಕೆ ಮರಿಗುಂಡ ಹೇಳಿದ್ದೇನು?

Vijaya Karnataka Web 3 Feb 2020, 9:58 am
ಗುಂಡಣ್ಣ: ಯಾಕೋ ಮರಿಗುಂಡ ನಿನ್ನೆ ಸ್ಕೂಲ್‌ನಲ್ಲಿ ಪ್ರಿನ್ಸಿಪಾಲ್‌ ಹೊಡೆದ್ರಂತೆ. ಏನು ಮಾಡ್ದೆ?
Vijaya Karnataka Web VK Jokes

ಮರಿಗುಂಡ: ನಾನೇನು ಮಾಡಲಿಲ್ಲ ಅಪ್ಪ. ಪ್ರಿನ್ಸಿಪಾಲ್‌ ಕ್ಲಾಸ್‌ಗೆ ಬಂದು ಮಹಾತ್ಮ ಗಾಂಧಿ ಯಾರು ಎಂದು ಕೇಳಿದ್ರು. ಎಲ್ಲರೂ ಸುಮ್ಮನೆ ಇದ್ರು. ನಾನೊಬ್ಬ ಎದ್ದು ಈ ಕ್ಲಾಸ್‌ನಲ್ಲಿ ಆ ಹೆಸರಿನವರು ಯಾರು ಇಲ್ಲಾ ಸರ್‌ ಹೋಗಿ ಪಕ್ಕದ ಕ್ಲಾಸ್‌ನಲ್ಲಿ ಕೇಳಿ ಎಂದೆ, ಅದಕ್ಕೆ ಹೊಡೆದ್ರು.
***
ಗುಂಡಣ್ಣ: ಏನ್‌ ನಿಂಗಣ್ಣ ಚೆನ್ನಾಗಿ ಕುಡಿದು ಮಲ್ಕೊ ನಿದ್ದೆ ಬರುತ್ತೆ ಎಂದು ಹೇಳಿದ್ನಲ್ಲಾ ಚೆನ್ನಾಗಿ ನಿದ್ದೆ ಬಂತಾ?
ನಿಂಗಣ್ಣ: ತುಂಬಾ ಚೆನ್ನಾಗಿ ನಿದ್ದೆ ಬಂತು ಗುಂಡಣ್ಣ. ಆದರೆ ಎಲ್ಲಿ ಮಲಗಿದ್ದೆ ಎಂದು ಗೊತ್ತಾಗಲೇ ಇಲ್ಲ.
***
ಸೋಮ: ಯಾಕೋ ಭೀಮ ಬೇಜಾರಲ್ಲಿದ್ದೀಯಾ?
ಭೀಮ: ಹ್ಞೂ ಕಣೋ ಸೋಮ. ರಕ್ಷ ಬಂಧನ ದಿನದಂದು ತಂಗಿ ಇಲ್ಲ ಅಂದ್ರೆ ನಾನು ನಿನ್ನ ತಂಗಿ ಆಗ್ತೀನಿ ಅಂತಾ ಬರ್ತಾರೆ. ಆದರೆ ವಾಲೆಟೇನ್ಸ್‌ ಡೇ ದಿನ ಲವರ್‌ ಇಲ್ಲ ಅಂದ್ರೆ ಯಾರು ಬರಲ್ಲ ಕಣೋ ಅದಕ್ಕೆ ಬೇಜಾರು.
***
ರಂಗಣ್ಣ: ನಿನ್ನೆ ಬಸ್‌ನಲ್ಲಿ ಏನಾಯ್ತು ಗೊತ್ತಾ ನಿಂಗಣ್ಣ?
ನಿಂಗಣ್ಣ: ಏನಾಯ್ತು?
ರಂಗಣ್ಣ: ನಾನು ಒಂದು ಸೀಟ್‌ನಲ್ಲಿ ಕೂತಿದ್ದೆ. ಕಂಡೆಕ್ಟರ್‌ ಬಂದು ಎದ್ದೇಳಿ ಅಂದ್ರು. ನಾನು ಏಕೆ ಅಂದೆ. ಇದು ಸ್ವತಂತ್ರ ಹೋರಾಟಗಾರರಿಗೆ ಮೀಸಲು ಇರುವ ಜಾಗ ಎಂದ್ರು. ನಾನು ಹೇಳಿದೆ ನಾನು ಸ್ವತಂತ್ರ ಹೋರಾಟಗಾರನೇ ಸರ್‌. ಮದುವೆ ಮುಂಚೆ ನಾನು ತುಂಬಾ ಸ್ವತಂತ್ರವಾಗಿದ್ದೆ. ಮದುವೆ ಆದ ಮೇಲೆ ಆ ಸ್ವತಂತ್ರಕ್ಕಾಗಿ ಹೋರಾಡುತ್ತಿದ್ದೇನೆ ಎಂದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ