ಆ್ಯಪ್ನಗರ

ಸಿಇಟಿ ಟಾಪರ್‌ ಟಿಪ್ಸ್‌: ಸೋಷಿಯಲ್‌ ಮೀಡಿಯಾಗಳಿಂದ ದೂರವಿದ್ದರೆ ಉತ್ತಮ ರ‍್ಯಾಂಕ್

ಸಿಇಟಿ ಎಂಜಿನಿಯರಿಂಗ್‌ನಲ್ಲಿ 8ನೇ ರ‍್ಯಾಂಕ್ ಪಡೆದ ಹುಳಿಮಾವು ರಸ್ತೆಯಲ್ಲಿರುವ ನಾರಾಯಣ ಪಿಯು ಕಾಲೇಜಿನ ನೀರಜ್‌ ಕೆ. ಉಡುಪ.

Vijaya Karnataka 26 May 2019, 11:04 am
ಬೆಂಗಳೂರು: ಸೋಷಿಯಲ್‌ ಮೀಡಿಯಾಗಳಿಂದ ದೂರವಿದ್ದರೆ ವಿದ್ಯಾರ್ಥಿಗಳು ಓದಿನಲ್ಲಿ ಯಶಸ್ಸು ಸಾಧಿಸಬಹುದು ಎನ್ನುತ್ತಾರೆ ಸಿಇಟಿ ಎಂಜಿನಿಯರಿಂಗ್‌ನಲ್ಲಿ 8ನೇ ರ‍್ಯಾಂಕ್ ಪಡೆದ ಹುಳಿಮಾವು ರಸ್ತೆಯಲ್ಲಿರುವ ನಾರಾಯಣ ಪಿಯು ಕಾಲೇಜಿನ ನೀರಜ್‌ ಕೆ. ಉಡುಪ.
Vijaya Karnataka Web Neeraj K Udupa


ನಾನು ಪಿಯುಸಿ ಮೊದಲ ವರ್ಷದಿಂದಲೇ 8-10 ಗಂಟೆಗಳ ಕಾಲ ಓದುತ್ತಿದ್ದೆ. ಓದಿದ್ದನ್ನು ಆಗಾಗ ಪುನರಾವರ್ತನೆ ಮಾಡಿಕೊಳ್ಳುತ್ತಿದ್ದೆ. ಕಾಲೇಜಿನಲ್ಲಿ ಒಳ್ಳೆಯ ಕೋಚಿಂಗ್‌ ಕೊಡುತ್ತಿದ್ದರು. ವಾರಕ್ಕೆರಡು ಬಾರಿ ಕ್ರಿಕೆಟ್‌ ಆಡುತ್ತಿದ್ದೆ. ಈ ಮೂಲಕ ಮನಸ್ಸನ್ನು ಶಾಂತಚಿತ್ತವಾಗಿಟ್ಟುಕೊಂಡಿದ್ದೆ. ಹೀಗಾಗಿ ಉತ್ತಮ ರ‍್ಯಾಂಕ್ ಪಡೆಯಲು ಸಹಾಯವಾಯಿತು. ಜೆಇಇ ಪರೀಕ್ಷೆ ನಂತರ ಕಂಪ್ಯೂಟರ್‌ ಸೈನ್ಸ್‌ ಇಲ್ಲವೇ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಮಾಡಬೇಕೆಂದುಕೊಂಡಿದ್ದೇನೆ ಎಂದಿದ್ದಾರೆ.

ತಂದೆ ಹಾರ್ಡ್‌ವೇರ್‌ ಎಂಜಿನಿಯರ್‌, ತಾಯಿ ಗೃಹಿಣಿ. ಇವರ ನೆರವಿನ ಜತೆಗೆ ನನ್ನ ಉಪನ್ಯಾಸಕರು ನನಗೆ ನೀಡಿದ ಸಲಹೆ, ಮಾರ್ಗದರ್ಶನ ನನ್ನ ಓದಿಗೆ ನೆರವಾಯಿತು ಎನ್ನುತ್ತಾರೆ ನೀರಜ್‌.

ನೀರಜ್‌ ಕೆ. ಉಡುಪ, ಸಿಇಟಿ ಎಂಜಿನಿಯರಿಂಗ್‌ನಲ್ಲಿ 8ನೇ ರ‍್ಯಾಂಕ್.

ಸಿಇಟಿ ಟಾಪರ್‌ ಟಿಪ್ಸ್‌: ಮನಸ್ಸು ಮತ್ತು ದೇಹದ ಸಮತೋಲನಕ್ಕಾಗಿ ಬ್ಯಾಡ್ಮಿಂಟನ್‌

ಸಿಇಟಿ ಫಲಿತಾಂಶ ಪ್ರಕಟ; ಇಂಜಿನಿಯರಿಂಗ್‌ ವಿಭಾಗದಲ್ಲಿ ಜಫಿನ್‌ ಬಿಜು ಪ್ರಥಮ

ಸಿಇಟಿ ಅಭ್ಯರ್ಥಿಗಳು ತಿಳಿದುಕೊಳ್ಳಲೇ ಬೇಕಾದ ಸೂಚನೆಗಳಿವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌