ಆ್ಯಪ್ನಗರ

ಸಿಇಟಿ ಟಾಪರ್‌ ಟಿಪ್ಸ್‌: ಮನಸ್ಸು ಮತ್ತು ದೇಹದ ಸಮತೋಲನಕ್ಕಾಗಿ ಬ್ಯಾಡ್ಮಿಂಟನ್‌

ಸಿಇಟಿ ಎಂಜಿನಿಯರಿಂಗ್‌ನಲ್ಲಿ 4ನೇ ರ‍್ಯಾಂಕ್ ಪಡೆದ ನೆಹರು ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿ ನಕುಲ ನೀರಜೆ.

Vijaya Karnataka 26 May 2019, 10:49 am
ಬೆಂಗಳೂರು: ನಾನು ನಿತ್ಯ ಐದರಿಂದ ಆರು ಗಂಟೆ ಕಾಲ ಓದ್ತಿದ್ದೆ. ಸಿಇಟಿಗಾಗಿ ಓದಲಿಲ್ಲ. ಆದರೆ ಐಐಟಿ ಪರೀಕ್ಷೆಗೆ ಅಂತ ಓದಿದೆ. ಅದರಲ್ಲೇ ಸಿಇಟಿ ಕೂಡ ಕವರ್‌ ಆಗಿದ್ದರಿಂದ ಸಿಇಟಿ ಎಂಜಿನಿಯರಿಂಗ್‌ ಮತ್ತು ಡಿ-ಫಾರ್ಮಾದಲ್ಲಿ 4ನೇ ರ‍್ಯಾಂಕ್ ತೆಗೆದುಕೊಳ್ಳಲು ಅನುಕೂಲವಾಯಿತು.
Vijaya Karnataka Web Nakul


ನಾನು ಎಂಜಿನಿಯರಿಂಗ್‌ಗೆ(ಕಂಪ್ಯೂಟರ್‌ ಸೈನ್ಸ್‌) ಸೇರುತ್ತೇನೆ. ಸೋಮವಾರ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಿದೆ. ಆ ಪರೀಕ್ಷೆ ಬರೆದು, ಫಲಿತಾಂಶ ಬಂದ ನಂತರ ಯಾವ ಕಾಲೇಜು ಎಂಬುದನ್ನು ನಿರ್ಧರಿಸುತ್ತೇನೆ ಎನ್ನುತ್ತಾರೆ ಸಿಇಟಿ ಎಂಜಿನಿಯರಿಂಗ್‌ನಲ್ಲಿ 4ನೇ ರ‍್ಯಾಂಕ್ ಪಡೆದ ನೆಹರು ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿ ನಕುಲ ನೀರಜೆ.

ಒತ್ತಡ ಮಾಡಿಕೊಳ್ಳದೆ, ಒಂದು ದಿನವೂ ತಪ್ಪದಂತೆ ಓದುತ್ತಿದ್ದೆ. ಮನಸ್ಸು ಮತ್ತು ದೇಹದ ಸಮತೋಲನಕ್ಕಾಗಿ ಬ್ಯಾಡ್ಮಿಂಟನ್‌ ಆಡುತ್ತಿದ್ದೆ. ಇವೆಲ್ಲದರ ಫಲವಾಗಿ ನನಗೆ ಒಳ್ಳೆಯ ರ‍್ಯಾಂಕ್ ಸಿಕ್ಕಿತು. ನನ್ನ ತಂದೆ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದು, ತಾಯಿ ಗೃಹಿಣಿ ಇವರ ನೆರವು ನನಗೆ ತುಂಬಾ ಸಿಕ್ಕಿತು. ಜತೆಗೆ ನನ್ನ ಅಧ್ಯಾಪಕರು ಕೂಡ ನನಗೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡಿದರು ಎನ್ನುತ್ತಾರೆ ನಕುಲ.

ನಕುಲ ನೀರಜೆ, ಸಿಇಟಿ ಎಂಜಿನಿಯರಿಂಗ್‌ 4ನೇ ರ‍್ಯಾಂಕ್.

ಸಿಇಟಿ ಫಲಿತಾಂಶ ಪ್ರಕಟ; ಇಂಜಿನಿಯರಿಂಗ್‌ ವಿಭಾಗದಲ್ಲಿ ಜಫಿನ್‌ ಬಿಜು ಪ್ರಥಮ

ಸಿಇಟಿ ಅಭ್ಯರ್ಥಿಗಳು ತಿಳಿದುಕೊಳ್ಳಲೇ ಬೇಕಾದ ಸೂಚನೆಗಳಿವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌