ಆ್ಯಪ್ನಗರ

2 ತಿಂಗಳು ನಿದ್ದೆ ಮಾಡಿದ್ರೆ ಸಾಕು, ನಿಮಗೆ ಸಿಗುತ್ತೆ 13 ಲಕ್ಷ ರೂ. ಸಂಬಳ!

ನಾಸಾದಲ್ಲಿ ನಿಮಗೆ ನಿದ್ದೆ ಮಾಡಲೆಂದೇ ಸಂಬಳ ಕೊಡುತ್ತಾರೆ. ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ ( ಇಎಸ್‌ಎ)ಯೊಂದಿಗೆ ಜತೆಗೂಡಿರುವ ಅಮೆರಿಕದ ಸ್ಪೇಸ್‌ ಏಜೆನ್ಸಿ ಕೃತಕ ಗುರುತ್ವಾಕರ್ಷಣೆಯಲ್ಲಿ ನಿದ್ದೆ ಮಾಡುವ ಬಗ್ಗೆ ಅಧ್ಯಯನ ಮಾಡಲಿದ್ದಾರೆ. ಕೃತಕ ಗುರುತ್ವಾಕರ್ಷಣೆ ಗಗನಯಾತ್ರಿಗೆ ಎಷ್ಟು ಸಹಾಯಕವಾಗುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಯಲಿದೆ.

Indiatimes 31 Mar 2019, 3:18 pm
ವಾಷಿಂಗ್ಟನ್: ನೀವು ತುಂಬಾ ಸೋಮಾರಿಗಳಾಗಿದ್ದೀರಾ? ಕೆಲಸದ ವೇಳೆಯಲ್ಲೂ ನಿದ್ದೆ ಮಾಡಬೇಕು ಎನಿಸುತ್ತಿರುತ್ತದಾ? ಜತೆಗೆ, ರಾತ್ರಿಯಾದರೆ ಸಾಕು ಮಲಗೋಣ ಎನಿಸುತ್ತದಾ? ಹಾಗಾದ್ರೆ ನೀವು ನಾಸಾದಲ್ಲಿ ಕೆಲಸ ಮಾಡಬಹುದು.
Vijaya Karnataka Web nasa sleep job


ನಾಸಾದಲ್ಲಿ ನೀವು ರಾಕೆಟ್‌ಗಳನ್ನು ವಿನ್ಯಾಸ ಮಾಡಬೇಕಿಲ್ಲ. ಬದಲಾಗಿ ನಿಮಗೆ ನಿದ್ದೆ ಮಾಡಲೆಂದೇ ಸಂಬಳ ಕೊಡುತ್ತಾರೆ. ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ ( ಇಎಸ್‌ಎ)ಯೊಂದಿಗೆ ಜತೆಗೂಡಿರುವ ಅಮೆರಿಕದ ಸ್ಪೇಸ್‌ ಏಜೆನ್ಸಿ ಕೃತಕ ಗುರುತ್ವಾಕರ್ಷಣೆಯಲ್ಲಿ ನಿದ್ದೆ ಮಾಡುವ ಬಗ್ಗೆ ಅಧ್ಯಯನ ಮಾಡಲಿದ್ದಾರೆ.
ಕೃತಕ ಗುರುತ್ವಾಕರ್ಷಣೆ ಗಗನಯಾತ್ರಿಗೆ ಎಷ್ಟು ಸಹಾಯಕವಾಗುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಯಲಿದೆ.

24 ವರ್ಷದಿಂದ 55 ವರ್ಷದವರೆಗಿನ 12 ಪುರುಷರು ಹಾಗೂ 12 ಮಹಿಳೆಯರು ಸೇರಿ 24 ಜನರಿಗೆ ನಾಸಾ ಈ ಕೆಲಸ ನೀಡಲಿದೆ. ಅವರು 2 ತಿಂಗಳ ಕಾಲ ಮಲಗಬೇಕಿದ್ದು, ಅವರಿಗೆ ಅಂದಾಜು 12.81 ಲಕ್ಷ ರೂ. ಸಂಬಳವನ್ನು ನಾಸಾ ನೀಡುತ್ತದೆ.

ಕೃತಕ ಗುರುತ್ವಾಕರ್ಷಣೆಯಲ್ಲಿ ಹಾಸಿಗೆ ಮೇಲೆ ವಿಶ್ರಾಂತಿ ಮಾಡುವವರಿಗೆ (AGBRESA) ಜರ್ಮನಿಯ ಕೊಲೋನ್‌ನಲ್ಲಿರುವ ಏರೋಸ್ಪೇಸ್‌ ಸೆಂಟರ್‌ನಲ್ಲಿ ಈ ಅಧ್ಯಯನ ನಡೆಯಲಿದೆ. ಎನ್ವಿಹಾಬ್ ವೈದ್ಯಕೀಯ ಸಂಶೋಧನಾ ಸೌಲಭ್ಯದಲ್ಲಿ ಈ ಅಧ್ಯಯನ ನಡೆಯಲಿದ್ದು, ಕೇವಲ ನಿದ್ದೆಯಷ್ಟೇ ಅಲ್ಲ, ಪ್ರಯೋಗಗಳು, ಪರೀಕ್ಷೆಗಳು, ಊಟ ಮತ್ತು ವಿರಾಮವೂ ಸಹ ನಡೆಯುತ್ತದೆ. ಆದರೆ, ಈ ಅಧ್ಯಯನಕ್ಕೆ ಒಳಗಾದವರು ಬೆಡ್‌ನಲ್ಲಿ ಮಲಗಿಕೊಂಡೇ ಇವುಗಳನ್ನು ಮಾಡಬೇಕಿದೆ.

ನಾಸಾ ಅಧ್ಯಯನ


ಅಧ್ಯಯನಕ್ಕೆ ಒಳಗಾದವರು ಅರಿವಿನ, ಸ್ನಾಯುವಿನ ಬಲ, ಸಮತೋಲನ, ಮತ್ತು ಹೃದಯರಕ್ತನಾಳದ ಕ್ರಿಯೆಗೆ ಸಹ ಒಳಪಡಲಿದ್ದಾರೆ. ಇನ್ನು, ಈ ಪೈಕಿ ಅರ್ಧದಷ್ಟು ಸ್ವಯಂಸೇವಕರು ಗುರುತ್ವಾಕರ್ಷಣೆ ವಿರೋಧಿಯ ಸಮತೋಲನ ಚೇಂಬರ್‌ನ ಪರಿಣಾಮಕ್ಕೊಳಗಾಗಲಿದ್ದಾರೆ.

ಕೊನೆಯಲ್ಲಿ ಅಧ್ಯಯನಕ್ಕೆ ಒಳಗಾದ ಎರಡೂ ತಂಡದವರ ದೈಹಿಕ ಕ್ಷೀಣತೆಯನ್ನು ವಿಜ್ಞಾನಿಗಳು ಹೋಲಿಕೆ ಮಾಡಲಿದ್ದಾರೆ. ಈ ತಂತ್ರ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ಸಹಾಯಕವಾಗಬಹುದು ಎನ್ನಲಾಗಿದೆ. ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ತಂಗಿರುವಾಗ ಗಗನಯಾತ್ರಿಗಳಿಗೆ ಹಲವು ದೈಹಿಕ ಪರಿಣಾಮಗಳು
ಉಂಟಾಗಲಿದೆ. ಹೀಗಾಗಿ, ಈ ಅಧ್ಯಯನ ಯಶಸ್ವಿಯಾದರೆ ಆ್ಯಂಟಿಗ್ರ್ಯಾವಿಟಿ ಸಾಧನಗಳಿಗೆ ನಾಸಾ ಹಣ ಖರ್ಚು ಮಾಡಬಹುದು. ಪ್ರಮುಖವಾಗಿ ಮಂಗಳ ಗ್ರಹದಂತಹ ಸ್ಥಳಗಳಿಗೆ ಗಗನಯಾತ್ರಿಗಳನ್ನು ಕಳಿಸುವುದಾದರೆ ಈ ಅಧ್ಯಯನದಿಂದ ಸಹಾಯಕವಾಗಬಹುದು ಎಂಬುದು ಗಗನಯಾತ್ರಿಗಳ ವಿಶ್ವಾಸ.

ಇದರಿಂದ ಭವಿಷ್ಯದಲ್ಲಿ ಗಗನಯಾತ್ರಿಗಳು ದೈಹಿಕವಾಗಿ ಆರೋಗ್ಯಕರವಾಗಿರಬಹುದು ಎಂದೂ ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌