ಆ್ಯಪ್ನಗರ

'ಸೂಪರ್ 30'ಯ 30 ವಿದ್ಯಾರ್ಥಿಗಳ ಪೈಕಿ 18 ಮಂದಿ ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಯಲ್ಲಿ ಪಾಸ್

''ರಾಮಾನುಜನ್ ಸ್ಕೂಲ್ ಆಫ್ ಮ್ಯಾಥ್‌ಮ್ಯಾಟಿಕ್ಸ್'' ಬ್ಯಾನರ್‌ನಲ್ಲಿ ಶೈಕ್ಷಣಿಕ ಕಾರ್ಯಕ್ರಮ ನಡೆಸುತ್ತಿರುವ ಆನಂದ್ ಸಂಸ್ಥೆ ''ಸೂಪರ್ 30'' ಎಂದೇ ಖ್ಯಾತಿಗೊಳಗಾಗಿದೆ. ಸಮಾಜದ ಆರ್ಥಿಕವಾಗಿ ಹಿಂದುಳಿದ ವಿಭಾಗಗಳ 30 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಐಐಟಿಗೆ ಅರ್ಹತೆ ಪಡೆದುಕೊಳ್ಳುವಂತೆ ಮಾಡುತ್ತಿದ್ದಾರೆ ಆನಂದ್.

Times Now 15 Jun 2019, 5:07 pm
ಪಟನಾ: ಗಣಿತಶಾಸ್ತ್ರಜ್ಞ ಆನಂದ್‌ ಕುಮಾರ್‌ರ ಸೂಪರ್ 30 ಮತ್ತೊಮ್ಮೆ ಸದ್ದು ಮಾಡಿದೆ. ಶುಕ್ರವಾರ ಪ್ರಕಟವಾದ ಜೆಇಇ ಅಡ್ವಾನ್ಸ್‌ಡ್‌ 2019ರ ಪರೀಕ್ಷೆಯಲ್ಲಿ ಸೂಪರ್ 30ಯ 30 ಅಭ್ಯರ್ಥಿಗಳ ಪೈಕಿ 18 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ್ದು ಭಾರತದ ಐಐಟಿಗಳಲ್ಲಿ ಪ್ರವೇಶ ಪಡೆದುಕೊಳ್ಳಲಿದ್ದಾರೆ. ಜುಲೈ 2ರಂದು ಹೃತಿಕ್ ರೋಷನ್ ಅಭಿನಯದ ''ಸೂಪರ್ 30'' ಚಿತ್ರ ಬಿಡುಗಡೆಗೂ ಮುನ್ನ ಈ ಫಲಿತಾಂಶ ಹೊರಹೊಮ್ಮಿದೆ.
Vijaya Karnataka Web exam..


ಆನಂದ್‌ ಮಾರ್ಗದರ್ಶನದಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳು ತಮ್ಮ ಐಐಟಿ ಕನಸನ್ನು ನನಸು ಮಾಡಿಕೊಳ್ಳುವ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದೆ. 2008, 2009, 2010 ಹಾಗೂ 2017ರಲ್ಲಿ ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಯಲ್ಲಿ 30 ಅಭ್ಯರ್ಥಿಗಳ ಪೈಕಿ 30 ಅಭ್ಯರ್ಥಿಗಳೂ ಅರ್ಹತೆ ಪಡೆದುಕೊಂಡಿದ್ದರು. ಇದರಿಂದಾಗಿ ಈಸಂಸ್ಥೆ ಇಡೀ ಜಗತ್ತಿನ ಗಮನ ಸೆಳೆದಿದೆ.

ಇನ್ನು, ಈ ವರ್ಷ ಫಲಿತಾಂಶ ಕಡಿಮೆಯಾಗಿದ್ದು, ಕಳೆದ ವರ್ಷಕ್ಕಿಂತ ಕಡಿಮೆ ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ, ಈ ಸಂಬಂಧ ಮಾತನಾಡಿದ ಆನಂದ್, ''ಎಲ್ಲ ವಿದ್ಯಾರ್ಥಿಗಳೂ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಕೆಲವರು ಐಐಟಿಗೆ ಆಯ್ಕೆಯಾಗದಿದ್ದರೂ ಎನ್‌ಐಟಿಗೆ ಆಯ್ಕೆಯಾಗಲಿದ್ದಾರೆ'' ಎಂದು ಹೇಳಿಕೆ ನೀಡಿದ್ದಾರೆ.

''ರಾಮಾನುಜನ್ ಸ್ಕೂಲ್ ಆಫ್ ಮ್ಯಾಥ್‌ಮ್ಯಾಟಿಕ್ಸ್'' ಬ್ಯಾನರ್‌ನಲ್ಲಿ ಶೈಕ್ಷಣಿಕ ಕಾರ್ಯಕ್ರಮ ನಡೆಸುತ್ತಿರುವ ಆನಂದ್ ಸಂಸ್ಥೆ ''ಸೂಪರ್ 30'' ಎಂದೇ ಖ್ಯಾತಿಗೊಳಗಾಗಿದೆ. ಸಮಾಜದ ಆರ್ಥಿಕವಾಗಿ ಹಿಂದುಳಿದ ವಿಭಾಗಗಳ 30 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಐಐಟಿಗೆ ಅರ್ಹತೆ ಪಡೆದುಕೊಳ್ಳುವಂತೆ ಮಾಡುತ್ತಿದ್ದಾರೆ ಆನಂದ್.

ಕಳೆದ 7 ವರ್ಷಗಳಲ್ಲಿ ನೂರಕ್ಕೂ ಅಧಿಕ ಬಡ ವಿದ್ಯಾರ್ಥಿಗಳನ್ನು ಆನಂದ್‌ ಐಐಟಿಯನ್ನರನ್ನಾಗಿ ಮಾಡಿದ್ದಾರೆ. ಈ ಕೋಚಿಂಗ್‌ನಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ಉಚಿತ ತರಬೇತಿ, ವಸತಿ ಮತ್ತು ಆಹಾರವನ್ನು ನೀಡುತ್ತಾರೆ.

ಫಲಿತಾಂಶದ ಬಳಿಕ ಮಾತನಾಡಿದ ಆನಂದ್, ''2002ರಲ್ಲಿ ಆರಂಭವಾಗಿರುವ ಸೂಪರ್ 30 ಇದುವರೆಗೆ 18 ವರ್ಷಗಳ ಪಯಣ ನಡೆಸಿದ್ದು, 450ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಐಐಟಿಗೆ ಕಳಿಸಿದ್ದಾರೆ. ಈ ಪೈಕಿ ಹಲವರು ದೇಶದಲ್ಲಿ ಹಾಗೂ ವಿದೇಶದಲ್ಲಿ ಉನ್ನತ ಸ್ಥಾನಗಳಲ್ಲಿದ್ದಾರೆ. ನಾವು ವಿದ್ಯಾರ್ಥಿಗಳ ಬಳಿ ಯಾವುದೇ ಶುಲ್ಕ ಪಡೆದುಕೊಳ್ಳುವುದಿಲ್ಲ. ಅಲ್ಲದೆ, ವೈಯಕ್ತಿಕ, ಸರಕಾರಿ ಅಥವಾ ಖಾಸಗಿ ಸಂಸ್ಥೆಯಿಂದ ಯಾವುದೇ ಹಣ, ನಿಧಿ ಅಥವಾ ದೇಣಿಗೆ ತೆಗೆದುಕೊಳ್ಳುವುದಿಲ್ಲ. ನನ್ನ ಇಡೀ ಕುಟುಂಬ ಹಾಗೂ ಶಿಕ್ಷಕರ ತಂಡ ಈ ಕಾರ್ಯ ಮಾಡುತ್ತಿದೆ'' ಎಂದು ಆನಂದ್ ಫಲಿತಾಂಶದ ಬಳಿಕ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌