ಆ್ಯಪ್ನಗರ

ಸರ್ಕಾರಿ ಆಯುರ್ವೇದ ಕಾಲೇಜಿನಿಂದ ತಿಂಗಳಿಗೆ ರೂ.7,500 ಶಿಷ್ಯವೇತನದೊಂದಿಗೆ ಯೋಗ ತರಬೇತಿ.. ಅರ್ಜಿ ಆಹ್ವಾನ

GAMC Bengalore : ಬೆಂಗಳೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವು ಶಿಷ್ಯವೇತನದೊಂದಿಗೆ ಯೋಗ ತರಬೇತಿ ನೀಡಲು ಕಾರ್ಯಕ್ರಮ ಹಮ್ಮಿಕೊ೦ಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

Vijaya Karnataka Web 31 Oct 2019, 11:15 am

ಆಯುಷ್‌ ಇಲಾಖೆ ಅಧೀನದ ಬೆಂಗಳೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವು ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SCP-TSP) ಅಡಿಯಲ್ಲಿ 2019-20 ನೇ ಸಾಲಿನ ಯೋಗ ತರಬೇತಿ ಕಾರ್ಯಕ್ರಮ ಇದಾಗಿದೆ.
Vijaya Karnataka Web gamc bengalore yoga training


ಯಾರಿಗೆ ಯೋಗ ತರಬೇತಿ ಕಾರ್ಯಕ್ರಮ?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಈ ಯೋಗ ತರಬೇತಿ ಕಾರ್ಯಕ್ರಮ.

ವಿದ್ಯಾರ್ಹತೆ

SSLC ಪಾಸ್ ಆಗಿರುವ SC / ST ಅಭ್ಯರ್ಥಿಗಳು ಯೋಗ ತರಬೇತಿಗೆ ಸೇರಬಹುದಾಗಿದೆ.

ಯೋಗ ತರಬೇತಿ ಅವಧಿ: 11-11-2019 ರಿಂದ 08-02-2020 ವರೆಗೆ ಒಟ್ಟು 3 ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ.

ಶಿಷ್ಯವೇತನ: ಯೋಗ ತರಬೇತಿ ಕಾರ್ಯಕ್ರಮಕ್ಕೆ ಸೇರುವ ಅರ್ಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ.7,500 ನೀಡಲಾಗುತ್ತದೆ.

ಮಂಡ್ಯ ಜಿಲ್ಲೆಯ ಅಂಗನವಾಡಿಗಳಲ್ಲಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

ಅಗತ್ಯ ದಾಖಲೆಗಳು

- ಜಾತಿ ಪ್ರಮಾಣ ಪತ್ರ

- ಆದಾಯ ಪ್ರಮಾಣ ಪತ್ರ

- SSLC ಪಾಸ್ ಆಗಿರುವ ಬಗ್ಗೆ ಅಂಕಪಟ್ಟಿ

- ಆಧಾರ್ ಕಾರ್ಡ್ ಪ್ರತಿ

- 2 ಭಾವಚಿತ್ರಗಳು

- ಯಾವುದಾದರೂ ಅಧಿಕೃತ ಗುರುತಿನ ಚೀಟಿ

- ವೈದ್ಯಕೀಯ ಪ್ರಮಾಣ ಪತ್ರ (ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ದೃಢೀಕರಣ ಪತ್ರ)

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 07-11-2019

ಅರ್ಜಿ ಸಲ್ಲಿಕೆ ಹೇಗೆ?

ನಿಗದಿತ ಅರ್ಜಿ ನಮೂನೆಯನ್ನು ವೆಬ್‌ಸೈಟ್‌ ವಿಳಾಸ www.gamc.karnataka.gov.in ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಅರ್ಜಿಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ಜೆರಾಕ್ಸ್‌ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.

ಅರ್ಜಿ ತಲುಪಿಸಬೇಕಾದ ಸ್ಥಳ : ಪ್ರಾಚಾರ್ಯರು, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು.

ಅರ್ಜಿಯನ್ನು ಈ ಕಛೇರಿಯಲ್ಲಿಯೂ ಸಹ ಪಡೆದುಕೊಳ್ಳಬಹುದಾಗಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಕಾಲ ಕಡ್ಡಾಯವಾಗಿ ಹಾಜರಾಗಬೇಕು. ತರಬೇತಿ ಅವಧಿಯಲ್ಲಿ ವಸತಿ ಮತ್ತು ಊಟದ ವ್ಯವಸ್ಥೆಗಳನ್ನು ಅಭ್ಯರ್ಥಿಗಳೇ ಮಾಡಿಕೊಳ್ಳಬೇಕು. ಆದ್ದರಿಂದ ಶಿಷ್ಯವೇತನ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಮೂಲ ಅಂಕಪಟ್ಟಿಯನ್ನು ಆಯ್ಕೆಯಾಗಿ ಹಾಜರಾಗುವ ಸಂದರ್ಭದಲ್ಲಿ, ಪರಿಶೀಲನಗಾಗಿ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ www.gamc.karnataka.gov.in ಗೆ ಭೇಟಿ ನೀಡಿರಿ.

ಸಂಪರ್ಕ ಸಂಖ್ಯೆ: 080-22872848

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌