ಬೆಂಗಳೂರಿನಲ್ಲಿ ಜ.29 ರವರೆಗೆ ಶಾಲೆ ಬಂದ್, ಉಳಿದ ಕಡೆ ಶಾಲೆ ಪುನರಾರಂಭ
ರಾಜ್ಯದಲ್ಲಿ ಕೋವಿಡ್ ಹಿನ್ನೆಲೆ ಬಂದ್ ಮಾಡಲಾಗಿದ್ದ ಶಾಲೆಗಳನ್ನು ಪುನರಾರಂಭಿಸುವ ಕುರಿತು ಲೇಟೆಸ್ಟ್ ನಿರ್ಧಾರ ಹೊರಬಿದ್ದಿದೆ. ಶಿಕ್ಷಣ ಸಚಿವರು ಶಾಲೆಗಳ ಓಪನ್ ಮಾಡುವ ಕುರಿತು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
Vijaya Karnataka Web 21 Jan 2022, 4:15 pm
ಹೈಲೈಟ್ಸ್:
- ಜ.29 ರವರೆಗೆ ಬೆಂಗಳೂರಿನಲ್ಲಿ ಶಾಲೆ ಬಂದ್.
- ಉಳಿದ ಕಡೆ ಶಾಲೆಗಳ ಮುಂದುವರಿಕೆಗೆ ಸ್ಥಳೀಯವಾಗಿ ತೀರ್ಮಾನಕ್ಕೆ ಅನುಮತಿ.
- ಎಸಿ, ಡಿಹೆಚ್ಒ, ತಾಹಶೀಲ್ದಾರ್, ಬಿಇಒ ಒಪ್ಪಿಗೆ ಪಡೆದು ಶಾಲೆ ತೆರೆಯಲು ಸೂಚನೆ.
ಬೆಂಗಳೂರು ಹೊರತುಪಡಿಸಿ, ಉಳಿದ ಎಲ್ಲ ಕಡೆ ಎಸಿ, ಡಿಹೆಚ್ಒ, ತಾಹಶೀಲ್ದಾರ್, ಬಿಇಒ ರವರ ಒಪ್ಪಿಗೆ ಪಡೆದು ಶಾಲೆಗಳನ್ನು ನಡೆಸಬಹುದು. ಕಡಿಮೆ ಸೋಂಕಿತರ ಪ್ರಮಾಣ ಇರುವ ಶಾಲೆಗಳಲ್ಲಿ 6 ದಿನ, ಹೆಚ್ಚು ಸೋಂಕಿತರ ಪ್ರಮಾಣ ಇರುವ ಶಾಲೆಗಳಲ್ಲಿ 3 ದಿನಗಳು ಶಾಲೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಬೆಂಗಳೂರಿನ ಶಾಲೆಗಳ ಬಗ್ಗೆ ಜನವರಿ 29 ರಂದು ಮತ್ತೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ಯಾವ ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಸೋಂಕಿತರಾಗುತ್ತಾರೋ ಅಂತಹ ಶಾಲೆಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ಹೆಚ್ಚಿದೆ. ಮಕ್ಕಳಿಗೆ ಸೋಂಕು ಹೆಚ್ಚಾದಲ್ಲಿ ಮಾತ್ರ ಶಾಲೆಗಳನ್ನು ಬಂದ್ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಕಡಿಮೆ ಸೋಂಕಿತ ಮಕ್ಕಳಿರುವ ಕಡೆ 3 ದಿನಗಳು ಶಾಲೆಗಳನ್ನು ಬಂದ್ ಮಾಡಲು, ಹೆಚ್ಚು ಮಕ್ಕಳು ಸೋಂಕಿತರಿದ್ದಲ್ಲಿ 7 ದಿನ ಶಾಲೆಗಳನ್ನು ಬಂದ್ ಮಾಡಬೇಕು ಎಂದು, ಸಿಎಂ ಜತೆ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಬಿ ಸಿ ನಾಗೇಶ್ ತಿಳಿಸಿದ್ದಾರೆ.
Republic Day Speech: ಗಣರಾಜ್ಯೋತ್ಸವದ ಭಾಷಣ, ಪ್ರಬಂಧಕ್ಕೆ ಟಿಪ್ಸ್
ಯಾವ ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಸೋಂಕಿತರಾಗುತ್ತಾರೋ ಅಂತಹ ಶಾಲೆಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ಹೆಚ್ಚಿದೆ. ಮಕ್ಕಳಿಗೆ ಸೋಂಕು ಹೆಚ್ಚಾದಲ್ಲಿ ಮಾತ್ರ ಶಾಲೆಗಳನ್ನು ಬಂದ್ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಕಡಿಮೆ ಸೋಂಕಿತ ಮಕ್ಕಳಿರುವ ಕಡೆ 3 ದಿನಗಳು ಶಾಲೆಗಳನ್ನು ಬಂದ್ ಮಾಡಲು, ಹೆಚ್ಚು ಮಕ್ಕಳು ಸೋಂಕಿತರಿದ್ದಲ್ಲಿ 7 ದಿನ ಶಾಲೆಗಳನ್ನು ಬಂದ್ ಮಾಡಬೇಕು ಎಂದು, ಸಿಎಂ ಜತೆ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಬಿ ಸಿ ನಾಗೇಶ್ ತಿಳಿಸಿದ್ದಾರೆ.
Republic Day Speech: ಗಣರಾಜ್ಯೋತ್ಸವದ ಭಾಷಣ, ಪ್ರಬಂಧಕ್ಕೆ ಟಿಪ್ಸ್