ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಗಳಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಗಳಲ್ಲಿ ನಡೆಸಲಾಗುವ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಗವದ್ಗೀತೆ ಮತ್ತು ಕುರಾನ್ ಪಠಣ ಮಾಡಿಸುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ. ಶಿಕ್ಷಣ ಇಲಾಖೆಯು ಮಕ್ಕಳ ಪ್ರತಿಭೆ ಅನಾವರಣಗೊಳಿಸುವುದಕ್ಕಾಗಿ ಜಾನಪದ, ಸಾಂಸ್ಕೃತಿಕ, ಸಂಗೀತ, ನೃತ್ಯ ಸೇರಿ ಇನ್ನಿತರ ಸ್ಪರ್ಧೆ ಒಳಗೊಂಡಂತೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸಲಾಗುತ್ತದೆ. ಆದರೆ ಇದಕ್ಕೆ ಹೊಸ ಸೇರ್ಪಡೆಯಾಗಿ ಧಾರ್ಮಿಕ ಪಠಣ ಸ್ಪರ್ಧೆ ಆಯೋಜಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಪಿಎಂ ಯುವ ಸಾಧಕರ ವಿದ್ಯಾರ್ಥಿವೇತನ: ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ
2022-23ನೇ ಸಾಲಿನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ತರಗತಿವಾರು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಬೇಕಿರುವ ಸ್ಪರ್ಧೆಯ ವಿವರಗಳನ್ನು ನೀಡಿದೆ. ಸಂಸ್ಕೃತ ಭಾಷೆಯಲ್ಲಿರುವ ಭಗವದ್ಗೀತೆ ಮತ್ತು ಅರೇಬಿಕ್ನಲ್ಲಿರುವ ಕುರಾನ್ ಪಠಣಕ್ಕೆ ಸೂಚಿಸಿದೆ. ಎಲ್ಲ ಹಂತಗಳಲ್ಲಿ ಸ್ಪರ್ಧೆ ನಡೆಸಲು ಜಿಲ್ಲಾ ಉಪ ನಿರ್ದೇಶಕರು ಹಾಗೂ ರಾಜ್ಯದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ವಹಿಸುವಂತೆ ಉರ್ದು ಮತ್ತು ಇತರ ಅಲ್ಪಸಖ್ಯಾಂತ ಭಾಷಾ ಶಾಲೆಗಳ ನಿರ್ದೇಶನಾಲಯ ನಿರ್ದೇಶಕಿ ಸಿರಿಯಣ್ಣನವರ್ ಲಲಿತಾ ಚಂದ್ರಶೇಖರ್ ಜ್ಞಾಪನಾ ಪತ್ರ ಹೊರಡಿಸಿದ್ದಾರೆ.
ಮಕ್ಕಳ ಸ್ಫರ್ಧೆಗಳ ವಿವರ
1 ರಿಂದ 4ನೇ ತರಗತಿ ಮಕ್ಕಳಿಗೆ ಭಗವದ್ಗೀತೆ 12ನೇ ಅಧ್ಯಾಯದಲ್ಲಿರುವ 1 ರಿಂದ 5 ಶ್ಲೋಕ, 5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ , 1 ರಿಂದ 10ನೇ ಶ್ಲೋಕ, ಮತ್ತು 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ, ಕುರಾನ್ ಸುರ್ ಎ ಫಾತೆಹ ,5 ರಿಂದ 7ನೇ ತರಗತಿಯ ಮಕ್ಕಳಿಗೆ ಸುರ್ ಎ ರೆಹಮನ್, 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸುರ್ ಎ ಯಾಸೀನ್ 4 ಮುಬೀನ್ ವರೆಗೆ ಪಠಣ ಸ್ಪರ್ಧೆ ಹಮ್ಮಿಕೊಳ್ಳುವಂತೆ ತಿಳಿಸಲಾಗಿದೆ.
KCET 2022 ಫಲಿತಾಂಶ ಚೆಕ್ ಮಾಡಲು ರೋಲ್ ನಂಬರ್ ಸಿಗ್ತಿಲ್ವಾ? ಈ ವಿಧಾನ ಫಾಲೋ ಮಾಡಿ
ಪಿಎಂ ಯುವ ಸಾಧಕರ ವಿದ್ಯಾರ್ಥಿವೇತನ: ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ
2022-23ನೇ ಸಾಲಿನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ತರಗತಿವಾರು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಬೇಕಿರುವ ಸ್ಪರ್ಧೆಯ ವಿವರಗಳನ್ನು ನೀಡಿದೆ. ಸಂಸ್ಕೃತ ಭಾಷೆಯಲ್ಲಿರುವ ಭಗವದ್ಗೀತೆ ಮತ್ತು ಅರೇಬಿಕ್ನಲ್ಲಿರುವ ಕುರಾನ್ ಪಠಣಕ್ಕೆ ಸೂಚಿಸಿದೆ. ಎಲ್ಲ ಹಂತಗಳಲ್ಲಿ ಸ್ಪರ್ಧೆ ನಡೆಸಲು ಜಿಲ್ಲಾ ಉಪ ನಿರ್ದೇಶಕರು ಹಾಗೂ ರಾಜ್ಯದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ವಹಿಸುವಂತೆ ಉರ್ದು ಮತ್ತು ಇತರ ಅಲ್ಪಸಖ್ಯಾಂತ ಭಾಷಾ ಶಾಲೆಗಳ ನಿರ್ದೇಶನಾಲಯ ನಿರ್ದೇಶಕಿ ಸಿರಿಯಣ್ಣನವರ್ ಲಲಿತಾ ಚಂದ್ರಶೇಖರ್ ಜ್ಞಾಪನಾ ಪತ್ರ ಹೊರಡಿಸಿದ್ದಾರೆ.
ಮಕ್ಕಳ ಸ್ಫರ್ಧೆಗಳ ವಿವರ
1 ರಿಂದ 4ನೇ ತರಗತಿ ಮಕ್ಕಳಿಗೆ ಭಗವದ್ಗೀತೆ 12ನೇ ಅಧ್ಯಾಯದಲ್ಲಿರುವ 1 ರಿಂದ 5 ಶ್ಲೋಕ, 5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ , 1 ರಿಂದ 10ನೇ ಶ್ಲೋಕ, ಮತ್ತು 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ, ಕುರಾನ್ ಸುರ್ ಎ ಫಾತೆಹ ,5 ರಿಂದ 7ನೇ ತರಗತಿಯ ಮಕ್ಕಳಿಗೆ ಸುರ್ ಎ ರೆಹಮನ್, 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸುರ್ ಎ ಯಾಸೀನ್ 4 ಮುಬೀನ್ ವರೆಗೆ ಪಠಣ ಸ್ಪರ್ಧೆ ಹಮ್ಮಿಕೊಳ್ಳುವಂತೆ ತಿಳಿಸಲಾಗಿದೆ.
KCET 2022 ಫಲಿತಾಂಶ ಚೆಕ್ ಮಾಡಲು ರೋಲ್ ನಂಬರ್ ಸಿಗ್ತಿಲ್ವಾ? ಈ ವಿಧಾನ ಫಾಲೋ ಮಾಡಿ