1 ರಿಂದ 9ನೇ ತರಗತಿ ಪರೀಕ್ಷೆ ನಾಳೆ ನಿರ್ಧಾರ: ಶಿಕ್ಷಣ ಸಚಿವ ಸುರೇಶ್ಕುಮಾರ್
1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕುರಿತು ಏ.8ರಂದು ನಿರ್ಧಾರ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ..
Vijaya Karnataka Web 7 Apr 2021, 5:35 pm
ಹೈಲೈಟ್ಸ್:
- 1 ರಿಂದ 9ನೇ ತರಗತಿ ಪರೀಕ್ಷೆ ನಿರ್ಧಾರ ನಾಳೆ
- ಎಸ್ ಸುರೇಶ್ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿಕೆ.
- ಶಿಕ್ಷಣ ತಜ್ಞರು, ಅಧಿಕಾರಿಗಳ ಅಭಿಪ್ರಾಯ ಕೇಳಿ ಅಂತಿಮ ನಿರ್ಧಾರ.
ವಿಜಯಪುರ : 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕುರಿತು ಏ.8ರಂದು ನಿರ್ಧಾರ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆ ಬಗ್ಗೆ ಶಿಕ್ಷಣ ಕಾಯ್ದೆ ಇತಿಮಿತಿ, ತಜ್ಞರ ಅಭಿಪ್ರಾಯ ಆಧರಿಸಿ ನಾಳೆ ಅಧಿಕಾರಿಗಳ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಮಕ್ಕಳು ಶ್ರದ್ಧಾಪೂರ್ವಕ ತಯಾರಿ ನಡೆಸಿದ್ದಾರೆ. ಪರೀಕ್ಷೆ ಇಲ್ಲದೆ ಪಾಸು ಮಾಡಿದರೆ
ಕೊರೊನಾ ಪಾಸ್ ಎಂದು ಕತೆಯುತ್ತಾರೆಂಬ ನೋವು ಮಕ್ಕಳಲ್ಲಿದೆ. ಹೀಗಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದರು.
12ನೇ ತರಗತಿ ಸಿಬಿಎಸ್ಇ ಪರೀಕ್ಷೆಗೆ ಕೊನೆ 30 ದಿನಗಳಲ್ಲಿ ತಯಾರಿ ಹೀಗಿರಲಿ..
ಪರೀಕ್ಷೆ ಮಾಡೋದು ಕೇವಲ ಪರೀಕ್ಷೆ ಮಾಡಿ ಮುಗಿಸಲು ಅಲ್ಲ, ಮಕ್ಕಳ ಭವಿಷ್ಯಕ್ಕಾಗಿ. ಪರೀಕ್ಷೆ ವ್ಯವಹಾರ ಆಗಬಾರದು, ಅದರ ಪಾವಿತ್ರ್ಯತೆ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಕಳೆದ ವರ್ಷ ಕೊರೊನಾ ನಡುವೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. ಈ ವರ್ಷ ಪರೀಕ್ಷೆ ನಡೆಸುವುದು ಸವಾಲು. ಈ ವರ್ಷ ಪರೀಕ್ಷೆ ಬರೆಯುವ ಮಕ್ಕಳು ಕೊರೊನಾ ವಾರಿಯರ್ಸ್. ಕಳೆದ ಬಾರಿಗಿಂತ ಅಭಿವೃದ್ಧಿಪಡಿಸಿದ ಎಸ್ಒಪಿ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಸಮೀಕ್ಷೆ ಮೂಲಕ ಪರೀಕ್ಷೆ ವ್ಯವಸ್ಥೆ ಮೈಕ್ರೋ ಮ್ಯಾನೇಜ್ಮೆಂಟ್ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರಗಳಾಗಲಿವೆ ಎಂದು ಸಚಿವರು ಹೇಳಿದರು.
ಎಲ್ಲಾ ಮಾರ್ಗಗಳಿಂದ ಮಕ್ಕಳನ್ನು ತಲುಪಿದ್ದೇವೆ. ಕೋವಿಡ್ ಕಾರಣಕ್ಕೆ ಮಕ್ಕಳಿಗೆ ಸಮಸ್ಯೆ ಎದುರಾಗಲಿದೆ. ಅವರಿಗಾಗಿ ಅತ್ಮಸ್ಥೈಯರ್ಯ ತುಂಬಲಾಗುವುದು. ನಕಲು ಮುಕ್ತ ಪರೀಕ್ಷೆ ನಡೆಸಲು ದಿಟ್ಟಕ್ರಮ ಕೈಗೊಳ್ಳಲಾಗುತ್ತದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಸಂಖ್ಯೆ ಹೆಚ್ಚಾಗುತ್ತಿದೆ. ಇವರನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಎಸ್ ಸುರೇಶ್ಕುಮಾರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೆಇಇ ಮೇನ್ 2021 ಏಪ್ರಿಲ್ ಸೆಷನ್ ಅಡ್ಮಿಟ್ ಕಾರ್ಡ್ ಶೀಘ್ರದಲ್ಲಿ ಬಿಡುಗಡೆ?
ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಮಕ್ಕಳು ಶ್ರದ್ಧಾಪೂರ್ವಕ ತಯಾರಿ ನಡೆಸಿದ್ದಾರೆ. ಪರೀಕ್ಷೆ ಇಲ್ಲದೆ ಪಾಸು ಮಾಡಿದರೆ
ಕೊರೊನಾ ಪಾಸ್ ಎಂದು ಕತೆಯುತ್ತಾರೆಂಬ ನೋವು ಮಕ್ಕಳಲ್ಲಿದೆ. ಹೀಗಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದರು.
12ನೇ ತರಗತಿ ಸಿಬಿಎಸ್ಇ ಪರೀಕ್ಷೆಗೆ ಕೊನೆ 30 ದಿನಗಳಲ್ಲಿ ತಯಾರಿ ಹೀಗಿರಲಿ..
ಪರೀಕ್ಷೆ ಮಾಡೋದು ಕೇವಲ ಪರೀಕ್ಷೆ ಮಾಡಿ ಮುಗಿಸಲು ಅಲ್ಲ, ಮಕ್ಕಳ ಭವಿಷ್ಯಕ್ಕಾಗಿ. ಪರೀಕ್ಷೆ ವ್ಯವಹಾರ ಆಗಬಾರದು, ಅದರ ಪಾವಿತ್ರ್ಯತೆ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಕಳೆದ ವರ್ಷ ಕೊರೊನಾ ನಡುವೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. ಈ ವರ್ಷ ಪರೀಕ್ಷೆ ನಡೆಸುವುದು ಸವಾಲು. ಈ ವರ್ಷ ಪರೀಕ್ಷೆ ಬರೆಯುವ ಮಕ್ಕಳು ಕೊರೊನಾ ವಾರಿಯರ್ಸ್. ಕಳೆದ ಬಾರಿಗಿಂತ ಅಭಿವೃದ್ಧಿಪಡಿಸಿದ ಎಸ್ಒಪಿ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಸಮೀಕ್ಷೆ ಮೂಲಕ ಪರೀಕ್ಷೆ ವ್ಯವಸ್ಥೆ ಮೈಕ್ರೋ ಮ್ಯಾನೇಜ್ಮೆಂಟ್ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರಗಳಾಗಲಿವೆ ಎಂದು ಸಚಿವರು ಹೇಳಿದರು.
ಎಲ್ಲಾ ಮಾರ್ಗಗಳಿಂದ ಮಕ್ಕಳನ್ನು ತಲುಪಿದ್ದೇವೆ. ಕೋವಿಡ್ ಕಾರಣಕ್ಕೆ ಮಕ್ಕಳಿಗೆ ಸಮಸ್ಯೆ ಎದುರಾಗಲಿದೆ. ಅವರಿಗಾಗಿ ಅತ್ಮಸ್ಥೈಯರ್ಯ ತುಂಬಲಾಗುವುದು. ನಕಲು ಮುಕ್ತ ಪರೀಕ್ಷೆ ನಡೆಸಲು ದಿಟ್ಟಕ್ರಮ ಕೈಗೊಳ್ಳಲಾಗುತ್ತದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಸಂಖ್ಯೆ ಹೆಚ್ಚಾಗುತ್ತಿದೆ. ಇವರನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಎಸ್ ಸುರೇಶ್ಕುಮಾರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೆಇಇ ಮೇನ್ 2021 ಏಪ್ರಿಲ್ ಸೆಷನ್ ಅಡ್ಮಿಟ್ ಕಾರ್ಡ್ ಶೀಘ್ರದಲ್ಲಿ ಬಿಡುಗಡೆ?