ಆ್ಯಪ್ನಗರ

ನೀಟ್‌ 2019: ಹಾಸನ ಮೂಲದ ಫಣೀಂದ್ರ ಡಿ.ಆರ್. ರಾಜ್ಯಕ್ಕೆ ಫಸ್ಟ್

ಮಾನವನ ಚರ್ಮದ ಕೆಳಗೆ ಏನಿರುತ್ತೆ ಎಂಬ ಬಗ್ಗೆ ನನಗೆ ತೀವ್ರ ಕುತೂಹಲವಿತ್ತು. ಅಲ್ಲದೆ, ನನ್ನ ಸೋದರ ಸಂಬಂಧಿಯೊಬ್ಬರು ಬೆಂಗಳೂರಿನಲ್ಲಿ ವೈದ್ಯರಾಗಿದ್ದಾರೆ. ಜೀವಶಾಸ್ತ್ರ ಹಾಗೂ ವೈದ್ಯಕೀಯ ವಿಜ್ಞಾನದ ಬಗ್ಗೆ ಮೊದಲಿನಿಂದಲೂ ಹೆಚ್ಚು ಆಸಕ್ತಿ ಇದೆ ಎಂದು ಹಾಸನ ಮೂಲದ ಫಣೀಂದ್ರ ಹೇಳಿದ್ದಾರೆ.

TIMESOFINDIA.COM 5 Jun 2019, 7:29 pm
[This story originally published in Times Of India on June 05, 2019]
Vijaya Karnataka Web phaneendra

ಬೆಂಗಳೂರು:
ದೇಶಾದ್ಯಂತ ಮೇ 5 ರಂದು ನಡೆದ ನೀಟ್ 2019 ಯುಜಿ ಫಲಿತಾಂಶ ಬುಧವಾರ (ಜೂನ್ 5,2019). ಈ ಪೈಕಿ ರಾಜ್ಯದ ಹಾಸನ ಮೂಲದ ಫಣೀಂದ್ರ ಡಿ.ಆರ್‌. ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆಲ್‌ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ ಫಣೀಂದ್ರ ಡಿ.ಆರ್‌. 36 ನೇ ಸ್ಥಾನ ಬಾಚಿಕೊಂಡಿದ್ದಾರೆ.

ಪುಣೆಯ ಜವಾಹರ್ ನವೋದಯ ವಿದ್ಯಾಲಯ (ಜೆಎನ್‌ವಿ)ದಲ್ಲಿ ಫಣೀಂದ್ರ ಹನ್ನೆರಡನೇ ತರಗತಿ ಓದಿದ್ದಾರೆ. ಎನ್‌ಆರ್‌ಐ ಪ್ರಾಯೋಜಿತ ದಕ್ಷಣ ಫೌಂಡೇಶನ್‌ನಿಂದ ಉಚಿತವಾಗಿ ವಿಶೇಷ ಕೋಚಿಂಗ್ ಪಡೆಯಲು ಹಾಸನ ಮೂಲದ ಫಣೀಂದ್ರ ಆಯ್ಕೆಯಾಗಿದ್ದರು.

ಈ ಸಂಬಂಧ ಮಾಹಿತಿ ನೀಡಿರುವ ಫಣೀಂದ್ರ, ''ನೀಟ್ 2017ರ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ನಾನು ಆಯ್ಕೆಯಾಗಿದ್ದೆ. ಆ ವೇಳೆ ಹಾಸನದ ಮಾವಿನಕೆರೆ ಜೆಎನ್‌ವಿಯಲ್ಲಿ 10ನೇ ತರಗತಿ ಓದುತ್ತಿದ್ದೆ. ಆದರೆ, ಬಾಲಕರಿಗೆ ದಕ್ಷಣ ಫೌಂಡೇಶನ್ ನೀಟ್‌ ಕೋಚಿಂಗ್ ಅನ್ನು ಕೇವಲ ಜೆಎನ್‌ವಿ ಪುಣೆಯಲ್ಲಿ ನೀಡಲಾಗುವುದು ಎಂಬ ಕಾರಣಕ್ಕೆ ಪುಣೆಯ ಜೆಎನ್‌ವಿಗೆ ಶಿಫ್ಟ್‌ ಆದೆ'' ಎಂದು ಹೇಳಿಕೊಂಡಿದ್ದಾರೆ.

ಜತೆಗೆ, ''ಮಾನವನ ಚರ್ಮದ ಕೆಳಗೆ ಏನಿರುತ್ತೆ ಎಂಬ ಬಗ್ಗೆ ನನಗೆ ತೀವ್ರ ಕುತೂಹಲವಿತ್ತು. ಅಲ್ಲದೆ, ನನ್ನ ಸೋದರ ಸಂಬಂಧಿಯೊಬ್ಬರು ಬೆಂಗಳೂರಿನಲ್ಲಿ ವೈದ್ಯರಾಗಿದ್ದಾರೆ'' ಎಂದು ಫಣೀಂದ್ರ ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

ಅಲ್ಲದೆ, ಜೀವಶಾಸ್ತ್ರ ಹಾಗೂ ವೈದ್ಯಕೀಯ ವಿಜ್ಞಾನದ ಬಗ್ಗೆ ಮೊದಲಿನಿಂದಲೂ ಹೆಚ್ಚು ಆಸಕ್ತಿ ಇದೆ ಎಂದು ಹೇಳಿದ್ದಾರೆ. ನೀಟ್‌ನಲ್ಲಿ 50ರೊಳಗೆ ರ‍್ಯಾಂಕ್ ಪಡೆದುಕೊಂಡಿದ್ದರೂ ಫಣೀಂದ್ರ ಏಮ್ಸ್ ದಿಲ್ಲಿಯ ಪ್ರವೇಶ ಪತ್ರದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರಂತೆ. ಏಮ್ಸ್‌ಗೆ ಸೇರುವುದು ನನ್ನ ಕನಸು ಎಂದು ಸಹ ಫಣೀಂದ್ರ ಹೇಳಿದ್ದಾರೆ.

ಶಾಲಾ ದಿನಗಳಿಂದಲೂ ಫಣೀಂದ್ರ ಜೆಎನ್‌ವಿ ಬೋರ್ಡಿಂಗ್‌ ಶಾಲೆಯಲ್ಲೇ ಓದಿದ್ದು, ಮಧ್ಯಮ ತರಗತಿಯಿಂದ ಮನೆಯಿಂದ ದೂರವೇ ಇದ್ದಾರೆ. ಇನ್ನು, ಪುಣೆಗೆ ತೆರಳಿದ ಬಳಿಕ ಮಧ್ಯರಾತ್ರಿಯವರೆಗೂ ತರಗತಿಗಳು ಇರುತ್ತಿತ್ತು. ಆದರೆ, ಪುಣೆಯ ಜೆಎನ್‌ವಿಗೆ ಸೇರಿದ ಬಳಿಕ ನೀಟ್‌ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಗಳಿಸುವುದು ನನ್ನ ಆದ್ಯತೆಯಾಗಿತ್ತು ಎಂದೂ ಫಣೀಂದ್ರ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಫೋನ್‌ಗಳಿಂದ ದೂರವೇ ಇದ್ದ ಫಣೀಂದ್ರ ಬಳಿ ಸಾಮಾಜಿಕ ಜಾಲತಾಣಗಳ ಖಾತೆಯೂ ಹೊಂದಿಲ್ಲ. ಫಣೀಂದ್ರ ತಂದೆ ರಮೇಶ್‌ ಡಿ.ಬಿ. ಹಾಸನದಲ್ಲಿ ಶಾಲಾ ಶಿಕ್ಷಕರಾಗಿದ್ದು, ಅವರ ತಾಯಿ ಮಧುರಾ ಕೆ.ಎಸ್‌. ಹಾಸನ ಬಳಿಯ ರಾಮನಾಥಪುರದ ಕೆಪಿಟಿಸಿಎಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: ನೀಟ್‌ 2019: ರಾಜ್ಯದ ಟಾಪರ್‌ಗಳ ಪಟ್ಟಿ ಇಲ್ಲಿದೆ ನೋಡಿ

ಇದನ್ನು ಓದಿ: ನೀಟ್ 2019 ಫಲಿತಾಂಶ ಬಿಡುಗಡೆ: ಡೌನ್ಲೋಡ್‌ ಮಾಡಲು ಇಲ್ಲಿದೆ ಲಿಂಕ್

ಇದನ್ನೂ ಓದಿ: ಇಂದು ನೀಟ್‌ 2019 ಫಲಿತಾಂಶ ಬಿಡುಗಡೆ : ವಿವರಗಳಿಗಾಗಿ ಇಲ್ಲಿ ನೋಡಿ

ಇದೂ ಓದಿ: ನೀಟ್ ಅಂತಿಮ ಕೀ ಉತ್ತರಗಳು ಬಿಡುಗಡೆ: ಡೌನ್ಲೋಡ್‌ ಮಾಡಲು ಇಲ್ಲಿದೆ ವಿವರ

ನೀಟ್ 2019: ರಾಜಸ್ಥಾನದ ನಳಿನ್ ಖಂಡೇಲ್ವಾಲ್ ದೇಶಕ್ಕೆ ಪ್ರಥಮ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌