ಕರ್ನಾಟಕ ಬಂದ್: ಪಿಯು ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ಕರ್ನಾಟಕ ಬಂದ್ ಪರಿಣಾಮ ರಾಜ್ಯದ ಸಾರಿಗೆ ವ್ಯವಸ್ಥೆ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಬಹುದು.
Vijaya Karnataka Web 12 Feb 2020, 10:36 pm
ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು ಗುರುವಾರ (ಫೆಬ್ರವರಿ 13, 2020) ನಡೆಸುವ ಬಂದ್ ನಿಂದ, ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಥಮ ವರ್ಷದ ಪಿಯು ಪರೀಕ್ಷೆಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಪರೀಕ್ಷೆ ಮುಂದೂಡುವ ಯಾವುದೇ ಅವಕಾಶಗಳಿಲ್ಲ. ಈಗಾಗಲೇ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಪರೀಕ್ಷೆ ನಡೆಯಲಿದೆ ಎಂದು ಪಿಯು ಇಲಾಖೆ ಮೂಲಗಳು ತಿಳಿಸಿವೆ.
ಶಾಲಾ-ಕಾಲೇಜುಗಳಿಗೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಯಾವುದೇ ರಜೆ ಇರುವುದಿಲ್ಲ. ಸ್ಥಳೀಯ ಆಡಳಿತ ಸಂಸ್ಥೆಗಳು ಬಂದ್ ಪರಿಸ್ಥಿತಿ ಹೇಗಿದೆ ಎಂದು ನೋಡಿಕೊಂಡು ಕಾನೂನು ಪ್ರಕಾರ ನಿರ್ಧಾರ ಕೈಗೊಳ್ಳಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. "ಶಿಕ್ಷಣ ಇಲಾಖೆ ಅಥವಾ ಆಯಾ ಪ್ರದೇಶಗಳ ಡೆಪ್ಯೂಟಿ ಕಮಿಷನರ್ಗಳು ಪರಿಸ್ಥಿತಿಗನುಗುಣವಾಗಿ ಕಾನೂನುರೀತ್ಯಾ ನಿರ್ಧಾರಗಳನ್ನು ಕೈಗೊಳ್ಳಬಹುದು" ಎಂದಿದ್ದಾರೆ.
ಕರ್ನಾಟಕ ಬಂದ್ ಪರಿಣಾಮ ರಾಜ್ಯದ ಸಾರಿಗೆ ವ್ಯವಸ್ಥೆ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಬಹುದು. ಕ್ಯಾಬ್ ಮತ್ತು ಆಟೋ ಯೂನಿಯನ್ಗಳು ಸಹ ಬಂದ್ಗೆ ಮುಂದಾಗಿರುವುದರಿಂದ ಪ್ರಯಾಣಿಕರಿಗೆ ಸ್ವಲ್ಪಮಟ್ಟಿಗೆ ತೊಂದರೆ ಉಂಟಾಗಬಹುದು.
ಶಾಲಾ-ಕಾಲೇಜುಗಳಿಗೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಯಾವುದೇ ರಜೆ ಇರುವುದಿಲ್ಲ. ಸ್ಥಳೀಯ ಆಡಳಿತ ಸಂಸ್ಥೆಗಳು ಬಂದ್ ಪರಿಸ್ಥಿತಿ ಹೇಗಿದೆ ಎಂದು ನೋಡಿಕೊಂಡು ಕಾನೂನು ಪ್ರಕಾರ ನಿರ್ಧಾರ ಕೈಗೊಳ್ಳಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. "ಶಿಕ್ಷಣ ಇಲಾಖೆ ಅಥವಾ ಆಯಾ ಪ್ರದೇಶಗಳ ಡೆಪ್ಯೂಟಿ ಕಮಿಷನರ್ಗಳು ಪರಿಸ್ಥಿತಿಗನುಗುಣವಾಗಿ ಕಾನೂನುರೀತ್ಯಾ ನಿರ್ಧಾರಗಳನ್ನು ಕೈಗೊಳ್ಳಬಹುದು" ಎಂದಿದ್ದಾರೆ.
ಕರ್ನಾಟಕ ಬಂದ್ ಪರಿಣಾಮ ರಾಜ್ಯದ ಸಾರಿಗೆ ವ್ಯವಸ್ಥೆ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಬಹುದು. ಕ್ಯಾಬ್ ಮತ್ತು ಆಟೋ ಯೂನಿಯನ್ಗಳು ಸಹ ಬಂದ್ಗೆ ಮುಂದಾಗಿರುವುದರಿಂದ ಪ್ರಯಾಣಿಕರಿಗೆ ಸ್ವಲ್ಪಮಟ್ಟಿಗೆ ತೊಂದರೆ ಉಂಟಾಗಬಹುದು.