ಆ್ಯಪ್ನಗರ

ಎಸ್‌ಎಸ್‌ಎಲ್‌ಸಿ ಟಾಪರ್‌ ಡಿ. ಸೃಜನಾಳ ಆತ್ಮವಿಶ್ವಾಸದ ನುಡಿಗಳಿವು

ಯಾವತ್ತೂ ಪರೀಕ್ಷೆ ಹತ್ತಿರ ಬಂದಾಗ ತುಂಬಾ ಒತ್ತಡದಲ್ಲಿ ಓದುವುದು ಸರಿಯಲ್ಲ. ಅಂದಿನ ಪಾಠವನ್ನು ಅಂದೇ ಓದಿ, ಗೊಂದಲಗಳಿದ್ದರೆ ಆಗಿಂದಾಗ್ಗೆ ಬಗೆಹರಿಸಿಕೊಳ್ಳಬೇಕು. ಸದಾ ಕೂಲ್‌ ಆಗಿರಬೇಕು ಎಂದು ಮುಂದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸೃಜನಾ.

Vijaya Karnataka 2 May 2019, 12:50 pm
ಬೆಂಗಳೂರು: ಒಂದು ವರ್ಷದಿಂದ ಟಿವಿ, ಮೊಬೈಲ್‌ ಬಳಕೆಯಿಲ್ಲದೆ ಓದುವುದರತ್ತ ಗಮನ ಹರಿಸಿದ್ದೆ. ಜತೆಗೆ ಶ್ರಮಪಟ್ಟು ಶ್ರದ್ಧೆಯಿಂದ ಅಂದಂದಿನ ಪಾಠವನ್ನು ಅಂದಂದೇ ಅಧ್ಯಯನ ಮಾಡುತ್ತಿದ್ದೆ. ತುಂಬಾ ಶ್ರಮಪಟ್ಟು ಓದುತ್ತಿದ್ದೆ. 'ಕೈ ಕೆಸರಾದರೆ, ಬಾಯಿ ಮೊಸರು' ಎಂಬುದಕ್ಕೆ ಇದೇ ಉತ್ತಮ ಉದಾಹರಣೆ ಎಂದು ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅತ್ತಿಬೆಲೆಯ ಸೇಂಟ್‌ ಫಿಲೊಮಿನಾ ಶಾಲೆಯ ವಿದ್ಯಾರ್ಥಿನಿ ಡಿ. ಸೃಜನಾಳ ಆತ್ಮವಿಶ್ವಾಸದ ನುಡಿಗಳಿವು.
Vijaya Karnataka Web D Srujana


ಟಿ.ವಿ, ಸಿನಿಮಾ ನೋಡಲು ಅಥವಾ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮನೆಯಲ್ಲಿ ಅವಕಾಶ ಕೊಡುತ್ತಿರಲಿಲ್ಲ. ಸದಾ 'ಓದು, ವಿಶ್ರಾಂತಿ, ಓದು....' ಎಂಬ ಪರಿಕಲ್ಪನೆಯನ್ನು ಒಂದು ವರ್ಷದಿಂದ ಪಾಲಿಸಿದೆ. ನಮ್ಮ ತಂದೆ ಮತ್ತು ತಾತ ಶಿಕ್ಷಕರಾಗಿದ್ದು, ನಮ್ಮದು ಮೂಲತಃ ಶಿಕ್ಷಕರ ಕುಟುಂಬ. ಹೀಗಾಗಿ ನನಗೆ ವಿದ್ಯೆಯೆಂಬುದು ಜನಜನಿತವಾಗಿ ಬಂದಿದೆ. ನಾನು ಚಿಕ್ಕಂದಿನಿಂದಲೂ ಪ್ರತಿ ವರ್ಷವೂ ಶಾಲೆಗೆ ಮೊದಲ ಸ್ಥಾನ ಪಡೆಯುತ್ತಿದ್ದೆ ಎಂದು ಖುಷಿಯಿಂದ ನುಡಿಯುತ್ತಾಳೆ ಸೃಜನಾ.

ನಮ್ಮ ತಂದೆ ದಿವಾಕರ್‌ ವಿಜ್ಞಾನ ಶಿಕ್ಷಕರು (ತಾಯಿ ವೀಣಾ, ಗೃಹಿಣಿ) ತಂದೆಯ ಸ್ನೇಹಿತ ಸೋಮಶೇಖರ್‌ ಗಣಿತ ಶಿಕ್ಷಕರು. ಇವರಿಬ್ಬರೂ ನನಗೆ ಆಯಾ ವಿಷಯಗಳನ್ನು ಹೇಳಿಕೊಡುತ್ತಿದ್ದರು. ಜತೆಗೆ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಪ್ರೋತ್ಸಾಹದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದೆ. ತಂದೆ-ತಾಯಿಯರ ಆಶಯದಂತೆ ವೈದ್ಯಳಾಗಬೇಕೆಂಬ ಕನಸಿದೆ. ಹೆತ್ತವರ ಆಶಯ ಈಡೇರಿಸುವ ನಿಟ್ಟಿನಲ್ಲಿ ನಾನು ಶ್ರಮಿಸುವೆ ಎನ್ನುತ್ತಾರೆ ಸೃಜನಾ. ಯಾವತ್ತೂ ಪರೀಕ್ಷೆ ಹತ್ತಿರ ಬಂದಾಗ ತುಂಬಾ ಒತ್ತಡದಲ್ಲಿ ಓದುವುದು ಸರಿಯಲ್ಲ. ಅಂದಿನ ಪಾಠವನ್ನು ಅಂದೇ ಓದಿ, ಗೊಂದಲಗಳಿದ್ದರೆ ಆಗಿಂದಾಗ್ಗೆ ಬಗೆಹರಿಸಿಕೊಳ್ಳಬೇಕು. ಸದಾ ಕೂಲ್‌ ಆಗಿರಬೇಕು ಎಂದು ಸೃಜನಾ ಸಲಹೆ ನೀಡುತ್ತಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌