ಆ್ಯಪ್ನಗರ

ಕೆಇಎ ಪಿಜಿಸಿಇಟಿ 2019: ಪರೀಕ್ಷೆ ನಂತರದ ಪ್ರಕ್ರಿಯೆಗಳೇನು?

ಪ್ರವೇಶ ಪರೀಕ್ಷೆಯು ಮುಗಿದ ಮೂರು ದಿನಗಳೊಳಗೆ ಕೀ ಉತ್ತರಗಳು ಪ್ರಕಟಗೊಳ್ಳಲಿದ್ದು, ತಾವು ಬರೆದ ಉತ್ತರಗಳೊಂದಿಗೆ ತಾಳೆ ಮಾಡಿ ಪರಿಶೀಲನೆ ನಡೆಸಬಹುದು. ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತೆ ಮೂರು ದಿನಗಳ ಅವಕಾಶವಿರಲಿದೆ.

Vijaya Karnataka Web 1 Jun 2019, 2:14 pm
ಬೆಂಗಳೂರು: ಎಂಬಿಎ, ಎಂಸಿಎ, ಎಂಇ/ಎಂ.ಟೆಕ್‌/ಎಂ.ಆರ್ಕಿಟೆಕ್ಚರ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯಲಿರುವ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಯ ನಂತರದ ಪ್ರಕ್ರಿಯೆಗಳ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಖ್ಯಾಂಶಗಳನ್ನು ಬಿಡುಗಡೆ ಮಾಡಿದೆ.
Vijaya Karnataka Web Teachers


ಪ್ರವೇಶ ಪರೀಕ್ಷೆಯು ಮುಗಿದ ಮೂರು ದಿನಗಳೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಕೀ ಉತ್ತರಗಳು ಪ್ರಕಟಗೊಳ್ಳಲಿವೆ.

ನಂತರ ಅಭ್ಯರ್ಥಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮೂರು ದಿನಗಳ ಅವಕಾಶ ಸಿಗಲಿದೆ. ನಿಗದಿತ ದಿನಾಂಕದ ನಂತರ ಬರುವ ಆಕ್ಷೇಪಣೆಗಳನ್ನು ಸಂಬಂಧಪಟ್ಟ ತಜ್ಞರ ಸಮಿತಿಗೆ ಹೋಗಲಿದೆ. ತಜ್ಞರ ಸಮಿತಿ ಕೈಗೊಳ್ಳುವ ನಿರ್ಣಯವೇ ಅಂತಿಮವಾಗಿರುತ್ತದೆ.

ಎಂಬಿಎ, ಎಂಸಿಎ, ಎಂಎ/ಎಂ.ಟೆಕ್‌/ಎಂ.ಆರ್ಕಿಟೆಕ್ಚರ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ರ್ಯಾಂಕ್‌ ಪಟ್ಟಿಯನ್ನು, ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳದೆ ಅಭ್ಯರ್ಥಿಗಳು ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಯ ವಿಷಯಗಳಲ್ಲಿ ಪಡೆದ ಅಂಕಗಳನ್ನು ಆಧರಿಸಿ ಪ್ರಕಟಿಸಲಾಗುತ್ತದೆ. ಅರ್ಹತಾ ಪರೀಕ್ಷೆಯ ಅಂಕಗಳನ್ನು ಕೇವಲ ಅರ್ಹತೆಗೆ ಮಾತ್ರ ಪರಿಗಣಿಸಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ತಾವು ಅರ್ಹತಾ ಪರೀಕ್ಷೆಯಲ್ಲಿ ನಿಗದಿತ ಅಂಕಗಳನ್ನು ಪಡೆದಿದ್ದೀರೆಂದು ಖಾತ್ರಿಪಡಿಸಿಕೊಂಡು ಸೀಟು ಆಯ್ಕೆ ಪ್ರಕ್ರಿಯೆಗೆ ಹಾಜರಾಗಬೇಕು. ಆದ್ದರಿಂದ ಅಭ್ಯರ್ಥಿಗಳು ಮೆರಿಟ್‌/ರ್ಯಾಂಕ್‌ಅನ್ನು ಹೊಂದಿದ್ದ ಮಾತ್ರಕ್ಕೆ ಸೀಟು ಆಯ್ಕೆ ಪ್ರಕ್ರಿಯೆಗೆ ಅರ್ಹರಾಗುವುದಿಲ್ಲ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ವೆಬ್‌ಸೈಟ್‌ kea.kar.nic.inನಲ್ಲಿ ಎಂಬಿಎ, ಎಂಸಿಎ, ಎಂಇ/ಎಂ.ಟೆಕ್‌/ಎಂ.ಆರ್ಕಿಟೆಕ್ಚರ್‌ ಕೋರ್ಸ್‌ಗಳ ಸೀಟುಗಳನ್ನು ಮೀಸಲಾತಿ ಅಡಿಯಲ್ಲಿ ಆಯ್ಕೆಮಾಡಿಕೊಳ್ಳುವ ಅಭ್ಯರ್ಥಿಗಳ ಎಲ್ಲಾ ವಿವರಗಳನ್ನು ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಪ್ರಕಟಿಸಲಾಗುತ್ತದೆ. ಇದರಲ್ಲಿ ಅಭ್ಯರ್ಥಿಯ ಹೆಸರು, ತಂದೆಯ/ಪೋಷಕರ ಹೆಸರು, ಯಾವ ಪ್ರವರ್ಗದಲ್ಲಿ ಸೀಟು ಆಯ್ಕೆ ಮಾಡಿಕೊಂಡಿದ್ದಾರೆ, ತಂದೆ/ತಾಯಿಯ ಪೋಷಕರ ವಾರ್ಷಿಕ ಆದಾಯ ಇತ್ಯಾದಿ ಇರಲಿದೆ.

ಅಭ್ಯರ್ಥಿಯು ಸೀಟನ್ನು ಕ್ಯಾಶುಯಲ್‌ ತೆರವು ಹಂತದವರೆಗೂ ಸೀಟನ್ನು ರದ್ದುಪಡಿಸದೇ ಇದ್ದಲ್ಲಿ ಅಭ್ಯರ್ಥಿಯು ಸಂಬಂಧಿಸಿದ ಕಾಲೇಜಿಗೆ ಪ್ರವೇಶ ಪಡೆದಂತಾಗುತ್ತದೆ.

ಅಭ್ಯರ್ಥಿಯು ಸೀಟನ್ನು ರದ್ದು ಪಡಿಸಬೇಕಾದರೆ, ಕೆಎಇ ಕಚೇರಿಯಲ್ಲಿ ಮಾತ್ರ ರದ್ದುಪಡಿಸಬಹುದಾಗಿದೆ. ಸೀಟನ್ನು ಆಯ್ಕೆ ಮಾಡಿ ಸಂಬಂಧಪಟ್ಟ ಕಾಲೇಜಿಗೆ ಪ್ರವೇಶ ಪಡೆಯದೆ ಇದ್ದ ಮಾತ್ರಕ್ಕೆ ತಾವು ಆಯ್ಕೆ ಮಾಡಿದ್ದ ಸೀಟನ್ನು ಕೆಎಇ ಕಚೇರಿಯಲ್ಲಿ ರದ್ದು ಪಡಿಸಿಕೊಳ್ಳಲಾಗಿದೆ ಎಂದು ಕೊಳ್ಳುವಂತಿಲ್ಲ ಎಂಬ ಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌