ಆ್ಯಪ್ನಗರ

10ನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯದಿಂದ 5 ಅಧ್ಯಾಯ ಕೈಬಿಟ್ಟಿರುವುದು ಸುಳ್ಳು: ಸಿಬಿಎಸ್‌ಇ ಸ್ಪಷ್ಟನೆ

ಹತ್ತನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯದಿಂದ ಐದು ಅಧ್ಯಾಯಗಳನ್ನು ಮಂಡಳಿ ಕೈಬಿಟ್ಟಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇದು ಸುಳ್ಳು ಎಂದು ಸಿಬಿಎಸ್‌ಇ ಸ್ಪಷ್ಟನೆ ನೀಡಿದೆ.

Times Now 19 Apr 2019, 1:09 pm
ಹೊಸದಿಲ್ಲಿ: ಸಿಬಿಎಸ್‌ಸಿಯ ಹತ್ತನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯದಿಂದ ಐದು ಅಧ್ಯಾಯಗಳನ್ನು ಮಂಡಳಿ ಕೈಬಿಟ್ಟಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಈ ಸಂಬಂಧ ಸ್ಪಷ್ಟನೆ ನೀಡಿರುವ ಸಿಬಿಎಸ್‌ಇ ಮಂಡಳಿ, ಯಾವುದೇ ಅಧ್ಯಾಯಗಳನ್ನು ಕೈಬಿಟ್ಟಿಲ್ಲ ಎಂದು ಸುತ್ತೋಲೆ ಮೂಲಕ ತಿಳಿಸಿದೆ.
Vijaya Karnataka Web exam


ರಾಜಕೀಯ ಅಧ್ಯಯನದ ಮೂರು ಮತ್ತು ಪರಿಸರಕ್ಕೆ ಸಂಬಂಧಿಸಿದ ಎರಡು ಅಧ್ಯಾಯಗಳನ್ನು ಕೈಬಿಡಲಾಗಿದೆ. ಇದು ಆಂತರಿಕ ಮೌಲ್ಯಮಾಪನದ ಭಾಗವಾಗಿ ಇರಲಿದೆ. ಆದರೆ ಅಂತಿಮ ಪರೀಕ್ಷೆಗೆ ಈ ಅಧ್ಯಾಯಗಳು ಇರುವುದಿಲ್ಲ ಎಂಬ ಸಿಬಿಎಸ್‌ಇ ಸುತ್ತೋಲೆಯೊಂದು ಹರಿದಾಡಿತ್ತು. ಅಲ್ಲದೆ, 2021ರಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿದ್ಯಾರ್ಥಿ ಮೌಲ್ಯಮಾಪನ ಕಾರ್ಯಕ್ರಮಕ್ಕೆ ಮಾನವ ಸಂಪನ್ಮೂಲ ಸಚಿವಾಲಯ ಭಾಗವಹಿಸಲು ನಿರ್ಧರಿಸಿದ್ದು, ಹಾಗಾಗಿ ಭವಿಷ್ಯದ ಅಗತ್ಯತೆಗಳೊಂದಿಗೆ ಅದರ ಮೌಲ್ಯಮಾಪನ ಮಾದರಿಗಳನ್ನು ಒಟ್ಟುಗೂಡಿಸಲು ಬಯಸಿದೆ ಅದರೆ, ಇದು ಸುಳ್ಳು ಎಂದು ಸ್ಪಷ್ಟನೆ ನೀಡಿರುವ ಮಂಡಳಿ, ಅಧಿಕೃತ ಅಧಿಕಸೂಚನೆ ಹೊರಡಿಸಿದೆ.

''ಹತ್ತನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯದಿಂದ ಯಾವುದೇ ಅಧ್ಯಾಯಗಳನ್ನು ಕೈಬಿಟ್ಟಿಲ್ಲ. ಎಲ್ಲ ಅಧ್ಯಾಯಗಳನ್ನು ಸಿಬಿಎಸ್‌ಇ ಶೈಕ್ಷಣಿಕ ಪಠ್ಯಕ್ರಮ ಇರುವ ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದು, ಈ ಎಲ್ಲ ಅಧ್ಯಾಯಗಳಿಗೆ ಅಂತಿಮ ಪರೀಕ್ಷೆ ಸಹ ಇರಲಿದೆ'' ಎಂದು ನೋಟಿಸ್‌ ಮೂಲಕ ಸ್ಪಷ್ಟನೆ ನೀಡಿದೆ.

ಕೆಲ ಮಾಧ್ಯಮಗಳಲ್ಲಿ ಅಧ್ಯಾಯಗಳನ್ನು ಕೈಬಿಟ್ಟಿರುವ ಬಗ್ಗೆ ಸುದ್ದಿಯಾಗಿತ್ತು. ''ಪ್ರಜಾಪ್ರಭುತ್ವ'' , ''ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ'', ''ರಾಜಕೀಯ ಹೋರಾಟಗಳು ಮತ್ತು ಚಳುವಳಿಗಳು'', ''ಅರಣ್ಯ ಮತ್ತು ವನ್ಯಜೀವಿ'' ಹಾಗೂ ''ಜಲ ಸಂಪನ್ಮೂಲಗಳು'' ಎಂಬ ಪಠ್ಯಗಳನ್ನು ಕೈಬಿಡಲಾಗಿದೆ ಎಂದು ಹಲವು ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆ ಸಿಬಿಎಸ್‌ಇ ಮಂಡಳಿ ಅಧಿಕೃತ ಸ್ಪಷ್ಟನೆ ನೀಡಿದೆ.

ಇತ್ತೀಚೆಗಷ್ಟೇ ಸಿಬಿಎಸ್‌ಇಯ ಫಲಿತಾಂಶ ಸೇರಿದಂತೆ ಹಲವು ಸುಳ್ಳು ಸುದ್ದಿಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದ ಬಗ್ಗೆಯೂ ವರದಿಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌