ಆ್ಯಪ್ನಗರ

ದ್ವಿತೀಯ ಪಿಯುಸಿ ಮರುಮೌಲ್ಯಮಾಪನ: ವಿಜ್ಞಾನ ವಿಭಾಗದಲ್ಲಿ ಜಂಟಿ ಟಾಪರ್ ಆದ ಶರತ್ ಚಂದ್ರ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆರ್‌.ಶರತ್ ಚಂದ್ರ ಮೊದಲು 600ಕ್ಕೆ 588 ಅಂಕಗಳನ್ನು ಪಡೆದುಕೊಂಡಿದ್ದರು. ನಂತರ ಮರುಮೌಲ್ಯಮಾಪನದಲ್ಲಿ 6 ಹೆಚ್ಚುವರಿ ಅಂಕ ಲಭಿಸಿದ ಕಾರಣ ಅವರಿಗೆ 600ಕ್ಕೆ 594 ಅಂಕಗಳು ಬಂದಂತಾಗಿದೆ. ಈ ಹಿನ್ನೆಲೆ ಶರತ್ ಚಂದ್ರ 594 ಅಂಕಗಳನ್ನು ಗಳಿಸಿಕೊಂಡಿದ್ದಾರೆ.

Vijaya Karnataka Web 25 May 2019, 8:33 pm
ಬೆಂಗಳೂರು: ಶಿವಮೊಗ್ಗದ ಆರ್‌.ಶರತ್ ಚಂದ್ರ ಎಂಬ ವಿದ್ಯಾರ್ಥಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಂಟಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮರು ಮೌಲ್ಯಮಾಪನದಲ್ಲಿ ಶಿವಮೊಗ್ಗದ ವಿದ್ಯಾರ್ಥಿಗೆ 6 ಹೆಚ್ಚುವರಿ ಅಂಕ ಲಭಿಸಿದ ಕಾರಣದಿಂದ ಶರತ್ ಜಂಟಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
Vijaya Karnataka Web results


ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆರ್‌.ಶರತ್ ಚಂದ್ರ ಮೊದಲು 600ಕ್ಕೆ 588 ಅಂಕಗಳನ್ನು ಪಡೆದುಕೊಂಡಿದ್ದರು. ನಂತರ ಮರುಮೌಲ್ಯಮಾಪನದಲ್ಲಿ 6 ಹೆಚ್ಚುವರಿ ಅಂಕ ಲಭಿಸಿದ ಕಾರಣ ಅವರಿಗೆ 600ಕ್ಕೆ 594 ಅಂಕಗಳು ಬಂದಂತಾಗಿದೆ. ಈ ಹಿನ್ನೆಲೆ ಶರತ್ ಚಂದ್ರ 594 ಅಂಕಗಳನ್ನು ಗಳಿಸಿಕೊಂಡಿದ್ದಾರೆ.

ಈ ಮೊದಲು ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಪದ್ಮನಾಭನಗರ ಕುಮಾರನ್ಸ್‌ ಕಾಂಪೊಸಿಟ್‌ ಪಿಯು ಕಾಲೇಜಿನ ರಾಜೇಶ್‌ ಕಶ್ಯಪ್‌(594) ಮೊದಲ ಸ್ಥಾನ ಪಡೆದುಕೊಂಡಿದ್ದರು. ಈಗ ಅವರೊಂದಿಗೆ ಆರ್‌.ಶರತ್ ಚಂದ್ರ ಸಹ ಜಂಟಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಮಾರ್ಚ್‌ 1ರಿಂದ 18ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 6.73 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಬಳಿಕ ಏಪ್ರಿಲ್ 15ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌