ಆ್ಯಪ್ನಗರ

ಕೃಷ್ಣ ದೇವರಾಯ ವಿವಿಯಲ್ಲಿ ಬೋಧಕೇತರ ನೇಮಕ: ಮರುಪರೀಕ್ಷೆಗೆ ಸಿಂಡಿಕೇಟ್‌ ನಿರ್ಧಾರ

ಏಕಾಏಕಿ ಪರೀಕ್ಷೆ ದಿನಾಂಕ ಪ್ರಕಟವಾಗಿದ್ದರಿಂದ ಪ್ರವೇಶಪತ್ರ ದೊರಕಿಲ್ಲವೆಂದು ಬಹುತೇಕರು ಅವಕಾಶ ವಂಚಿತರಾದ ದೂರು ಕೇಳಿಬಂದಿದ್ದವು.

Vijaya Karnataka 20 Jul 2019, 10:23 am
ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಬೋಧಕೇತರ ಹುದ್ದೆಗಳ ನೇಮಕಕ್ಕೆ ಪುನಃ ಪರೀಕ್ಷೆ ನಡೆಸಲು ಸಿಂಡಿಕೇಟ್‌ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
Vijaya Karnataka Web Exam


ಹೈಕ ಭಾಗದ 371(ಜೆ)ಗೆ ಸಂಬಂಧಿಸಿ ಖಾಲಿ ಇರುವ ಬೋಧಕೇತರ ಹುದ್ದೆಗಳ ಭರ್ತಿಗೆ ಕಳೆದ ಏಪ್ರಿಲ್‌, ಮೇನಲ್ಲಿ ನೇಮಕಾತಿ ನಡೆದಿತ್ತು. ಹೈಕ ಭಾಗದ 4500ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಏಕಾಏಕಿ ಪರೀಕ್ಷೆ ದಿನಾಂಕ ಪ್ರಕಟವಾಗಿದ್ದರಿಂದ ಪ್ರವೇಶಪತ್ರ ದೊರಕಿಲ್ಲವೆಂದು ಬಹುತೇಕರು ಅವಕಾಶ ವಂಚಿತರಾದ ದೂರು ಕೇಳಿಬಂದಿದ್ದವು.

ಮೇ31 ರಿಂದ ಜೂನ್‌3ರವರೆಗೆ ನಡೆದ ಪರೀಕ್ಷೆಗೆ ಶೇ.35ರಷ್ಟು ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಆದ್ದರಿಂದ ಪರೀಕ್ಷಾ ವಂಚಿತ ಅಭ್ಯರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು ಬೋಧಕೇತರ ಹುದ್ದೆಗಳಿಗೆ ಪುನಃ ಪರೀಕ್ಷೆ ನಡೆಸುವಂತೆ ವಿವಿ ಕುಲಪತಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಸಮಿತಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿದ ಬಳಿಕ ಪುನಃ ಪರೀಕ್ಷೆ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಈ ನಡುವೆ ಈಗಾಗಲೇ ಪರೀಕ್ಷೆ ಎದುರಿಸಿದ್ದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅನಿವಾರ್ಯತೆಯೂ ಎದುರಾಗಿದೆ.

ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಿಂಡಿಕೇಟ್‌ ಸಭೆಯಲ್ಲಿ ಪುನಃ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸಭೆ ತೀರ್ಮಾನದ ಕುರಿತು ರಾಜ್ಯ ಸರಕಾರದ ಅನುಮತಿಗೆ ಸಲ್ಲಿಸಲಾಗುವುದು.
ತುಳಸಿಮಾಲ, ಕುಲಸಚಿವೆ, ವಿಎಸ್‌ಕೆವಿವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌