ಶಿಕ್ಷಣ ಸಚಿವ ಬಿ ಸಿ ನಾಗೇಶ್ರಿಂದ SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್?
ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಸರಿಯಾಗಿ ಮಕ್ಕಳಿಗೆ ಪಾಠ ಬೋಧನೆ ಮಾಡಲು ಸಮಸ್ಯೆ ಆಗುತ್ತಿರುವ ಹಿನ್ನೆಲೆ ಶೇಕಡ 20 ರಷ್ಟು ಪಠ್ಯವನ್ನು ಕಡಿತಗೊಳಿಸಿ, ಇಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.
Vijaya Karnataka Web 26 Nov 2021, 2:02 pm
ಹೈಲೈಟ್ಸ್:
- ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.
- ಶೇಕಡ.20 ಪಠ್ಯಕ್ರಮ ಕಡಿತ ಸಾಧ್ಯತೆ.
- ಬಿ ಸಿ ನಾಗೇಶ್ ರಿಂದ ಇಂದು ಘೋಷಣೆ ಆಗಬಹುದು.
ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷವು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದಲ್ಲಿ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ಕಡಿಮೆ ಶೈಕ್ಷಣಿಕ ಅವಧಿಯ ಹಿನ್ನೆಲೆಯಲ್ಲಿ ಶಿಕ್ಷಕರು ಬೇಗ ಬೇಗ ಪಠ್ಯಕ್ರಮ ಮುಗಿಸಬೇಕಾದ ಹಿನ್ನೆಲೆ, ಮಕ್ಕಳಿಗೆ ಪಾಠಗಳು ಸರಿಯಾಗಿ ಅರ್ಥವಾಗದ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು ವಿದ್ಯಾರ್ಥಿಗಳಿಗೆ ಇಂದು ಗುಡ್ ನ್ಯೂಸ್ ಒಂದನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೌದು, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಇಬ್ಬರಿಗೂ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಶೇಕಡ.20 ರಷ್ಟು ಪಠ್ಯವನ್ನು ಕಡಿತಗೊಳಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಈ ಕುರಿತು ಇಂದು ಅಧಿಕೃತ ಪ್ರಕಟಣೆ ಹೊರಡುವ ಸಾಧ್ಯತೆ ಇದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಸಂಜೆ ವೇಳೆಗೆ ಎಸ್ಎಸ್ಎಲ್ಸಿ ಪಠ್ಯಕ್ರಮದಲ್ಲಿ ಶೇಕಡ 20 ರಷ್ಟು ಕಡಿತಗೊಳಿಸುವ ಕುರಿತು ಅಧಿಕೃತ ಆದೇಶ ನೀಡುವ ಅವಕಾಶ ಇದೆ. ಆದರೆ ಪಠ್ಯಕ್ರಮದಲ್ಲಿ ಕೊನೆಯ ಶೇಕಡ.20 ಪಠ್ಯಗಳನ್ನು ಕೈಬಿಡಲಾಗುತ್ತದೋ ಅಥವಾ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಹಂತದಲ್ಲಿ ತಿಳಿಯಬೇಕಾದ ಪ್ರಾಮುಖ್ಯತೆಯ ವಿಷಯಗಳನ್ನು ಆಧರಿಸಿ ಶೇಕಡ.20 ಪಠ್ಯಕ್ರಮವನ್ನು ಕೈಬಿಡಲಾಗುತ್ತದೋ ಎಂದು ಕಾದುನೋಡಬೇಕಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಸಂಜೆ ವೇಳೆಗೆ ಎಸ್ಎಸ್ಎಲ್ಸಿ ಪಠ್ಯಕ್ರಮದಲ್ಲಿ ಶೇಕಡ 20 ರಷ್ಟು ಕಡಿತಗೊಳಿಸುವ ಕುರಿತು ಅಧಿಕೃತ ಆದೇಶ ನೀಡುವ ಅವಕಾಶ ಇದೆ. ಆದರೆ ಪಠ್ಯಕ್ರಮದಲ್ಲಿ ಕೊನೆಯ ಶೇಕಡ.20 ಪಠ್ಯಗಳನ್ನು ಕೈಬಿಡಲಾಗುತ್ತದೋ ಅಥವಾ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಹಂತದಲ್ಲಿ ತಿಳಿಯಬೇಕಾದ ಪ್ರಾಮುಖ್ಯತೆಯ ವಿಷಯಗಳನ್ನು ಆಧರಿಸಿ ಶೇಕಡ.20 ಪಠ್ಯಕ್ರಮವನ್ನು ಕೈಬಿಡಲಾಗುತ್ತದೋ ಎಂದು ಕಾದುನೋಡಬೇಕಿದೆ.