ಆ್ಯಪ್ನಗರ

ತೆಲಂಗಾಣದ ವಿದ್ಯಾರ್ಥಿ ಗಳಿಸಿದ್ದು 100ಕ್ಕೆ 99, ಶಿಕ್ಷಕಿ ಕೊಟ್ಟಿದ್ದು 0 ಅಂಕ!

ಇತ್ತೀಚೆಗೆ ತೆಲಂಗಾಣ ಪಿಯು ಪರೀಕ್ಷಾ ಫಲಿಲಾಂಶ ವ್ಯತ್ಯಯಗೊಂಡ ಹಿನ್ನೆಲೆ ಒಂದೇ ವಾರದಲ್ಲಿ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Indiatimes 29 Apr 2019, 2:57 pm
ಹೈದರಾಬಾದ್‌: ತೆಲಂಗಾಣದಲ್ಲಿ ಕೆಲವು ಶಿಕ್ಷಕರು ಅಕ್ಷರಶಃ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಮೌಲ್ಯಮಾಪಕಿಯೊಬ್ಬರು 100 ಅಂಕಗಳಿಗೆ 99 ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಗೆ 0 ಅಂಕ ನೀಡಿದ್ದಾರೆ.
Vijaya Karnataka Web Exam


ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನವ್ಯಾ ಮಧ್ಯಂತರ ಪರೀಕ್ಷೆಯಲ್ಲಿ 100ಕ್ಕೆ 99 ಅಂಕ ಗಳಿಸಿದ್ದಳು. ಆದರೆ ಮೌಲ್ಯಮಾಪಕಿ ಉಮಾ ದೇವಿ 0 ಅಂಕಗಳನ್ನು ನೀಡಿ ಫೇಲ್‌ ಮಾಡಿದ್ದರು. ಶಿಕ್ಷಕಿಯ ತಪ್ಪಿಗೆ ತೆಲಂಗಾಣ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು ಅಮಾನತುಗೊಳಿಸಿ, 5,000 ರೂ. ದಂಡ ವಿಧಿಸಿದ್ದಾರೆ. ಶಾಲೆಯಿಂದಲೂ ಶಿಕ್ಷಕಿಯನ್ನು ತೆಗೆದು ಹಾಕಲಾಗಿದೆ.

ಇದಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆಯು ಮತ್ತೊಬ್ಬ ಶಿಕ್ಷಕ ವಿಜಯ್‌ ಕುಮಾರ್‌ ಎಂಬುವವರನ್ನು ಅಮಾನತುಗೊಳಿಸಿದೆ. ತನಿಖೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜಯ್‌ ಕುಮಾರ್‌ ಅವರನ್ನು ಇಂತಹ ದೊಡ್ಡ ತಪ್ಪು ನಡೆದಿದ್ದರೂ ಗಮನಕ್ಕೆ ತಂದಿಲ್ಲ ಎಂಬ ಕಾರಣ ನೀಡಿ ಅಮಾನತುಗೊಳಿಸಿದ್ದಾರೆ.

ತೆಲಂಗಾಣದಲ್ಲಿ ಪರೀಕ್ಷೆ ಫಲಿತಾಂಶದ ನಂತರ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕಳವಳಕಾರಿ ಅಂಶವಾಗಿದೆ. ಈ ನಿಟ್ಟಿನಲ್ಲಿ ತೆಲಂಗಾಣ ಶಿಕ್ಷಣ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಶಿಕ್ಷಕರು ಬೇಜವಾಬ್ದಾರಿತನದಿಂದ ಮಾಡುವ ಎಡವಟ್ಟುಗಳು ವಿದ್ಯಾರ್ಥಿಗಳ ಜೀವನದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿ ಹೇಳಬೇಕಿದೆ.

ಇತ್ತೀಚೆಗೆ ತೆಲಂಗಾಣ ಪಿಯು ಪರೀಕ್ಷಾ ಫಲಿಲಾಂಶ ವ್ಯತ್ಯಯಗೊಂಡ ಹಿನ್ನೆಲೆ ಒಂದೇ ವಾರದಲ್ಲಿ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಯು ಪರೀಕ್ಷಾ ಮಂಡಳಿ ಎಡವಟ್ಟಿನಿಂದ ಫಲಿತಾಂಶದಲ್ಲಿ ಆದ ಏರುಪೇರೇ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣ ಎಂಬ ಆರೋಪ ತೀವ್ರವಾಗಿ ಕೇಳಿಬಂದಿದ್ದು, ಸಾಕಷ್ಟು ಪ್ರತಿಭಟನೆಗಳು ರಾಜ್ಯದಲ್ಲಿ ನಡೆದಿವೆ.

ಪಿಯು ಫಲಿತಾಂಶದಲ್ಲಿ ವ್ಯತ್ಯಯ: ಒಂದೇ ವಾರದಲ್ಲಿ 19 ವಿದ್ಯಾರ್ಥಿಗಳ ಆತ್ಮಹತ್ಯೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌