ಆ್ಯಪ್ನಗರ

KCET Counselling 2023 : ಸಿಇಟಿ ರ‍್ಯಾಂಕ್ ಪಡೆದ ವಿಶೇಷಚೇತನ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆಗೆ ದಿನಾಂಕ, ಪಟ್ಟಿ ಪ್ರಕಟ..

ಸಿಇಟಿ-2023ರಲ್ಲಿ ರ್ಯಾಂಕ್ ಪಡೆದಿರುವ ವಿಶೇಷಚೇತನ ಅಭ್ಯರ್ಥಿಗಳಿಗೆ ಅಂಗವಿಕಲತೆ ಅರ್ಹತೆಯನ್ನು ಪರೀಕ್ಷಿಸಲು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿನಾಂಕವನ್ನು ಪ್ರಕಟಿಸಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳಿಗೆ ನಿಗದಿಪಡಿಸಿದ ದಿನಾಂಕದಂದೇ ವೈದ್ಯಕೀಯ ತಪಾಸಣೆಗೆ ಹಾಜರಾಗುವಂತೆ ಕೆಇಎ ತಿಳಿಸಿದೆ.

Authored byಮುರಳಿಧರ. ಯಡಚಿ | Vijaya Karnataka Web 21 Jun 2023, 10:32 am

ಹೈಲೈಟ್ಸ್‌:

  • ವಿಶೇಷಚೇತನ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆ.
  • ವೈದ್ಯಕೀಯ ತಪಾಸಣೆಗೆ ದಿನಾಂಕ ಪ್ರಕಟ.
  • ದ್ಯಾರ್ಥಿಗಳು ಸಲ್ಲಿಸಬೇಕಾದ ದಾಖಲೆಗಳ ಮಾಹಿತಿ ಇಲ್ಲಿದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web KCET 2023 KEA releases schedule for medical examination for physically challenged candidates
ಸಿಇಟಿ ರ‍್ಯಾಂಕ್ ಪಡೆದ ವಿಶೇಷಚೇತನ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆಗೆ ದಿನಾಂಕ, ಪಟ್ಟಿ ಪ್ರಕಟ..PC-VK
2023-24ನೇ ಸಾಲಿನ ಸಿಇಟಿ-2023ರಲ್ಲಿ ರ್ಯಾಂಕ್ ಪಡೆದಿರುವ ವಿಶೇಷಚೇತನ ಅಭ್ಯರ್ಥಿಗಳಿಗೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಮಾಹಿತಿಯೊಂದನ್ನ ನೀಡಿದೆ. ವಿಶೇಷಚೇತನ ಅಭ್ಯರ್ಥಿಗಳಿಗೆ ವೈದೈಕೀಯ ತಪಾಸಣೆ ನಡೆಸಲು ದಿನಾಂಕವನ್ನು ಪ್ರಕಟಿಸಿದೆ.
ಸಿಇಟಿ-2023ರಲ್ಲಿ ರ್ಯಾಂಕ್ ಪಡೆದಿರುವ ವಿಶೇಷಚೇತನ ಅಭ್ಯರ್ಥಿಗಳಿಗೆ ವಿಶೇಷಚೇತನ ಅರ್ಹತೆಯನ್ನು ಪರೀಕ್ಷಿಸಲು ದಿನಾಂಕ 26-06-2023, 27-06-2023 ಮತ್ತು 28-06-2023 ರಂದು ವೈದ್ಯರ ಸಮಿತಿಯಿಂದ ವೈದ್ಯಕೀಯ ತಪಾಸಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇಲ್ಲಿ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕಾದ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಅವರ ಹೆಸರಿನ ಮುಂದೆ ನಿಗದಿಪಡಿಸಿರುವ ದಿನಾಂಕಗಳಂದು ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕು ಎಂದು ತಿಳಿಸಿದೆ.

2023ರ ಸಿಇಟಿ ಕೌನ್ಸಿಲಿಂಗ್'ನಲ್ಲಿ ಆಯ್ಕೆ ಮಾಡಬಹುದಾದ ರಾಜ್ಯದ ಟಾಪ್ 20 ಇಂಜಿನಿಯರಿಂಗ್ ಕಾಲೇಜುಗಳು ಇಲ್ಲಿವೆ..
ದೈಹಿಕ ವಿಕಲಚೇತನ ವಿಶೇಷ ಪ್ರವರ್ಗದ ಕೋಟಾದ ಅಡಿಯಲ್ಲಿ ಸೀಟನ್ನು ಕೋರುವ ವಿದ್ಯಾರ್ಥಿಗಳು, ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಸುವ ವೈದ್ಯಕೀಯ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕಿರುತ್ತದೆ. ವೈದ್ಯಕೀಯ ಸಮಿತಿಯು ಪರಿಶೀಲಿಸಿ ನೀಡುವ ವಿಶೇಷಚೇತನರ ಅರ್ಹತೆ ವಿಷಯದಲ್ಲಿ ವೈದ್ಯಕೀಯ ಸಮಿತಿಯ ನಿರ್ಧಾರವೇ ಅಂತಮವಾಗಿರುತ್ತದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ವೈದ್ಯಕೀಯ ತಪಾಸಣೆಯಲ್ಲಿ ನಿಯಮಾನುಸಾರ ಅರ್ಹತೆ ಪಡೆಯುವ ಅಭ್ಯರ್ಥಿಗಳು ಮಾತ್ರ ವಿಶೇಷಚೇತನ ಕೋಟದ ಅಡಿಯಲ್ಲಿ ಸೀಟು ಪಡೆಯಲು ಪರಿಗಣಿಸಲಾಗುವುದು ಎಂದು ಕೆಇಎ ತಿಳಿಸಿದೆ.

KCET 2023: ರಾಜ್ಯದಲ್ಲಿರುವ ಟಾಪ್ ಪಶುವೈದ್ಯಕೀಯ ಕಾಲೇಜುಗಳು, ಕೋರ್ಸ್‌ಗಳು, ಶುಲ್ಕ ಸೇರಿದಂತೆ ಇತರೆ ಮಾಹಿತಿ ಇಲ್ಲಿದೆ..
ವೈದ್ಯಕೀಯ ಪರೀಕ್ಷೆಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು
  • ಸಿಇಟಿ-2023ಕ್ಕೆ ಭರ್ತಿ ಮಾಡಿ ಅಂತಿಮವಾಗಿ ಸಲ್ಲಿಸಿರುವ ಅರ್ಜಿ ಪ್ರತಿ.
  • ಸಿಇಟಿ-2023ರ ಮೂಲ ಪ್ರವೇಶ ಪ್ರತಿ.
  • ಯುಡಿಐಡಿ ಕಾರ್ಡ್.
  • ಮಾನ್ಯತೆ ಇರುವ ಫೋಟೋ ಇರುವ ಯಾವುದಾದರಯ ಒಂದು ಗುರುತಿನ ಚೀಟಿ (ಡ್ರೈವಿಂಗ್ ಲೈಸೆನ್ಸ್/ಪಾಸ್‌ಪೋರ್ಟ್/ಆಧಾರ್ ಕಾರ್ಡ್/ಪಾನ್ ಕೋರ್ಡ್/ ಚುನಾವಣಾ ಗುರುತಿನ ಚೀಟಿ).
  • ಕಿವುಡುತನ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು, ಕಡ್ಡಾಯವಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮೈಸೂರು / ನಿಮ್ಹಾನ್ಸ್ ಬೆಂಗಳೂರು/ ಮಣಿಪಾಲ್ ಆಸ್ಪತ್ರೆ / ಸರ್ಕಾರಿ ವಾಕ್ ಮತ್ತು ಶ್ರವಣ ಸಂಸ್ಥೆ, ಲಿಂಗರಾಜಪುರಂ, ಬೆಂಗಳೂರು, ಇಲ್ಲಿಂದ ಪಡೆದ ಬಿಎಸ್‌ಇಆರ್( ಬ್ರೈನ್ ಸ್ಟೆಮ್ ಎವೋಕ್ಡ್ ರೆಸ್ಪಾನ್ಸ್) ಇತ್ತೀಚಿನ PTA+BERA Audiometry report ಶ್ರವಣಮಾಪನ ವರದಿ.
  • ಕರ್ನಾಟಕ ರಾಜ್ಯದಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಸಂಬಂಧಪಟ್ಟ ವಿಕಲತೆಯ ಕ್ಷೇತ್ರದಲ್ಲಿ ಸಕ್ಷಮರಾದ ವೈದ್ಯರು ನೀಡಿರುವ ವೈದ್ಯಕೀಯ ಪ್ರಮಾಣಪತ್ರ.
KCET 2023 : ಬಿ ಫಾರ್ಮ್,ಡಿ ಫಾರ್ಮ್ ಸೇರಬಯಸುವವರಿಗೆ ರಾಜ್ಯದ ಟಾಪ್ ಫಾರ್ಮಸಿ ಕಾಲೇಜುಗಳ ಪಟ್ಟಿ ಇಲ್ಲಿದೆ..undefined undefined
ಲೇಖಕರ ಬಗ್ಗೆ
ಮುರಳಿಧರ. ಯಡಚಿ
" ಲೇಖಕರ ವಿವರ: ಮುರಳೀಧರ ಯಡಚಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 5 ವರ್ಷ 6 ತಿಂಗಳ ಅನುಭವ ಹೊಂದಿದ್ದಾರೆ. ಅವರು ಕ್ರೀಡೆ, ರಾಜಕೀಯ, ದಿನನಿತ್ಯದ ಅಪ್‌ಡೇಟ್‌ ಸುದ್ದಿ ಮತ್ತು ಶಿಕ್ಷಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ, ಕಳೆದ 11 ತಿಂಗಳಿಂದ ಶಿಕ್ಷಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುರಳೀಧರ ಯಡಚಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಪ್ರಮುಖ ಸುದ್ದಿಗಳನ್ನು ಬ್ರೇಕ್‌ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ಮುರಳೀಧರ ಯಡಚಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಮುರಳೀಧರ ಯಡಚಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಕ್ರಿಕೆಟ್ ಆಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಅವರ ಉತ್ತಮ ಗುಣಮಟ್ಟದ ಕೆಲಸಕ್ಕೆ ಈ ಹವ್ಯಾಸಗಳು ಸಹಾಯಕವಾಗಿವೆ. ಒಟ್ಟಾರೆ ಹೇಳುವುದಾದರೆ, ಮುರಳೀಧರ ಯಡಚಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. "... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌