ಭಾರತೀಯ ನೌಕಾಸೇನೆಯ ಕರ್ನಾಟಕ ವ್ಯಾಪ್ತಿಯ ಮುಖ್ಯಸ್ಥ ಯಾರು ಗೊತ್ತೆ?
ಭಾರತೀಯ ನೌಕಾಸೇನೆಯ ಕರ್ನಾಟಕ ವ್ಯಾಪ್ತಿಯ ಮುಖ್ಯಸ್ಥರಾಗಿ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅವರು ಶನಿವಾರ ಅಧಿಧಿಕಾರ ಸ್ವೀಕರಿಸುವ ಮೂಲಕ ಸುದ್ದಿಯಾಗಿದ್ದಾರೆ.
Vijaya Karnataka 2 Apr 2019, 6:40 pm
ಭಾರತೀಯ ನೌಕಾಸೇನೆಯ ಕರ್ನಾಟಕ ವ್ಯಾಪ್ತಿಯ ಮುಖ್ಯಸ್ಥರಾಗಿ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅವರು ಶನಿವಾರ ಅಧಿಧಿಕಾರ ಸ್ವೀಕರಿಸುವ ಮೂಲಕ ಸುದ್ದಿಯಾಗಿದ್ದಾರೆ.
ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆದ ಪರೇಡ್ ಸಮಾರಂಭದಲ್ಲಿ ನೌಕಾ ಸೈನಿಕರಿಂದ ಗೌರವ ರಕ್ಷೆ ಸ್ವೀಕರಿಸಿದ ಮಹೇಶ ಸಿಂಗ್ ಅವರಿಗೆ ನಿಕಟಪೂರ್ವ ಮುಖ್ಯಸ್ಥ ರಿಯರ್ ಅಡ್ಮಿರಲ್ ಕೆ. ಕೆ. ಕುಮಾರ್ ಅವರು ಅಧಿಧಿಕಾರ ಹಸ್ತಾಂತರಿಸಿದರು.
ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಅಧ್ಯಯನ ಮಾಡಿರುವ ಮಹೇಶ ಸಿಂಗ್ 1987ರಲ್ಲಿ ಭಾರತೀಯ ನೌಕಾಪಡೆಗೆ ನೇಮಕಗೊಂಡಿದ್ದಾರೆ. ನೌಕಾಸೇನೆಯ ನೇವಿಗೇಶನ್ ಅಂಡ್ ಡೈರೆಕ್ಷನ್ ವಿಭಾಗದ ವಿಶೇಷ ತಜ್ಞರಾಗಿರುವ ಅವರು ಐಎನ್ಎಸ್ ಅಕ್ಷಯ್ ಮತ್ತು ಐಎನ್ಎಸ್ ಜ್ಯೋತಿ ಯುದ್ಧನೌಕೆಗಳ ನಿಯೋಜನೆಗೊಳಿಸುವ ತಂಡದ ಭಾಗವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆಪರೇಶನ್ ವಿಜಯ್ ಕಾರ್ಯಾಚರಣೆಯಲ್ಲಿ ಐಎನ್ಎಸ್ ನಿರ್ಘಾತ್ ಯುದ್ಧ ನೌಕೆಯ ಕ್ಷಿಪಣಿ ವಿಭಾಗದ ಕಮ್ಯಾಂಡ್ ಆಗಿ ಮತ್ತು ಐಎನ್ಎಸ್ ಜಲಾಶ್ವದ ಮುಖ್ಯಸ್ಥರಾಗಿ ಮಾರಿಷಸ್ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಅಲ್ಲದೇ ನೌಕಾ ಕಾರ್ಯಾಚರಣೆ ನಿರ್ದೇಶನಾಲಯದ ಜಂಟಿ ನಿರ್ದೇಶಕ, ನೌಕಾ ಸಿಬ್ಬಂದಿ ವಿಭಾಗದ ಪ್ರಧಾನ ನಿರ್ದೇಶಕ, ಕೊಚ್ಚಿನ್ನ ನೇವಿಗೇಶನ್ ಅಂಡ್ ಡೈರೆಕ್ಷನ್ ಶಾಲೆಯ ಮುಖ್ಯಸ್ಥ, ವಿಶಾಖಪಟ್ಟಣದ ಯುದ್ಧ ನೌಕಾ ಕೇಂದ್ರದ ಮುಖ್ಯಸ್ಥರ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ.
ನೌಕಾಪಡೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ಸಲ್ಲಿಸಿದವರಿಗೆ ನೀಡುವ ನೌ ಸೇನಾ ಪದಕಕ್ಕೂ ಭಾಜನರಾಗಿದ್ದಾರೆ.