ಇಂಗ್ಲೆಂಡ್ನ ಸ್ಥಳೀಯ ಸಂಸ್ಥೆ ಕೌನ್ಸಿಲ್ಗೆ ಆಯ್ಕೆಯಾದ ಇಬ್ಬರು ಕನ್ನಡಿಗರು ಯಾರು ಗೊತ್ತೆ?
ವೈದ್ಯ ಡಾ.ಕುಮಾರ್ ಟಿ. ನಾಯ್ಕ ಅವರು ಇಂಗ್ಲೆಂಡ್ನ ಸ್ಥಳೀಯ ಸಂಸ್ಥೆ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ.
Vijaya Karnataka 5 May 2019, 5:00 am
ವೈದ್ಯ ಡಾ.ಕುಮಾರ್ ಟಿ. ನಾಯ್ಕ ಅವರು ಇಂಗ್ಲೆಂಡ್ನ ಸ್ಥಳೀಯ ಸಂಸ್ಥೆ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕು ಕೆಂಚಾಪುರ ತಾಂಡಾದ ತಿಪ್ಪೇಸ್ವಾಮಿ ನಾಯ್ಕ -ಶಾಂತಾಬಾಯಿ ದಂಪತಿ ಪುತ್ರ ಡಾ. ಕುಮಾರ ನಾಯ್ಕ ಅವರು ಕನ್ಸರ್ವೇಟಿವ್ ಪಕ್ಷದಿಂದ ಸ್ಪರ್ಧಿಸಿ ಲೇಬರ್ ಪಕ್ಷದ ಅಭ್ಯರ್ಥಿ ವಿರುದ್ಧ 1160 ಮತಗಳಿಂದ ಗೆಲುವು ಸಾಧಿಸಿದ್ದಾರೆ. ತಿಪ್ಪೇಸ್ವಾಮಿ ದಂಪತಿ ದಾವಣಗೆರೆ ನಿವಾಸಿಗಳು. ಹಾಗಾಗಿ, ಕುಮಾರ ನಾಯ್ಕ್ ಹುಟ್ಟಿ ಬೆಳೆದಿದ್ದು , ಎಸ್ಎಸ್ಎಲ್ಸಿವರೆಗೆ ಓದಿದ್ದು ದಾವಣಗೆರೆಯಲ್ಲಿ. ಶಿವಮೊಗ್ಗದಲ್ಲಿ ಪಿಯುಸಿ ಮುಗಿಸಿಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರೈಸಿದರು. ಬಳಿಕ ಡಾ. ಕುಮಾರ ನಾಯ್ಕ್ ಅವರು ಇಂಗ್ಲೆಂಡಿನ ಸ್ವಿಂಡನ್ನ್ಗೆ ತೆರಳಿ ಅಲ್ಲಿಯೇ ಮೂಳೆತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತ್ನಿ ಮೈಸೂರು ಮೂಲದ ಡಾ. ಕವಿತಾ ಅವರು ಮನೋ ವೈದ್ಯರಾಗಿದ್ದಾರೆ. ಮೈಸೂರಿನಲ್ಲಿ 2001ರಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ ಡಾ. ಕುಮಾರ ನಾಯ್ಕ ಅವರು 2003ರ ಜನವರಿಯಲ್ಲಿ ಇಂಗ್ಲೆಂಡ್ಗೆ ತೆರಳಿದ್ದಾರೆ. ಕಳೆದ 16 ವರ್ಷಗಳಿಂದ ಅಲ್ಲಿ ಕಾಯಂ ವಾಸಿಯಾಗಿ ನೆಲೆಸಿದ್ದಾರೆ. 2008ರಲ್ಲೇ ಅವರಿಗೆ ಬ್ರಿಟಿಷ್ ಪೌರತ್ವ ಸಿಕ್ಕಿದ್ದರೂ ಅವರು ನಿರಾಕರಿಸಿದ್ದಾರೆ.
ಗಮನಿಸಿ : ಸ್ವಿಂಡನ್ ಕೌನ್ಸಿಲ್ನ ಸದಸ್ಯರಾಗಿ ಇನ್ನೋರ್ವ ಕನ್ನಡಿಗ ಸುರೇಶ್ ಗಟ್ಟಾಪುರ್ ಅವರು ಕೂಡ ಆಯ್ಕೆಯಾಗಿದ್ದಾರೆ. ಇವರೂ ಕೂಡ ಕನ್ಸರ್ವೇಟಿವ್ ಪಕ್ಷ ದದಿಂದ ಆಯ್ಕೆಯಾಗಿದ್ದಾರೆ. ಸುರೇಶ್ ಕಳೆದ 13 ವರ್ಷಗಳಿಂದ ಇಂಗ್ಲೆಂಡ್ನಲ್ಲಿ ವಾಸವಾಗಿದ್ದಾರೆ. ಸುರೇಶ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಂಡೇನಹಳ್ಳಿಯ ಗ್ರಾಮದವರು.
ಗಮನಿಸಿ : ಸ್ವಿಂಡನ್ ಕೌನ್ಸಿಲ್ನ ಸದಸ್ಯರಾಗಿ ಇನ್ನೋರ್ವ ಕನ್ನಡಿಗ ಸುರೇಶ್ ಗಟ್ಟಾಪುರ್ ಅವರು ಕೂಡ ಆಯ್ಕೆಯಾಗಿದ್ದಾರೆ. ಇವರೂ ಕೂಡ ಕನ್ಸರ್ವೇಟಿವ್ ಪಕ್ಷ ದದಿಂದ ಆಯ್ಕೆಯಾಗಿದ್ದಾರೆ. ಸುರೇಶ್ ಕಳೆದ 13 ವರ್ಷಗಳಿಂದ ಇಂಗ್ಲೆಂಡ್ನಲ್ಲಿ ವಾಸವಾಗಿದ್ದಾರೆ. ಸುರೇಶ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಂಡೇನಹಳ್ಳಿಯ ಗ್ರಾಮದವರು.