ಆ್ಯಪ್ನಗರ

ಕೆ.ಶಿವಾ ರೆಡ್ಡಿಗೆ ಒಲಿದ ಸರಸ್ವತಿ ಸಮ್ಮಾನ್‌ ಪ್ರಶಸ್ತಿ

ತೆಲುಗು ಕವಿ ಕೆ.ಶಿವಾ ರೆಡ್ಡಿ ಅವರು ಪ್ರತಿಷ್ಠಿತ ಸರಸ್ವತಿ ಸಮ್ಮಾನ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Vijaya Karnataka 17 Apr 2019, 5:00 am
ತೆಲುಗು ಕವಿ ಕೆ.ಶಿವಾ ರೆಡ್ಡಿ ಅವರು ಪ್ರತಿಷ್ಠಿತ ಸರಸ್ವತಿ ಸಮ್ಮಾನ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಪಕ್ಕಾಕಿ ಒಟ್ಟಿಗಿಲೈಟ್‌ ಕವನ ಸಂಕಲನಕ್ಕೆ ಈ ಪ್ರಶಸ್ತಿ ಸಂದಿದೆ. 2016ರಲ್ಲಿ ಪ್ರಕಟವಾದ ಈ ಸಂಕಲನದಲ್ಲಿ 104 ಕವನಗಳಿವೆ. ಅಜೇಯಂ (1994), ವರ್ಷಂ ವರ್ಷಂ (1999), ಅಂತರ್‌ಜನಂ (2002) ವಿೃತ್ತಲೇಖಿನಿ (2003) ಇವರ ಪ್ರಮುಖ ಕವನ ಸಂಕಲನಗಳು. ಇವರು 1943ರಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ರೈತಾಪಿ ವರ್ಗದ ಕುಟುಂಬದಲ್ಲಿ ಜನಿಸಿದರು. ಶಿವಾ ಅವರು ತೆಲುಗು ಭಾಷೆಯ ಪ್ರಸಿದ್ಧ ಕವಿಗಳಲ್ಲಿ ಒಬ್ಬರು. ಇವರು ಹೈದರಾಬಾದ್‌ನ ವಿವೇಕ್‌ ವರ್ಧಿನಿ ಕಾಲೇಜಿನಲ್ಲಿ ಇಂಗ್ಲಿಷ್‌ ಭಾಷೆಯ ಪ್ರಾಧ್ಯಾಪಕರಾಗಿ 35 ವರ್ಷ ಸೇವೆಸಲ್ಲಿಸಿದ್ದಾರೆ. ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿಯಾದರು. ಇವರು ಆಫ್ರಿಕನ್‌ ಮತ್ತು ಯುರೋಪಿಯನ್‌ ಕವನಗಳನ್ನು ತೆಲುಗು ಭಾಷೆಗೆ ಭಾಷಾಂತರ ಮಾಡಿದ್ದಾರೆ. ಇವರ ಸಾಹಿತ್ಯ ಸೇವೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಸಿದ್ಧಾರ್ಥ ಕಲಾಪೀಟಂ ಪುರಸ್ಕಾರ, ಡಾ. ಸೋಮಸುಂದರ್‌ ಸಾಹಿತ್ಯ ಪುರಸ್ಕಾರ ಮತ್ತು ವಿಶಾಲಾ ಸಾಹಿತ್ಯ ಅವಾರ್ಡ್‌ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಇವರು ಪ್ರತೂಷಾ ಎನ್ನುವ ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದಾರೆ.
Vijaya Karnataka Web k siva reddy is a major voice in contemporary telugu poetry
ಕೆ.ಶಿವಾ ರೆಡ್ಡಿಗೆ ಒಲಿದ ಸರಸ್ವತಿ ಸಮ್ಮಾನ್‌ ಪ್ರಶಸ್ತಿ


ಸರಸ್ವತಿ ಸಮ್ಮಾನ್‌ ಬಗ್ಗೆ: 1991ರಲ್ಲಿ ಕೆ.ಕೆ ಬಿರ್ಲಾ ಫೌಂಡೇಷನ್‌ ಇದನ್ನು ಸ್ಥಾಪನೆ ಮಾಡಿತು. ಪ್ರತಿವರ್ಷ ಭಾರತೀಯ ಭಾಷೆಯಲ್ಲಿನ ಅತ್ಯುತ್ತಮ ಸಾಹಿತ್ಯ ಕೃತಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌