ಆ್ಯಪ್ನಗರ

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು.. ಇಲ್ಲಿವೆ ಸಿಂಪಲ್‌ ಟಿಪ್ಸ್‌

ಇನ್ನೆನ್ನು ಕೆಲವೆ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶಗಳು ಬರಲಿವೆ. ಫಲಿತಾಂಶದ ನಂತರ ಉನ್ನತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಮತ್ತು ಹಲವು ಹುದ್ದೆಗಳನ್ನು ಪಡೆಯಲು ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಎರಡು ಫಲಿತಾಂಶಗಳು ಬದುಕಿನ ಮಹತ್ವದ ಘಟ್ಟಗಳಾಗಿವೆ.

Vijaya Karnataka Web 18 May 2022, 6:45 pm
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು, ಉನ್ನತ ಶ್ರೇಣಿಯನ್ನು ಪಡದು ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವುದು ಎಲ್ಲಾ ವಿದ್ಯಾರ್ಥಿಗಳ ಆಸೆಯಾಗಿರುತ್ತದೆ. ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಮ ಬಹಳ ಮುಖ್ಯವಾಗಿರುತ್ತದೆ. ಒಂದಿಷ್ಟೂ ವಿದ್ಯಾರ್ಥಿಗಳಿಗೆ ಎಷ್ಟೇ ಓದಿದರೂ ತಲೆಗೇ ಹತ್ತುವುದಿಲ್ಲ ಎನ್ನುವ ಕೊರಗು ಕಾಡುತ್ತಿರುತ್ತದೆ. ಇದಕ್ಕೆ ಮುಖ್ಯ ಕಾರಣ ಏಕಾಗ್ರತೆ ಕೊರತೆ ಎನ್ನಲಾಗುತ್ತದೆ.
Vijaya Karnataka Web ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು.. ಇಲ್ಲಿವೆ ಟಿಪ್ಸ್‌
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು.. ಇಲ್ಲಿವೆ ಟಿಪ್ಸ್‌


ಇನ್ನೆನ್ನು ಕೆಲವೆ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶಗಳು ಬರಲಿವೆ. ಫಲಿತಾಂಶದ ನಂತರ ಉನ್ನತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಮತ್ತು ಹಲವು ಹುದ್ದೆಗಳನ್ನು ಪಡೆಯಲು ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಎರಡು ಫಲಿತಾಂಶಗಳು ಬದುಕಿನ ಮಹತ್ವದ ಘಟ್ಟಗಳಾಗಿವೆ.

ಈ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡ ಸಹಜವಾಗಿಯೇ ಇರುತ್ತದೆ. ಹೀಗಾಗಿ ಈ ಸಮಯದಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವ ಬದಲು ಕೆಲವು ವಿಧಾನಗಳನ್ನು ಅನುಸರಿಸಿಕೋಂಡು ಓದಿದರೆ ಉತ್ತಮ ಫಲಿತಾಂಶ ಪಡೆಯಲು ನೆರವಾಗುತ್ತದೆ. ನಾವು ಈ ಲೇಖನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಎನ್ನುವ ಕುರಿತು ಕೆಲವು ಟಿಪ್ಸಗಳನ್ನ ನೀಡಿದ್ದೇವೆ.

ಪಿಯು ಮಂಡಳಿಯಿಂದ ಮಾರ್ಗಸೂಚಿ ಬಿಡುಗಡೆ: ಮೇ 20 ರಿಂದ ಪಿಯು ಪ್ರವೇಶ ಆರಂಭ
ಓದುವಾಗ ಆಗಾಗ ವಿರಾಮ ತೆಗೆದುಕೊಳ್ಳಿ

ದೀರ್ಘಕಾಲ ಕೊಂಚವೂ ವಿಶ್ರಾಂತಿ ಇಲ್ಲದೆ ಗಂಟೆಗಳ ಕಾಲ ಅಧ್ಯಯನ ಮಾಡುವುದು ಅಷ್ಟು ಒಳ್ಳೆಯದಲ್ಲ. ಇದು ಏಕಾಗ್ರತೆಗೆ ಹಾನಿಯನ್ನುಂಟು ಮಾಡುವ ಚಾನ್ಸ್‌ ಜಾಸ್ತಿ ಇರುತ್ತದೆ. ಇದರಿಂದ ನೆನಪಿನ ಶಕ್ತಿ ಕುಂದುತ್ತದೆ. ಹೀಗಾಗಿ ಪ್ರತಿ ಗಂಟೆಗೊಮ್ಮೆ ಕೆಲ ಕಾಲ ವಿರಾಮ ತೆಗೆದುಕೊಳ್ಳುವುದು ಉತ್ತಮ.

ವಿಷಯಕ್ಕ ತಕ್ಕ ಹಾಗೆ ಸಮಯಾವಕಾಶ ಕೊಡಿ

ದಿನಕ್ಕೆ ಒಂದೇ ವಿಷಯವನ್ನು ಓದುವ ಬದಲು ವಿಷಯಕ್ಕ ತಕ್ಕ ಹಾಗೆ ಸಮಯಾವಕಾಶ ಕೊಡಿ. ಹೆಚ್ಚು ಹೆಚ್ಚು ಪುನರಾವರ್ತನೆ ಮಾಡಕೊಳ್ಳಿ. ನಿಮ್ಮ ಪುನರಾವರ್ತನೆ ಯೋಜನೆಯಲ್ಲಿ ಪ್ರತಿಯೊಂದು ವಿಷಯವು ದೃಢವಾಗಿ ಒಳಗೊಂಡಿದೆ ಎನ್ನುವುದನ್ನ ಖಚಿತ ಪಡಿಸಿಕೊಳ್ಳಲು ನೀವು ಪ್ರತಿಯೊಂದು ವಿಷಯಕ್ಕೆ ಸರಿಯಾದ ಸಮಯವನ್ನು ಮೀಸಲಿಡಿ.

Karnataka SSLC Result 2022 Tomorrow: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸಮಯ ಇದೀಗ ಪ್ರಕಟ
ಮೊಬೈಲ್‌ ಬಳಕೆಯಿಂದ ದೂರವಿರಿ

ಪದೇ ಪದೇ ಬರುವ ಮೇಸಜ್‌ಗಳ ಸದ್ದು, ಆಗಾಗ ಬರುವ ಫೋನ್‌ಕಾಲ್‌ಗಳು ನಿಮ್ಮ ಏಕಾಗ್ರತೆಯನ್ನು ಹಾಳುಮಾಡಬಹುದು. ಹೀಗಾಗಿ ಓದುವ ಸಮಯದಲ್ಲಿ ಮೊಬೈಲ್‌ ಬಳಕೆಯಿಂದ ಸ್ವಲ್ಪ ದೂರವಿದ್ದರೆ ಒಳಿತು. ಇಂಟರ್‌ನೆಟ್‌ ಸಹಾಯಬೇಕಾದಾಗ ಮಾತ್ರ ಮೊಬೈಲ್‌ ಬಳಸಿ.

ದಿನಚರಿ ಹಾಕಿಕೊಳ್ಳಿ

ನಿಮ್ಮ ಓದಿಗೆ ಹೇಗೆ ಸಹಾಯವಾಗುತ್ತದೆ ಹಾಗೆ ದಿನಚರಿ ಹಾಕಿಕೊಳ್ಳಿ. ಅಧ್ಯಯನ ವಿಷಯಕ್ಕೆ ಬಂದಾಗ, ವೈಯಕ್ತಿಕ ಸೌಕರ್ಯ, ಮನಸ್ಸಿನ ಶಾಂತಿ ಮತ್ತು ಅನುಕೂಲವು ಮುಖ್ಯವಾಗಿದೆ. ಹೀಗಾಗಿ ಆಟ, ಊಟ, ಓದು, ವ್ಯಾಯಾಮ ಸೇರಿದಂತೆ ಇನ್ನಿತರ ದಿನಚರಿ ಕೆಲಸಗಳಿಗಾಗಿ, ದಿನಚರಿ ಹಾಕಿಕೊಂಡರೆ ಉತ್ತಮ.

ಹಳೆಯ ಪ್ರಶ್ನೆ ಪತ್ರಿಕೆ ಬಿಡಿಸಿ

ನೀವು ಪರೀಕ್ಷೆಗಳಲ್ಲಿ ಎದುರಿಸಹುದಾದ ಪ್ರಶ್ನೆಗಳ ಮಾದರಿ ಮತ್ತು ಪರಿಕಲ್ಪನೆಗಳ ಬಗ್ಗೆ ಅರಿಯಲು ಹಿಂದಿನ ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಇದರಿಂದ ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳು ಬರಬಹುದು ಎನ್ನುವ ಸಂಪೂರ್ಣ ಕಲ್ಪನೆ ನಿಮ್ಮ ಅರಿವಿಗೆ ಬರುತ್ತದೆ. ಹಾಗಾಗಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಬಿಡಿಸುವುದು ಉತ್ತಮ.
ಪಿಯು ಪ್ರವೇಶಕ್ಕೆ ಸಮವಸ್ತ್ರ ಕಡ್ಡಾಯ : ಜೂನ್‌ 9 ರಿಂದ ತರಗತಿ ಆರಂಭ

ಸಾಕಷ್ಟು ವಿಶ್ರಾಂತಿ ಪಡೆಯಿರಿ

ಮನುಷ್ಯನ ದೇಹಕ್ಕೆ ಆಹಾರ, ನಿದ್ದೆ, ವ್ಯಾಯಮ ಬಹಳ ಮುಖ್ಯ. ಹೀಗಾಗಿ ಸರಿಯಾದ ಸಮಯದಲ್ಲಿ ಆಹಾರ ಸೇವಿಸಿ, ಚೆನ್ನಾಗಿ ನಿದ್ರೆ ಮಾಡಿ. ಹಾಗೆಯೆ ದಿನಕ್ಕೆ ಕನಿಷ್ಠ 15-20 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಕನಿಷ್ಠ ದಿನಕ್ಕೆ 6-8 ಗಂಟೆ ನಿದ್ರೆ ಮಾಡಿ.

ಗೊಂದಲ ಮಾಡಿಕೊಳ್ಳಬೇಡಿ

ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ತಯಾರಿ ನಡೆಸುವಾಗ ಆತ್ಮವಿಶ್ವಾಸದಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ನಿಮ್ಮಲ್ಲಿ ನೀವೇ ಗೊಂದಲದ ವಾತಾವರಣ ಮಾಡಿಕೊಳ್ಳುವುದಕ್ಕಿಂತ, ಸಕಾರಾತ್ಮಕ ಮನಸ್ಥಿತಿಯಲ್ಲಿರಿ. ಇದರಿಂದ ನೀವು ಪರೀಕ್ಷೆಯ ಮೇಲೆ ಕೇಂದ್ರೀಕರಿಸಬಹುದು. ನಿಮ್ಮ ಮೇಲೆ ನಿಮಗೆ ಮೊದಲು ನಂಭಿಕೆ ಇರಲಿ. ಪ್ರಶ್ನೆಗಳಿಗೆ ಉತ್ತರಿಸುವಾಗ ಅತಿಯಾಗಿ ಯೋಚಿಸದಿರಲು ಪ್ರಯತ್ನಿಸಿ.

ಹೆಚ್ಚು ಪುನರಾವರ್ತನೆ ಇರಲಿ

ಯಾವುದೇ ಪರೀಕ್ಷೆಗೆ ಓದುವಾಗ ಸುಮ್ಮನೆ ಓದುವುದಕ್ಕಿಂತ, ಓದಿದನ್ನು ಪದೇ ಪದೇ ಪುನರಾವರ್ತನೆ ಮಾಡಿಕೊಳ್ಳಿ. ನೀವು ಓದಿರುವ ಪಾಠದಲ್ಲಿ ಕೆಲವೊಂದು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಿ. ಅದರ ಜೊತೆಗೆ ನೀವೆ ಕೆಲವು ಪ್ರಶ್ನೆಗಳನ್ನು ತಯಾರಿಸಿಕೊಂಡು ಅವುಗಳಿಗೆ ಉತ್ತರಿಸುವ ಪ್ರಯತ್ನ ಮಾಡಿ. ಆಗ ನೀವು ಓದಿರುವ ಎಲ್ಲವು ಪುನರಾವರ್ತನೆ ಆಗುತ್ತದೆ.

ಪರೀಕ್ಷೆ ಹತ್ತಿರವಿದ್ದಾಗ ಹೊಸದಾಗಿ ಓದಲು ಹೋಗಬೇಡಿ

ಪರೀಕ್ಷೆಗೂ ಮುನ್ನ ಎಲ್ಲಾ ವಿಷಗಳನ್ನು ಕವರ್‌ ಮಾಡಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ಎಷ್ಟು ಓದಿಕೊಂಡಿದ್ದಿರೋ ಅದರ ಬಗ್ಗೆ ಹೆಚ್ಚು ಗಮನ ಕೊಡಿ. ನೀವು ಯಾವುದೇ ಅಧ್ಯಾಯ ಅಥವಾ ವಿಷಯವನ್ನು ಓದದೆ ಬಿಟ್ಟಿದ್ದರೆ, ಪುನರಾವರ್ತನೆ ಹಂತದಲ್ಲಿ ಅದನ್ನು ಓದದೆ ಇರುವುದು ಉತ್ತಮ. ಉಳಿದ ವಿಷಯವನ್ನು ಕವರ್‌ ಮಾಡಿಲ್ಲ ಎಂದು ಪರೀಕ್ಷೆ ಇದ್ದಾಗ ಹೊಸದಾಗಿ ಓದಲು ಹೋಗಬೇಡಿ.

SSLC Result 2022 Karnataka Board: ವಿದ್ಯಾರ್ಥಿಗಳು ಫಲಿತಾಂಶ ಚೆಕ್‌ ಮಾಡಲು ರೋಲ್‌ ನಂಬರ್ ಎಲ್ಲಿ ಲಭ್ಯ?
ಅಣುಕ ಪರೀಕ್ಷೆ ಬರೆಯಿರಿ

ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುತ್ತಿರುವಾಗ, ಒಂದು ಅಧ್ಯಾಯ ಮುಗಿದ ಮೇಲೆ ಒಂದು ಅಣುಕು ಪರೀಕ್ಷೆಯನ್ನು ಬರೆಯಿರಿ. ಹೀಗೆ ಅಣುಕು ಪರೀಕ್ಷೆ ಬರೆಯುವುದರಿಂದ ನಿಮಗೆ ಪರೀಕ್ಷೆ ಮೇಲಿನ ಭಯ ಹೊಗುತ್ತದೆ. ಅದರ ಜೊತೆ ನೀವು ಓದಿರುವುದ ಸರಿಯಾಗಿದೆ ಎಂದು ನಿಮಗೆ ತಿಳಿಯುತ್ತದೆ. ಇದರಿಂದ ನೀವು ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬ ಒಂದು ಕಲ್ಷನೆ ಬರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌