ಆ್ಯಪ್ನಗರ

10ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಪಡೆಯುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್

ಸಮಾಜ ವಿಜ್ಞಾನ ವಿಷಯದಲ್ಲಿ ಫಾರ್ಮುಲಾ ಹಾಗೂ ಥಿಯರಿಗಳನ್ನು ನೆನೆಪಿಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ಆದರೆ ಇತಿಹಾಸ, ಭೂಗೋಳ ಶಾಸ್ತ್ರ ಹಾಗೂ ಪೌರನೀತಿ ವಿಷಯಗಳಲ್ಲಿ ದಿನಾಂಕಗಳು, ವ್ಯಾಖ್ಯಾನಗಳು, ಚಿಕ್ಕ ಹಾಗೂ ದೊಡ್ಡ ಟಿಪ್ಪಣಿಗಳನ್ನು ನೆನೆಪಿನಲ್ಲಿ ಇಡಬೇಕಾಗಿದ್ದು ಅನಿವಾರ್ಯವಾಗಿದೆ. ಸಮಾಜ ವಿಜ್ಞಾನ ವಿಷಯದಲ್ಲಿ ಚಿಕ್ಕ ಉತ್ತರಗಳಲ್ಲಿ ಸಲೀಸಾಗಿ ಅಂಕಗಳಿಸಬಹುದು. ಆದರೆ ದೊಡ್ಡ ಉತ್ತರಗಳಲ್ಲಿ ಅಂಕ ಗಳಿಸಲು ನೆನೆಪಿನ ಶಕ್ತಿಯ ಜೊತೆಗೆ, ಬರೆಯುವ ಸಾಮರ್ಥ್ಯವು ಅಗತ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಕೆಳಗೆ ಕೊಟ್ಟಿರುವ ಕೆಲವು ಟಿಪ್ಸ್ ಗಳಿಂದ ನೀವು, ಕೆಲವು ತಂತ್ರಗಳನ್ನು ಕಲಿತು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯವಾಗುತ್ತದೆ.

Vijaya Karnataka Web 23 Dec 2022, 4:59 pm
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ದಿನಾಂಕವನ್ನು ಈಗಾಗಲೇ ಪ್ರಕಟ ಮಾಡಿದೆ. ಈ ದಿನಾಂಕ ಪ್ರಕಾರ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಗೆ ಇನ್ನೂ ಕೆವಲ 2 ರಿಂದ 3 ತಿಂಗಳು ಮಾತ್ರ ಬಾಕಿ ಉಳಿದಿದೆ.
Vijaya Karnataka Web how to high score in social science class 10 exam 2022 23
10ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಪಡೆಯುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್


ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಕೂಡಾ ಆರಂಭಿಸಿದ್ದಾರೆ. ಅದರಲ್ಲೂ ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕಗಳಿಸಲು ಹೇಗೆ ತಯಾರಿ ನಡೆಸಬೇಕು ಎನ್ನುವ ಕುರಿತು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ಸಮಾಜ ವಿಜ್ಞಾನ ವಿಷಯದಲ್ಲಿ ಫಾರ್ಮುಲಾ ಹಾಗೂ ಥಿಯರಿಗಳನ್ನು ನೆನೆಪಿಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ಆದರೆ ಇತಿಹಾಸ, ಭೂಗೋಳ ಶಾಸ್ತ್ರ ಹಾಗೂ ಪೌರನೀತಿ ವಿಷಯಗಳಲ್ಲಿ ದಿನಾಂಕಗಳು, ವ್ಯಾಖ್ಯಾನಗಳು, ಚಿಕ್ಕ ಹಾಗೂ ದೊಡ್ಡ ಟಿಪ್ಪಣಿಗಳನ್ನು ನೆನೆಪಿನಲ್ಲಿ ಇಡಬೇಕಾಗಿದ್ದು ಅನಿವಾರ್ಯವಾಗಿದೆ.

ಸಮಾಜ ವಿಜ್ಞಾನ ವಿಷಯದಲ್ಲಿ ಚಿಕ್ಕ ಉತ್ತರಗಳಲ್ಲಿ ಸಲೀಸಾಗಿ ಅಂಕಗಳಿಸಬಹುದು. ಆದರೆ ದೊಡ್ಡ ಉತ್ತರಗಳಲ್ಲಿ ಅಂಕ ಗಳಿಸಲು ನೆನೆಪಿನ ಶಕ್ತಿಯ ಜೊತೆಗೆ, ಬರೆಯುವ ಸಾಮರ್ಥ್ಯವು ಅಗತ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಕೆಳಗೆ ಕೊಟ್ಟಿರುವ ಕೆಲವು ಟಿಪ್ಸ್ ಗಳಿಂದ ನೀವು, ಕೆಲವು ತಂತ್ರಗಳನ್ನು ಕಲಿತು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯವಾಗುತ್ತದೆ.

ಎಸ್‌ಎಸ್‌ಎಲ್‌ಸಿ ಇಂಗ್ಲಿಷ್ ವಿಷಯದಲ್ಲಿ ಹೆಚ್ಚು ಅಂಕ ಗಳಿಸಲು ಈ ಟಿಪ್ಸ್ ಫಾಲೋ ಮಾಡಿ

​ಉತ್ತರಗಳನ್ನು ಹೆಚ್ಚು ವಿವರವಾಗಿ ಬರೆಯುವುದನ್ನು ರೂಡಿಸಿಕೊಳ್ಳಿ

ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಪಡೆಯಬೇಕಾದರೆ ವಿದ್ಯಾರ್ಥಿಗಳು ಮೊದಲು ಉತ್ತರಗಳನ್ನು ಹೆಚ್ಚು ವಿವರವಾಗಿ ಬರೆಯುವುದನ್ನು ರೂಡಿಸಿಕೊಳ್ಳಬೇಕು. ಹೆಚ್ಚು ವಿವರಗಳನ್ನು ಅರಿಯುವ ಮೂಲಕ ಇತಿಹಾಸ, ಪೌರನೀತಿ ಹಾಗೂ ಭೂಗೋಳ ಶಾಸ್ತ್ರ ವಿಷಯವನ್ನು ತಿಳಿಯಬಹುದು. ಪರೀಕ್ಷೆಗೆ ತಯಾರಿ ನಡೆಸುವಾಗ, ಮುಖ್ಯವಾದ ದಿನಾಂಕಗಳನ್ನು, ನುಡಿಗಟ್ಟುಗಳನ್ನು, ಆ ವಿಷಯಕ್ಕೆ ಸಂಬಂಧಿಸಿದ ಪದಗಳ ಹಾಗೂ ವ್ಯಾಖ್ಯಾನಗಳನ್ನು ಚಿಕ್ಕದಾಗಿ ನೋಟ್ ಮಾಡಿಟ್ಟುಕೊಳ್ಳಿ. ನೀವು ಆ ಅಧ್ಯಾಯವನ್ನು ಮುಗಿಸಿದ ನಂತರ ಇದನ್ನು ಮನನ ಮಾಡುವುದರಿಂದ, ನಿಮಗೆ ಪರೀಕ್ಷೆ ಸಮಯದಲ್ಲಿ ಹೆಚ್ಚು ಸಹಾಯಕ್ಕೆ ಬರುತ್ತದೆ.

​ಮುಖ್ಯವಾದ ಪದಗಳನ್ನು ನೆನಪಿಟ್ಟುಕೊಳ್ಳಿ

ವಿದ್ಯಾರ್ಥಿಗಳು ಸಮಾಜ ಶಾಸ್ತ್ರ ವಿಷಯದಲ್ಲಿ ಬರುವ ಇತಿಹಾಸ, ಪೌರನೀತಿ ಹಾಗೂ ಭೂಗೋಳ ಶಾಸ್ತ್ರ ಗಳಲ್ಲಿ ಬರುವ ವಿವರಣಾತ್ಮಕ ಪ್ರಶ್ನೆಗಳಿಗೆ, ಕಾರ್ಯವಿಧಾನಗಳು ಹಾಗೂ ಬರುವ ಸ್ವಾಭಾವಿಕ ಪ್ರಕ್ರಿಯೆಗಳು, ಈ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಲು, ಇವುಗಳಲ್ಲಿ ಬರುವ ಮುಖ್ಯವಾದ ಪದಗಳನ್ನು ನೆನಪಿಟ್ಟುಕೊಳ್ಳುವುದು ಉತ್ತಮ. ಈ ಪದಗಳನ್ನು ಪರೀಕ್ಷೆಯಲ್ಲಿ ಉತ್ತರಗಳಲ್ಲಿ ಬಳಕೆ ಮಾಡುವುದರಿಂದ ಹೆಚ್ಚಿನ ಅಂಕಗಳಿಸಲು ಸಾಧ್ಯವಾಗುತ್ತದೆ.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಉಳಿದ 3 ತಿಂಗಳಲ್ಲಿ ತಯಾರಿ ಹೇಗಿರಬೇಕು? ಇಲ್ಲಿವೆ ಸಿಂಪಲ್ ಟಿಪ್ಸ್


​ಉತ್ತರಗಳನ್ನು ವಿಂಗಡಿಸಿ ಬರೆಯುವುದನ್ನು ರೂಡಿಸಿಕೊಳ್ಳಿ

ಸೋಷಿಯಲ್ ಸೈನ್ಸ್‌ ವಿಷಯದಲ್ಲಿ ಹೆಚ್ಚು ಉತ್ತರಗಳನ್ನು ವಿವರವಾಗಿ ಬರೆಯುವ ಅವಶ್ಯಕೆತೆ ಇರುತ್ತದೆ. ಉದ್ದನೆಯ ಉತ್ತರಗಳನ್ನು ವಿಂಗಡಿಸಿ ಬರೆಯಿರಿ. ಈ ತರಹದ ಬರವಣಿಗೆಯ ಉದ್ದನೆಯ ಉತ್ತರವನ್ನು ಓದುವಾಗ ಕಷ್ಟ ಪಡುವ ಅವಶ್ಯಕತೆ ಇರುವುದಿಲ್ಲ. ಹಾಗೂ ಪರೀಕ್ಷೆ ಸಮಯದಲ್ಲೂ ಸಹ ಇದು ಸಹಾಯವಾಗುತ್ತದೆ. ಉತ್ತರ ಪತ್ರಿಕೆಯೂ ಸಹ ಅಂದವಾಗಿ ಕಾಣುತ್ತದೆ, ಇದು ಮೌಲ್ಯಮಾಪಕರನ್ನು ಆಕರ್ಷಿಸುತ್ತದೆ. ಹಾಗೇಯೆ ಮೌಲ್ಯಮಾಪಕರು ಸುಲಭವಾಗಿ ಉತ್ತರ ಅರ್ಥ ಮಾಡಿಕೊಂಡು ಹೆಚ್ಚಿನ ಅಂಕ ನೀಡುತ್ತಾರೆ.

​ಸಮಯವನ್ನು ನಿರ್ವಹಿಸುವುದನ್ನು ಅಭ್ಯಾಸ ಮಾಡಿ

ಪರೀಕ್ಷೆ ಬರೆಯುವಾಗ ಸಮಯವನ್ನು ನಿರ್ವಹಣೆ ಮಾಡುವುದು ಒಂದು ಕಲೆ. ಸಮಯವನ್ನು ನಿರ್ವಹಣೆ ಮಾಡುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಕಲಿಯಬೇಕು. ಅದರಲ್ಲೂ ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚು ವಿವರವಾದ ಉತ್ತರಗಳನ್ನು ಬರೆಯುವ ಅವಶ್ಯಕತೆ ಇರುವುದರಿಂದ, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ಪರೀಕ್ಷೆ ಬರೆಯುವಾಗ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವಷ್ಟು ಸಮಯವನ್ನು ಹೊಂದಿಸಿಕೊಳ್ಳಿ. ಪ್ರಶ್ನೆ ಪತ್ರಿಕೆಯನ್ನು ಉತ್ತರಿಸುವ ಮೊದಲು ಒಮ್ಮೆ ನೋಡಿ ಹಾಗೂ ಚಿಕ್ಕ ಉತ್ತರಗಳು ಮತ್ತು ದೊಡ್ಡ ಉತ್ತರಗಳಿಗೆ ಹೇಗೆ ಸಮಯ ಹೊಂದಿಸಿಕೊಳ್ಳಬಹುದು ಎಂದು ಆಲೋಚಿಸಿ. ಮೊದಲು ಚಿಕ್ಕ ಉತ್ತರಗಳನ್ನು ಬರೆಯುವುದೋ ಅಥವಾ ದೊಡ್ಡ ಉತ್ತರಗಳನ್ನು ಮುಗಿಸುವುದೋ ಎಂದು ನಿರ್ಧರಿಸಿ.

ಸಿಬಿಎಸ್‌ಇ 10, 12ನೇ ತರಗತಿ ಬೋರ್ಡ್‌ ಎಕ್ಸಾಮ್‌ಗೆ 2 ತಿಂಗಳು ಮಾತ್ರ ಬಾಕಿ.. ಪರೀಕ್ಷೆ ತಯಾರಿ ಹೇಗಿರಬೇಕು? ಇಲ್ಲಿವೆ ಟಿಪ್ಸ್


​ಉತ್ತರ ಪತ್ರಿಕೆಯಲ್ಲಿ ಅನಗತ್ಯ ಬರವಣಿಗೆ ಬೇಡ

ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಉತ್ತರ ಪತ್ರಿಕೆಯಲ್ಲಿ ಅನಗತ್ಯವಾಗಿ ತುಂಬಿಸಬೇಡಿ. ಕೆಲವರಿಗೆ ಉತ್ತರ ಗೋತ್ತಿರದಿದ್ದರು ಸುಮ್ಮನೆ ಉತ್ತರ ಪತ್ರಿಕೆಯಲ್ಲಿ ಅನಗತ್ಯವಾಗಿ ಬರೆಯುತ್ತಾರೆ ಇದನ್ನು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಮಾಡಬೇಡಿ. ವಿದ್ಯಾರ್ಥಿಗಳು ಉತ್ತರ ತೋಚದೆ ಇದ್ದಾಗ ಸಂಬಂಧವಿಲ್ಲದ ಉತ್ತರವನ್ನು ತುಂಬಿಸುತ್ತಾರೆ. ಇದು ಉತ್ತರವನ್ನು ಇನ್ನೂ ಹಾಳುಗೆಡವುತ್ತದೆ. ನಿಮಗೆ ತಿಳಿದಿರುವ ಅಂಶಗಳನ್ನು ಮೊದಲು ಬರೆಯಿರಿ, ನಂತರ ನಿಮಗೆ ಆ ಪ್ರಶ್ನೆಗೆ ಸಂಬಂಧಿಸಿದ ಅಂಶಗಳನ್ನು ಬರೆಯಿರಿ.

​ಉತ್ತರ ಬರೆದ ಮೇಲೆ ಒಮ್ಮೆ ಪರಿಶೀಲಿಸಿ

ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಯಲ್ಲಿ ಎಲ್ಲ ಉತ್ತರಗಳನ್ನು ಬರೆದ ನಂತರ, ಉತ್ತರ ಪತ್ರಿಕೆಯನ್ನು ಒಮ್ಮೆ ಪರಿಶೀಲಿಸಿ. ನಿಮಗೂ ಸದಾ ಪರಿಶೀಲಿಸಲು ಸಮಯ ಸಿಗದೆ ಇರಬಹುದು, ಆದರೆ ಸ್ವಲ್ಪ ಸಮಯ ಇದಕ್ಕಾಗಿ ಮೀಸಲಿಡಿ. ಯಾವುದಾದರು ದಿನಾಂಕ ನೀವು ಬರೆಯಲು ಮರೆತಿದ್ದರೆ, ಅಥವಾ ಮತ್ತಿನ್ಯಾವುದೋ ಅಂಶವನ್ನು ನೀವು ಮರೆತಿದ್ದರೆ, ಈ ತರಹ ಪರಿಶೀಲಿಸುವುದು ನಿಮಗೆ ಸಹಾಯವಾಗುತ್ತದೆ. ಏನಾದರೂ ವ್ಯಾಕರಣದಲ್ಲಿ ತಪ್ಪು ಮಾಡಿದ್ದರೆ, ಅದನ್ನು ಕೂಡ ತಿದ್ದಿಕೊಳ್ಳಬಹುದು.

​ಉತ್ತರದಲ್ಲಿ ಹೈಲೈಟ್ ಅಂಶವನ್ನು ಅಂಡರ್‌ಲೈನ್‌ ಮಾಡಿ

ನೀವು ಬರೆದಿರುವ ಉತ್ತರದಲ್ಲಿ, ಯಾವುದಾದರೂ ಹೈಲೈಟ್‌ ಅಂಶಗಳಿದ್ದರೆ ಆ ಅಂಶವನ್ನು ಅಂಡರ್‌ಲೈನ್‌ ಮಾಡಿ. ಈ ತರಹ ಹೈಲೈಟ್ ಮಾಡಿರುವ ಉತ್ತರ ಮೌಲ್ಯಮಾಪಕರಿಗೆ ಆಕರ್ಷಕವಾಗಿ ಕಾಣಿಸಬಹುದು. ಆದರೆ ಅವಶ್ಯವಿದ್ದಷ್ಟು ಮಾತ್ರ ಮಾಡಿ. ಬರೆದ ಉತ್ತರವನ್ನೆಲ್ಲಾ ಹೈಲೈಟ್‌ ಮಾಡಬೇಡಿ. ಹೀಗೆ ಮಾಡಿದರೆ ಅದೇ ನಿಮಗೆ ಅಂಕ ಕಡಿತಕ್ಕೆ ಕಾರಣವಾಗಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌