SSLC ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಪಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್
ಎಸ್ಸೆಸ್ಸೆಲ್ಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ತಯಾರಿ ಆರಂಭಿಸಿರುವ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕಗಳಿಸುವುದು ಹೇಗೆ? ಹೆಚ್ಚು ಅಂಕ ಪಡೆಯಲು ತಯಾರಿ ಹೇಗಿರಬೇಕು ಎನ್ನುವ ಕುರಿತು ಈ ಲೇಖನದಲ್ಲಿ ಕೆಲವು ಟಿಪ್ಸ್ ಗಳನ್ನು ನೀಡಲಾಗಿದೆ.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಆಲಸ್ಯತನ ತೊರಿಸದೆ, ಈಗಿನಿಂದಲೇ ಪರೀಕ್ಷೆಯ ಕಡೆ ಹೆಚ್ಚು ಗಮನ ಕೊಟ್ಟು ತಯಾರಿ ಆರಂಭಿಸಿ. ಏಕೆಂದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ.
ಪರೀಕ್ಷೆ ತಯಾರಿ ಆರಂಭಿಸಿರುವ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕಗಳಿಸುವುದು ಹೇಗೆ? ಹೆಚ್ಚು ಅಂಕ ಪಡೆಯಲು ತಯಾರಿ ಹೇಗಿರಬೇಕು ಎನ್ನುವ ಕುರಿತು ಈ ಲೇಖನದಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.
ವಿಜ್ಞಾನ ವಿಷಯದ ತಯಾರಿ ಹೀಗಿರಲಿ
ಈ ಬಾರಿಯ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಯಲ್ಲಿ 38 ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಪ್ರಶ್ನೆಪತ್ರಿಕೆಯನ್ನು ಹೊಂದಿದೆ. ಒಟ್ಟು 80 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಹಾಗಾಗಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಒಂದು ಅಂಕದ ಪ್ರಶ್ನೆ ಹಾಗೂ ಎರಡು ಅಂಕದ ಪ್ರಶ್ನೆಗಳಿಗೆ ಸುಲಭವಾಗಿ ಅಂಕಗಳಿಸಬಹುದಾಗಿದೆ. ಈ ಅಂಕ ಪಡೆಯಬೇಕಾದರೆ ವಿದ್ಯಾರ್ಥಿಗಳು ಫಾರ್ಮುಲಾ ಹಾಗೂ ಥಿಯರಿಗಳನ್ನು ನೆನಪಿಟ್ಟುಕೊಳ್ಳುವುದು ಅವಶ್ಯವಾಗಿದೆ. 10ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಪಡೆಯುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್
ಪ್ರಮುಖ ವಿಷಯಗಳನ್ನು ನೋಟ್ ಮಾಡಿಕೊಳ್ಳಿ
ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ನಿಮ್ಮ ಬಳಿ ಯಾವಾಗಲು ಒಂದು ಪೇನ್ ಮತ್ತು ಒಂದು ಡೈರಿಯನ್ನ ಇಟ್ಟುಕೊಳ್ಳಿ. ವಿಜ್ಞಾನ ವಿಷಯವನ್ನು ಓದುವಾಗ ಅದರಲ್ಲಿ ಬರುವ ಪ್ರಮುಖ ವಿಷಯಗಳನ್ನು ನೋಟ್ ಮಾಡಿಕೊಳ್ಳಿ. ಅದರಲ್ಲೂ ಫಾರ್ಮುಲಾ ಮತ್ತು ಥಿಯರಿಗಳನ್ನು ನೋಟ್ ಮಾಡಿಕೊಳ್ಳಿ. ಇನ್ನೂ ಫ್ಲೋ ಚಾರ್ಟ್ ತಯಾರಿಸಿದ್ದಲ್ಲಿ ಇನ್ನಷ್ಟು ವಿಷಯಗಳನ್ನು ಸುಲಭವಾಗಿ ನೆನಪಿಡಲು ಸಹಾಯಕವಾಗುತ್ತದೆ. ಪರೀಕ್ಷಾ ಹಿಂದಿನ ದಿನ ನೀವು ಮಾಡಿದ ಕಿರು ಪಟ್ಟಿಯನ್ನು ಓದುವುದರಿಂದ ಹೆಚ್ಚಿನ ಅಂಕ ಗಳಿಸಲು ಸುಲಭವಾಗುತ್ತದೆ.
ಪ್ರಮುಖ ಅಂಶಗಳನ್ನು ಹೆಚ್ಚು ಅಭ್ಯಸಿಸಿ
ವಿಜ್ಞಾನ ವಿಷಯವು ವಿದ್ಯಾರ್ಥಿಗಳಿಗೆ ಸ್ವಲ್ಪ ಕಠಿಣದ ವಿಷಯ. ಅದಕ್ಕಾಗಿ ವಿದ್ಯಾರ್ಥಿಗಳು ಈ ವಿಷಯದ ಮೇಲೆ ಹೆಚ್ಚು ಗಮನ ಹರಿಸಿ. ವಿಜ್ಞಾನ ವಿಷಯದ ಭೌತಶಾಸ್ತ್ರದಲ್ಲಿ ಬರುವ ಲೆಕ್ಕಗಳು, ರಸಾಯನ ಶಾಸ್ತ್ರದಲ್ಲಿರುವ ಕೆಮಿಕಲ್ ರಿಯಾಕ್ಷನ್ ಮತ್ತು ಪರಿಯಾಟಿಕ್ ಟೇಬಲ್ ನೆನಪಿನಲ್ಲಿಡುವುದು ಮತ್ತು ಜೀವಶಾಸ್ತ್ರದಲ್ಲಿ ಬರುವ ಎಲ್ಲಾ ಡೈಗ್ರಾಮ್ಗಳನ್ನು ಹೆಚ್ಚು ಹೆಚ್ಚು ಬರೆಯುವುದು. ಇದರಿಂದ ಹೆಚ್ಚಿನ ಅಂಕಗಳನ್ನು ಸುಲಭವಾಗಿ ಪಡೆಯಲು ಸಹಾಯವಾಗುವುದು. ಎಸ್ಎಸ್ಎಲ್ಸಿ ಇಂಗ್ಲಿಷ್ ವಿಷಯದಲ್ಲಿ ಹೆಚ್ಚು ಅಂಕ ಗಳಿಸಲು ಈ ಟಿಪ್ಸ್ ಫಾಲೋ ಮಾಡಿ
ತಪ್ಪುಗಳನ್ನು ಕಡಿಮೆ ಮಾಡಿ
ವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ಉತ್ತರಿಸುವಾಗ ಯಾವುದೇ ಗೊಂದಲ ಮಾಡಿಕೊಳ್ಳಬೇಡಿ. ಇದರಿಂದ ತಪ್ಪುಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದಷ್ಟು ತಪ್ಪುಗಳನ್ನು ನಿಯಂತ್ರಿಸುವುದನ್ನ ರೂಡಿಸಿಕೊಳ್ಳಿ. ವಿಜ್ಞಾನ ವಿಷಯವು ಪ್ರಾಯೋಗಿಕ ಅಂಶಗಳನ್ನು ಹೆಚ್ಚು ಹೊಂದಿದ್ದು, ಅವುಗಳನ್ನು ಉತ್ತರಿಸುವಾಗ ಯಾವುದೇ ರೀತಿಯ ಗೊಂದಲ ಮತ್ತು ತಪ್ಪುಗಳಿಗೆ ಎಡೆಮಾಡದೇ ವಿದ್ಯಾರ್ಥಿಗಳು ಉತ್ತರಿಸುವುದು ಒಳಿತು. ಇಲ್ಲವಾದಲ್ಲಿ ಯಾವುದೇ ಒಂದು ಹಂತದಲ್ಲಿ ಮಾಡುವ ಸಣ್ಣ ತಪ್ಪಿಗೆ ಸರಿಯಾದ ಉತ್ತರ ಬರೆಯಲಾಗದೆ ಅಂಕಗಳು ಕಡಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಉತ್ತರದಲ್ಲಿ ಹೈಲೈಟ್ ಅಂಶವನ್ನು ಅಂಡರ್ಲೈನ್ ಮಾಡಿ
ನೀವು ಬರೆದಿರುವ ಉತ್ತರದಲ್ಲಿ, ಫಾರ್ಮುಲಾಗಳು ಮತ್ತು ಯಾವುದಾದರೂ ಹೈಲೈಟ್ ಅಂಶಗಳಿದ್ದರೆ ಆ ಅಂಶವನ್ನು ಅಂಡರ್ಲೈನ್ ಮಾಡಿ. ಈ ತರಹ ಹೈಲೈಟ್ ಮಾಡಿರುವ ಉತ್ತರ ಮೌಲ್ಯಮಾಪಕರಿಗೆ ಆಕರ್ಷಕವಾಗಿ ಕಾಣಿಸಬಹುದು. ಆದರೆ ಅವಶ್ಯವಿದ್ದಷ್ಟು ಮಾತ್ರ ಮಾಡಿ. ಬರೆದ ಉತ್ತರವನ್ನೆಲ್ಲಾ ಹೈಲೈಟ್ ಮಾಡಬೇಡಿ. ಹೀಗೆ ಮಾಡಿದರೆ ಅದೇ ನಿಮಗೆ ಅಂಕ ಕಡಿತಕ್ಕೆ ಕಾರಣವಾಗಬಹುದು. 10 ಮತ್ತು 12ನೇ ತರಗತಿ ವಾರ್ಷಿಕ ಪರೀಕ್ಷೆ ತಯಾರಿಗೆ ಇಲ್ಲಿವೆ ಬೆಸ್ಟ್ ಅಪ್ಲಿಕೇಶನ್ಗಳು..
pexeಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ
ಈಗ ನೀವು ಪರೀಕ್ಷೆಗೆ ತಯಾರಿ ನಡೆಸಲು ಕಡಿಮೆ ಸಮಯ ಇರುವುದರಿಂದ, ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು, ಹೆಚ್ಚು ಬಿಡಿಸಿ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ 2023ನೇ ಸಾಲಿನ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಿ ನಡೆಸಲು ಮಾದರಿ ಪ್ರಶ್ನೆಪತ್ರಿಕೆಗಳನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಸಿದೆ. ವಿದ್ಯಾರ್ಥಿಗಳು ಅವುಗಳನ್ನು ಅಧ್ಯಯನ ಮಾಡಬಹುದು. ಈ ಸಮಯದಲ್ಲಿ ಪರಿಕ್ಷೆಗೆ ತಯಾರಾಗಲು ಹೆಚ್ಚು ಸಹಕಾರಿ ಆಗುತ್ತವೆ. ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡುವುದರಿಂದ ನಿಮಗೆ ಪರೀಕ್ಷೆಯ ಮಾದರಿ ಅರ್ಥವಾಗುತ್ತದೆ.
" ಲೇಖಕರ ವಿವರ: ಮುರಳೀಧರ ಯಡಚಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 5 ವರ್ಷ 6 ತಿಂಗಳ ಅನುಭವ ಹೊಂದಿದ್ದಾರೆ. ಅವರು ಕ್ರೀಡೆ, ರಾಜಕೀಯ, ದಿನನಿತ್ಯದ ಅಪ್ಡೇಟ್ ಸುದ್ದಿ ಮತ್ತು ಶಿಕ್ಷಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ, ಕಳೆದ 11 ತಿಂಗಳಿಂದ ಶಿಕ್ಷಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುರಳೀಧರ ಯಡಚಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಪ್ರಮುಖ ಸುದ್ದಿಗಳನ್ನು ಬ್ರೇಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ಮುರಳೀಧರ ಯಡಚಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಮುರಳೀಧರ ಯಡಚಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಕ್ರಿಕೆಟ್ ಆಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಅವರ ಉತ್ತಮ ಗುಣಮಟ್ಟದ ಕೆಲಸಕ್ಕೆ ಈ ಹವ್ಯಾಸಗಳು ಸಹಾಯಕವಾಗಿವೆ. ಒಟ್ಟಾರೆ ಹೇಳುವುದಾದರೆ, ಮುರಳೀಧರ ಯಡಚಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ.
"... ಇನ್ನಷ್ಟು ಓದಿ
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
We use cookies and other tracking technologies to provide services in line with the preferences you reveal while browsing the Website to show personalize content and targeted ads, analyze site traffic, and understand where our audience is coming from in order to improve your browsing experience on our Website. By continuing to browse this Website, you consent to the use of these cookies. If you wish to object such processing, please read the instructions described in our privacy policy/cookie policy.