Please enable javascript.Gandhi Jayanti 2023 Speech : ಗಾಂಧಿ ಜಯಂತಿ ಭಾಷಣಕ್ಕೆ ಸಲಹೆಗಳು ಇಲ್ಲಿವೆ.. - long and short speech ideas on gandhi jayanti in kannada - Vijay Karnataka

Gandhi Jayanti 2023 Speech : ಗಾಂಧಿ ಜಯಂತಿ ಭಾಷಣಕ್ಕೆ ಸಲಹೆಗಳು ಇಲ್ಲಿವೆ..

Authored byಸುನೀಲ್ ಬಿ ಎನ್ | Vijaya Karnataka Web 30 Sep 2023, 2:20 pm
Subscribe

Gandhi Jayanti Speech Ideas, Essay Ideas In Kannada : ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಶಾಲಾ, ಕಾಲೇಜುಗಳಲ್ಲಿ ಪ್ರಮುಖವಾಗಿ ಹಲವು ಕಾರ್ಯಕ್ರಮಗಳ ಜತೆಗೆ, ವಿದ್ಯಾರ್ಥಿಗಳಿಂದಲೂ ಭಾಷಣ ಕಾರ್ಯಕ್ರಮ ಇರುತ್ತದೆ. ಅದು ಹೇಗಿರಬೇಕು, ಯಾವೆಲ್ಲ ಮಾಹಿತಿಗಳನ್ನು ಹೇಳಬಹುದು ಎಂದು ಇಲ್ಲಿ ತಿಳಿಸಲಾಗಿದೆ.

ಹೈಲೈಟ್ಸ್‌:

  • ಗಾಂಧಿ ಜಯಂತಿ ಭಾಷಣ ಹೇಗಿರಬೇಕು?
  • ಕನ್ನಡದಲ್ಲಿ ಗಾಂಧಿ ಜಯಂತಿ ಭಾಷಣ ಆರಂಭಿಸುವುದು ಹೇಗೆ?
  • ಇಲ್ಲಿದೆ ಈ ಪ್ರಶ್ನೆಗಳಿಗೆ ಉತ್ತರ.
Gandhi Jayanti speech ideas
Gandhi Jayanti speech ideas
ಭಾರತದಲ್ಲಿ ಪ್ರತಿ ವರ್ಷವು ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆ ಮಾಡಲಾಗುತ್ತದೆ. ಶಾಲೆ, ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿಯೂ ಸಹ ತಪ್ಪದೇ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನದಂದು ಶಾಲೆಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ನೆನೆದು ಅವರ ಕೊಡುಗೆ, ಅವರ ತತ್ವ ಸಿದ್ಧಾಂತಗಳನ್ನು ನೆನೆದು ಸ್ಮರಿಸಲಾಗುತ್ತದೆ. ಅವರಿಗೆ ವಿಶೇಷ ಗೌರವವನ್ನು ಈ ದಿನಾಂಕದಂದು ಪ್ರತಿ ವರ್ಷ ಸಲ್ಲಿಸಲಾಗುತ್ತದೆ. ಅವರ ಕುರಿತ ಎಲ್ಲ ಐತಿಹಾಸಿಕ ಮಾಹಿತಿಗಳನ್ನು ಸ್ಮರಿಸುವ ದಿನವು ಹೌದು. ಆದ್ದರಿಂದ ಈ ಲೇಖನದಲ್ಲಿ ಗಾಂಧಿ ಜಯಂತಿ ಆಚರಣೆಯಂದು ಭಾಷಣ ಮಾಡಲು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಲಹೆಗಳನ್ನು, ಪ್ರಬಂಧ ಸ್ಪರ್ಧೆ ಇದ್ದಲ್ಲಿ ಅದಕ್ಕೆ ಬೇಕಾದ ಮಾಹಿತಿಗಳನ್ನು ನೀಡಲಾಗಿದೆ.
ಹಾಗಿದ್ರೆ ಬನ್ನಿ ಶಾಲಾ-ಕಾಲೇಜುಗಳಲ್ಲಿ ಗಾಂಧಿ ಜಯಂತಿ ಆಚರಣೆಯಂದು ಭಾಷಣ ಹೇಗಿರಬೇಕು ಎಂದು ಈ ಕೆಳಗಿನಂತೆ ತಿಳಿದು, ಹಾಗೆಯೇ ಫಾಲೋ ಮಾಡಿರಿ.

ಎಲ್ಲರಿಗೂ ಶುಬೋಧಯಗಳು
ವೇದಿಕೆ ಮೇಲೆ ಆಸನರಾಗಿರುವ ನನ್ನ ಗುರುವೃಂದದವರು, ಹಿರಿಯರು ಹಾಗೂ ಈ ಕಾರ್ಯಕ್ರಮದಲ್ಲಿ ವೇದಿಕೆ ಮುಂದೆ ಇರುವಂತಹ ನನ್ನೆಲ್ಲಾ ಸಹಪಾಠಿಗಳೇ...

ಇಂದು ನಾವು ಇಲ್ಲಿ ಸೇರಿರುವುದು ಈ ದೇಶದ ಸ್ವಾತಂತ್ರ್ಯಕ್ಕೆ ಅಹಿಂಸಾ ಮಾರ್ಗದಲ್ಲಿ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರ ಜನ್ಮ ದಿನಾಚರಣೆಯ ಅಂಗವಾಗಿ. ಅವರು ಈ ದೇಶಕ್ಕೆ ನೀಡಿದ ಕೊಡುಗೆ, ಬೋಧನೆ, ಸ್ವಾತಂತ್ರ್ಯ ಹೋರಾಟ, ಸಾಹಿತ್ಯ ಕೊಡುಗೆ, ತತ್ವಗಳು, ಸಿದ್ಧಾಂತಗಳು ಎಲ್ಲ ರೀತಿಯ ಕೊಡುಗೆಗಳಿಂದ ರಾಷ್ಟ್ರಪಿತನಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ. ಇಂದು ಅವರ ಜನ್ಮದಿನವನ್ನು ರಾಷ್ಟ್ರೀಯ ಹಬ್ಬ ಗಾಂಧಿ ಜಯಂತಿಯಾಗಿ ಆಚರಿಸುತ್ತಿದ್ದೇವೆ.

ಮಹಾತ್ಮ ಗಾಂಧಿ ನುಡಿಮುತ್ತುಗಳು: ಎಲ್ಲರ ಬದುಕಿನ ಬೆಳಕಿನ ಕಿರಣಗಳು

ಅಕ್ಟೋಬರ್ 02, 1869 ರಂದು ಭಾರತದ ಗುಜರಾತ್‌ ರಾಜ್ಯದ ಪೋರಬಂದರ್‌ನಲ್ಲಿ ಜನಿಸಿದ ಮೋಹನದಾಸ್ ಕರಮಚಂದ್ ಗಾಂಧಿ, ಮಹಾತ್ಮ ಗಾಂಧಿಯಾಗಿ / ಭಾರತ ದೇಶದ ರಾಷ್ಟ್ರಪಿತನಾಗಿ ಸದಾ ದೇಶದ ಎಲ್ಲ ಪ್ರಜೆಗಳಿಂದ ಸ್ಮರಿಸಲ್ಪಡುತ್ತಿದ್ದಾರೆ. ನಾವು ಇಂದು ಗಾಂಧೀಜಿ ರವರ 154ನೇ ಜನ್ಮ ದಿನವನ್ನು ಆಚರಿಸುತ್ತಿದ್ದೇವೆ. ಇಂದು ಅವರ ಮಹತ್ವ, ಅವರ ಇತಿಹಾಸ, ಅವರನ್ನು ವಿಶೇಷವಾಗಿ ನೆನೆಯುವುದೇ ತಮ್ಮ ಕರ್ತವ್ಯ. ಕಾರಣ ಅವರ ಎಲ್ಲ ಕೊಡುಗೆಗಳು ಎಂದೇಳಬಹುದು.

ಗಾಂಧೀಜಿಯವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಧೀತೆ ಮತ್ತು ರಷ್ಯಾದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‌ ಸ್ಟಾಯ್ ರವರ ಬರಹಗಳು. ಇದರಿಂದ ನಾವು ಕಲಿಯಬೇಕಾದ್ದು, ಪುಸ್ತಕಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನ ಮಾತ್ರವಲ್ಲದೇ ಸತ್ಯ, ಪ್ರಮಾಣಿಕತೆ, ಒಳ್ಳೆಯ ಗುಣಗಳು ನಮ್ಮಲ್ಲಿ ಅಳವಡಿಸಲ್ಪಡುತ್ತವೆ ಎಂಬುದನ್ನು.

ಗಾಂಧೀಜಿಯನ್ನು ಶಾಂತಿ ಅಹಿಂಸೆಗಳ ಹರಿಕಾರ, ಸತ್ಯದ ಸರದಾರ, ಭಾರತ ದೇಶದ ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಇವರ ಮುಖ್ಯ ತತ್ವದಲ್ಲಿ ಸತ್ಯ ಸಹ ಒಂದು. ನಿಜ ಅಥವಾ ಸತ್ಯದ ಪರಿಶೋಧನೆ ಎಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧೀಜಿಯವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ತಮ್ಮ ತಪ್ಪುಗಳಿಂದಲೇ ಕಲಿತು, ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಸತ್ಯದ ಮಾರ್ಗವನ್ನು ಸಾಧಿಸಲು ಪ್ರಯತ್ನಿಸಿದರು ಗಾಂಧಿ. ಆದ್ದರಿಂದ ಅವರು ತಮ್ಮ ಆತ್ಮಚರಿತ್ರೆಯನ್ನು ' ದಿ ಸ್ಟೋರಿ ಆಫ್‌ ಮೈ ಎಕ್ಸ್‌ಪರಿಮೆಂಟ್‌ ವಿತ್ ಟ್ರುತ್' ಎಂದು ಕರೆದುಕೊಂಡಿದ್ದಾರೆ.

ಬಾಳ ದಾರಿಗೆ ಬೆಳಕಾಗುವ ಮಹಾತ್ಮ ಗಾಂಧೀಜಿಯವರ ತತ್ವ-ಸಿದ್ಧಾಂತಗಳು

ಅಹಿಂಸೆಯ ಮಾರ್ಗದಲ್ಲಿಯೇ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಬೇಕು ಎಂದು ಪಣ ತೊಟ್ಟಿದ್ದ ಗಾಂಧೀಜಿ, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು ಎಂದು ನಂಬಿದ್ದರು. ಈ ದೃಢ ನಿರ್ಧಾರವನ್ನೇ ಬ್ರಿಟಿಷರಿಂದ ದೇಶಕ್ಕೆ ಸ್ವತಂತ್ರ ಪಡೆಯುವವರೆಗೂ ಪ್ರತಿಪಾದಿಸಿದರು. ನನ್ನ ಸಹಪಾಠಿಗಳೇ ಗಾಂಧಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಅಲ್ಲಿಯೂ ಮಹಾತ್ಮ ಎನಿಸಿಕೊಂಡವರು. ಬ್ರಿಟಿಷರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಅವರ ವಸ್ತುಗಳಿಗೆ ಬಹಿಷ್ಕಾರ ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಈ ಸಂದರ್ಭದಲ್ಲಿ ದೇಶದ ಪ್ರಜೆಗಳಿಗೆ ಮಾಡು ಇಲ್ಲವೆ ಮಡಿ ಎಂಬ ಕರೆಯನ್ನು ನೀಡಿದ್ದರು. ಇದರಿಂದ ಪ್ರಜೆಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಭಾವನೆ, ಸ್ಫೂರ್ತಿ ಹೆಚ್ಚಿತ್ತು. ಇವರ ನಿರಂತರ ಹೋರಾಟ, ಸತ್ಯಾಗ್ರಹಗಳು, ಹಲವು ಘಟನೆಗಳಿಂದ 1947 ರಂದು ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಇಂದು ಅವರು ಭಾರತ ದೇಶದ ಜನತೆಯಲ್ಲಿ, ಮುಂದಿನ ಯುಗಗಳಲ್ಲೂ ಅವರ ನೆನಪುಗಳು ಹಾಗೂ ಕೊಡುಗೆಗಳು ಅಜರಾಮರ ಆಗಿರುತ್ತದೆ.

ಈ ಸಂದರ್ಭದಲ್ಲಿ ಅವರ ತತ್ವ ಸಿದ್ಧಾಂತಗಳ ಬಗ್ಗೆ ಪ್ರಮುಖವಾಗಿ ನೋಡುವುದಾದರೆ - ಓರ್ವ ಸಾಮಾನ್ಯ ಹಿಂದುವಾಗಿ ಎಲ್ಲ ಧರ್ಮಗಳನ್ನು ಸಮಾನ ದೃಷ್ಟಿಯಲ್ಲಿ ಕಂಡವರು. ಹಲವು ತತ್ವ ಸಿದ್ಧಾಂತಗಳಿಂದ ಬದುಕಿದ ಗಾಂಧೀಜಿಯವರು ಭಾರತದ ಸಮಸ್ಯೆಗಳ ಮೂಲ ಕಾರಣವನ್ನು ಪರಿಹರಿಸಲು ಸಪ್ತ ಪಾತಕಗಳಿಂದ ದೂರ ಉಳಿಯಬೇಕು ಎಂದು ಹೇಳಿದ್ದರು. ಅವುಗಳೆಂದರೆ..

ಚಾರಿತ್ರ್ಯವಿಲ್ಲದ ಶಿಕ್ಷಣ
ದುಡಿಮೆ ಇಲ್ಲದ ಸಂಪತ್ತು
ಆತ್ಮಸಾಕ್ಷಿ ಇಲ್ಲದ ಸಂತೋಷ
ತತ್ವರಹಿತ ರಾಜಕಾರಣ
ನೀತಿ ಇಲ್ಲದ ವ್ಯಾಪಾರ
ಮಾನವೀಯತೆ ಇಲ್ಲದ ಜ್ಞಾನ
ತ್ಯಾಗವಿಲ್ಲದ ಪೂಜೆ

ಇವುಗಳ ಅರ್ಥವನ್ನು ನಾವು ತಿಳಿದು ಅಳವಡಿಸಿಕೊಂಡರೆ ಉತ್ತಮ ಪ್ರಜೆಗಳಾಗಿ, ಉತ್ತಮ ಮನುಷ್ಯರಾಗಿ, ಜೀವನದಲ್ಲಿ ಏಳಿಗೆಯನ್ನು ಖಂಡಿತ ಸುಲಭವಾಗಿ ಕಂಡುಕೊಳ್ಳುವಲ್ಲಿ ಯಾವುದೇ ಸಂಶಯ ಇಲ್ಲ ಎಂದು ನಾನು ಹೇಳಲು ಬಯಸುತ್ತೇನೆ.

ಗಾಂಧಿ ಜಯಂತಿ ಆಚರಣೆಯ ಈ ಸುದಿನದಲ್ಲಿ ಇಷ್ಟು ಸಮಯ ಮಾತನಾಡಲು ಅವಕಾಶ ನೀಡಿದ ನಿಮ್ಮೆಲ್ಲರಿಗೂ ನಾ ಸದಾ ಋಣಿ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈ ಭಾರತ್, ಜೈ ಕರ್ನಾಟಕ.

ಶಿಕ್ಷಣ ಇಲಾಖೆಯಿಂದ ಆದೇಶ: ಈ ವರ್ಷದಿಂದಲೇ 9, 11ನೇ ತರಗತಿಗೆ ಬೋರ್ಡ್‌ ಪರೀಕ್ಷೆ., ಹೇಗಿರುತ್ತೆ ಗೊತ್ತೇ?

ಈ ಮೇಲಿನ ರೀತಿಯಲ್ಲಿ ಶಾಲೆ - ಕಾಲೇಜುಗಳಲ್ಲಿ ಭಾಷಣ ಮಾಡಬಹುದು. ಇಷ್ಟೇ ಅಲ್ಲದೇ ಇನ್ನು ಹೆಚ್ಚಿನ ಮಾಹಿತಿಗಳನ್ನು ಹೇಳಬಹುದು. ನಿಮ್ಮ ಭಾಷಣ ಸರಳ ಭಾಷೆಯಲ್ಲಿ ಸಂಕ್ಷಿಪ್ತವಾಗಿ ಇರುವಂತೆ ನೋಡಿಕೊಳ್ಳಿ.
ಸುನೀಲ್ ಬಿ ಎನ್
ಲೇಖಕರ ಬಗ್ಗೆ
ಸುನೀಲ್ ಬಿ ಎನ್
"ಸುನೀಲ್ ಬಿ ಎನ್ ರವರು ಅನುಭವಿ ಬರಹಗಾರರಾಗಿದ್ದು, ಕಳೆದ 7 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2015 ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಹಲವು ಡೊಮೈನ್‌ಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಸುನೀಲ್ ರವರು ವೈವಿಧ್ಯಮಯ ಪರಿಣತಿಯನ್ನು ಹೊಂದಿದ್ದು, ತಂತ್ರಜ್ಞಾನ, ಸಿನಿಮಾ, ಉದ್ಯೋಗ, ಶಿಕ್ಷಣ, ಜೀವನಶೈಲಿ ಸೇರಿದಂತೆ ಸುದ್ದಿ ವಿಭಾಗದಲ್ಲೂ ಕೆಲಸದ ಅನುಭವ ಹೊಂದಿದ್ದಾರೆ. ಕಳೆದ 3.6 ವರ್ಷಗಳಿಂದ ಸುನೀಲ್‌ ರವರು ಉದ್ಯೋಗ ಮತ್ತು ಶಿಕ್ಷಣ ವಿಭಾಗದಲ್ಲಿ ತಮ್ಮ ಬರವಣಿಗೆ ಕೃಷಿಯನ್ನು ಕೇಂದ್ರೀಕರಿಸಿದ್ದು, ಈ ವಿಷಯಗಳಲ್ಲಿ ಉದ್ಯಮದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಂಡಿದ್ದಾರೆ. ಈ ಎರಡು ಡೊಮೇನ್‌ಗಳಲ್ಲಿನ ಬೆಳವಣಿಗೆ ಹಾಗೂ ಬದಲಾವಣೆ ಕುರಿತು ಲೇಟೆಸ್ಟ್‌ ಮಾಹಿತಿಗಳನ್ನು ರಚಿಸುವ ಮೂಲಕ ಓದುಗರಿಗೆ ಸಹಾಯ ಮಾಡುವ ಹಾಗೂ ಅವರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಸದಾ ಉತ್ಸುಕರಾಗಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಹೊರತಾಗಿ, ಸುನೀಲ್‌ ಬಿ ಎನ್‌ ರವರು ಹಲವು ಉತ್ತಮ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಡುವಿನ ವೇಳೆ ಪ್ರಯಾಣಿಸಲು ಹಾಗೂ ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಪ್ರಯಾಣವನ್ನು ಶಿಕ್ಷಣದ ಒಂದು ಭಾಗ ಎಂದುಕೊಂಡಿರುವ ಇವರು, ತಮ್ಮ ಈ ಹವ್ಯಾಸದಿಂದ ಅವರ ದೃಷ್ಟಿಕೋನವನ್ನು ವಿಸ್ತರಿಸಲು ಮತ್ತು ವಿಭಿನ್ನ ಸಂಸ್ಕೃತಿಗಳ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ. ಅತ್ಯಾಸಕ್ತಿಯ ಓದುಗರು ಆಗಿದ್ದು ಕಥೆ, ಕಾದಂಬರಿ, ನಾಟಕಗಳ ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಬಿಡುವಿನ ವೇಳೆ ಚೆಸ್‌ ಆಡುವುದು ಮತ್ತು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕವು ವಿಶ್ರಾಂತಿ ಪಡೆಯುತ್ತಾರೆ. "... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ