ಕೇಂದ್ರ ಶಿಕ್ಷಣ ಸಚಿವಾಲಯವು ಕೆಲವು ರಾಜ್ಯಗಳಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಕೆಲವು ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಕಾರಣ, ವಿದ್ಯಾರ್ಥಿಗಳಿಗೆ ಬಿಸಿಲಿನಿಂದ ಯಾವುದೇ ತೊಂದರೆಯಾಗದಂತೆ ಕಾಪಾಡಲು, ಶಾಲಾ ಸಮಯದಲ್ಲಿ ಬದಲಾವಣೆ ಮತ್ತು ಸಮವಸ್ತ್ರದಲ್ಲಿ ಸಡಿಲಿಕೆ ಸೇರಿದಂತೆ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಮಾರ್ಗಸೂಚಿಯನ್ನು ಹೊರಡಿಸಿದೆ.
- ಶಾಲಾ ಸಮಯ ಮತ್ತು ದಿನಚರಿಯಲ್ಲಿ ಮಾರ್ಪಾಡು ಮಾಡಿಕೊಳ್ಳಯವಂತೆ ಸೂಚನೆ.
- ಶಾಲೆಯನ್ನು ಬೇಗನೆ ಪ್ರಾರಂಭಿಸಿ, ಮಧ್ಯಾಹ್ನದ ಮೊದಲು ಶಾಲೆಯನ್ನು ಮುಚ್ಚಬೇಕು.
- ಬೆಳಗ್ಗೆ 7 ಗಂಟೆಯಿಂದ ಶಾಲೆ ಆರಂಭಿಸುವಂತೆ ಸೂಚನೆ.
- ದಿನದ ಶಾಲಾ ಸಮಯವನ್ನು ಕಡಿಮೆ ಮಾಡಿಕೊಳ್ಳಬಹುದು.
- ಸಮವಸ್ತ್ರ ಧಾರಣೆ ಕಡ್ಡಾಯ ಬೇಡ, ಅನುಕೂಲ ಆಗುವ ಬಟ್ಟೆ ಧರಿಸಲು ಅವಕಾಶ ನೀಡಿ.
- ವಿದ್ಯಾರ್ಥಿಗಳು ಸಡಿಲವಾದ, ತಿಳಿ ಬಣ್ಣದ, ಹತ್ತಿಯ ತುಂಬು ತೋಳಿನ ಬಟ್ಟೆ ಧರಿಸಲು ಅನುಮತಿ ನೀಡಬಹುದು.
- ಕುತ್ತಿಗೆ ಪಟ್ಟಿಗೆ (ಟೈ) ವಿನಾಯಿತಿ ನೀಡಬಹುದು.
- ಕ್ರೀಡೆ ಮತ್ತು ಇತರೆ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡಿ. ಇಲ್ಲವೆ ಮುಂಜಾನೆ ಸಮಯದಲ್ಲಿ ನಡೆಸಬಹುದು.
- ಶಾಲಾ ಬಸ್/ ವ್ಯಾನ್ನಲ್ಲಿ ಹೆಚ್ಚು ದಟ್ಟಣೆ ಇರಬಾರದು.
- ಶಾಲಾ ಬಸ್/ ವಾಹನದಲ್ಲಿ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಬಾರದು.
- ಬಸ್/ವ್ಯಾನ್ನಲ್ಲಿ ಕುಡಿಯುವ ನೀರು ಮತ್ತು ಪ್ರಥಮ ಚಿಕಿತ್ಸೆ ಕಿಟ್ ಲಭ್ಯವಿರಬೇಕು.
- ಶಾಲಾ ಬಸ್/ ವ್ಯಾನ್ಗಳನ್ನು ನೆರಳಿನ ಪ್ರದೇಶದಲ್ಲಿ ನಿಲ್ಲಿಸಬೇಕು.
- ವಿದ್ಯಾರ್ಥಿಗಳಿಗೆ ನೀರಿನ ಬಾಟಲ್, ಕ್ಯಾಪ್, ಛತ್ರಿಗಳನ್ನು ತೆಗೆದುಕೊಂಡು ಬರಲು ಅವಕಾಶ ನೀಡಬೇಕು.
- ಚರ್ಮದ ಶೂ ಬದಲು ಕ್ಯಾನ್ವಸ್ ಶೂ ಬಳಕೆಗೆ ಅವಕಾಶ ಕೊಡಿ.
- ನಡೆದು ಅಥವಾ ಸೈಕಲ್ನಲ್ಲಿ ಬರುವಾಗ ತಲೆಯನ್ನು ಸಂಪೂರ್ಣವಾಗಿ ಮುಚ್ಚುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಬೇಕು.
- ಕೊಠಡಿಯ ಹೊರಗಿನ ಚಟುವಟಿಕೆ ಕಡಿಮೆ ಮಾಡಿ.
- ಶಾಲೆಗಳಲ್ಲಿ ಒಆರ್ಎಸ್, ಗ್ಲೂಕೋಸ್ ಸಂಗ್ರಹ ಮಾಡಿಕೊಳ್ಳಬೇಕು.
- ಹೆಚ್ಚೆಚ್ಚು ನೀರು ಕುಡಿಯುಂತೆ ಮಕ್ಕಳಿಗೆ ಅರಿವು ಮೂಡಿಸಿ.
ವಿದೇಶದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೀಸಾ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ದೇಶದ ಹಲವು ರಾಜ್ಯಗಳಲ್ಲಿ ಬಿಸಿಲಿನ ಧಗೆ ಏರುತ್ತಲೇ ಇದೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ಉಷ್ಣ ಮಾರುತದ ಪ್ರಭಾವ ಹೆಚ್ಚಾಗಿದೆ.
ಅದರಲ್ಲೂ ದೆಹಲಿಯಲ್ಲಿ 46 ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣಾಂಶ ದಾಖಲಾಗಿದೆ. ಕಳೆದ 72 ವರ್ಷಗಳಲ್ಲಿ ಈ ಬಾರಿ ಹೆಚ್ಚು ಉಷ್ಣಾಂಶ ದಾಖಲಾಗಿದೆ.