ಆ್ಯಪ್ನಗರ

ದಿಲ್ಲಿವಾಲಾಗಳ ಮನಗೆದ್ದ ಕೇಜ್ರಿವಾಲ! ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಆಪ್‌ ನಾಯಕ

ದಿಲ್ಲಿ ವಿಧಾನಸಭಾ ಚುನಾವಣೆಯತ್ತ ಇಡೀ ರಾಷ್ಟ್ರವೇ ಕಣ್ಣಿಟ್ಟಿದೆ. ಈ ಪೈಕಿ, ಅರವಿಂದ್‌ ಕೇಜ್ರಿವಾಲ್‌ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ.

Agencies 11 Feb 2020, 6:12 pm
ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿ ಸ್ಪರ್ಧಿಸಿದ್ದು, ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನೀಲ್‌ ಯಾದವ್‌ ವಿರುದ್ಧ 21 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
Vijaya Karnataka Web arvind kejriwal toi


ಮಂಗಳವಾರ ಫೆಬ್ರವರಿ 11ರಂದು ದಿಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದ ಹಿನ್ನೆಲೆ ಇಡೀ ದೇಶದ ಕಣ್ಣೇ ರಾಷ್ಟ್ರ ರಾಜಧಾನಿಯತ್ತ ನೆಟ್ಟಿತ್ತು. ಈ ಪೈಕಿ ಸಿಎಂ ಕೇಜ್ರಿವಾಲ್‌ ಸ್ಪರ್ಧಿಸಿದ್ದ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರ ಸಹ ಪ್ರಮುಖ ಕ್ಷೇತ್ರ ಎನಿಸಿಕೊಂಡಿದ್ದು, ಸತತ ಮೂರನೇ ಬಾರಿ ಗೆಲುವು ಸಾಧಿಸಿದ್ದಾರೆ ಕೇಜ್ರಿವಾಲ್‌.

2013ರಲ್ಲಿ ಹಾಗೂ 2015 ರಲ್ಲಿ ಎರಡು ಬಾರಿ ಈ ಸ್ಥಾನವನ್ನು ಕೇಜ್ರಿವಾಲ್‌ ಗೆದ್ದಿದ್ದು, ಈ ಬಾರಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. 2013 ರಲ್ಲಿ ಮೊದಲ ಬಾರಿ ಸ್ಪರ್ಧಿಸಿ ಮಾಜಿ ಸಿಎಂ ದಿವಂಗತ ಶೀಲಾ ದೀಕ್ಷಿತ್ ವಿರುದ್ಧ 25,864 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಳಿಕ 2015 ರಲ್ಲಿ ಕೇಜ್ರಿವಾಲ್ ಬಿಜೆಪಿ ಅಭ್ಯರ್ಥಿ ನೂಪುರ್ ಶರ್ಮಾ ಅವರನ್ನು 31,000 ಮತಗಳ ಅಂತರದಿಂದ ಸೋಲಿಸಿದರು.

ದಿಲ್ಲಿ ಫಲಿತಾಂಶ Live: ಆಮ್‌ ಆದ್ಮಿ ಪಕ್ಷ ಸ್ಪಷ್ಟ ಬಹುಮತದತ್ತ ದಾಪುಗಾಲು

ಈ ಬಾರಿ ಸಿಎಂ ಕೇಜ್ರಿವಾಲ್‌ಗೆ ಬಿಜೆಪಿಯ ಸುನೀಲ್ ಯಾದವ್ ಮತ್ತು ಕಾಂಗ್ರೆಸ್‌ನ ರೋಮೇಶ್ ಸಭರ್ವಾಲ್ ಸವಾಲು ಹಾಕಿದ್ದರು. ಫೆಬ್ರವರಿ 8 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಸ್ಥಾನದಿಂದ 28 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಸದ್ಯ, ಅರವಿಂದ್‌ ಕೇಜ್ರಿವಾಲ್‌ ಸಮೀಪದ ಪ್ರತಿಸ್ಪರ್ಧಿ ಸುನೀಲ್‌ ಕುಮಾರ್‌ ಯಾದವ್‌ ಅವರಿಗಿಂತ ಸುಮಾರು 19 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು, ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ.
ಫಲಿತಾಂಶ

ದಿಲ್ಲಿ ಫಲಿತಾಂಶ ಪ್ರಮುಖಾಂಶಗಳು: ಅಂತಿಮ ಫಲಿತಾಂಶ ಬರಲಿ, ದಾಖಲೆ ಬರೆಯುತ್ತೇವೆ, ಎಎಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ