ಆ್ಯಪ್ನಗರ

ದಿಲ್ಲಿಯಲ್ಲಿ 15 ವರ್ಷ ಸುದೀರ್ಘ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಎರಡು ಬಾರಿ ಸೊನ್ನೆ ಸುತ್ತಿದ್ದೇಕೆ?

15 ವರ್ಷಗಳ ಕಾಲ ದಿಲ್ಲಿಯಲ್ಲಿ ವಿರಾಜಮಾನವಾಗಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ಅನ್ನು 2013ರಲ್ಲಿ ಗದ್ದುಗೆಯಿಂದ ಇಳಿಸಿದ್ದು ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ. ಮೈತ್ರಿ ಸರಕಾರ ರಚನೆಯಾಗಿತ್ತಾದರೂ 49 ದಿನಗಳಿಗೆ ಮೈತ್ರಿ ಮುರಿದುಬಿತ್ತು. ನಂತರ 2015ರಲ್ಲಿ ಶೂನ್ಯ ಸುತ್ತಿದ ಕಾಂಗ್ರೆಸ್‌ ಈ ಬಾರಿಯೂ ಶೂನ್ಯ ಸಾಧನೆ ಮಾಡಿದೆ.

Vijaya Karnataka 12 Feb 2020, 11:12 am
ಹಣ ಬಲ, ತೋಳ್ಬಲಕ್ಕೆ ಮತದಾರ ಎಂದಿಗೂ ಸೊಪ್ಪು ಹಾಕಲಾರ ಎಂಬುದನ್ನು ದಿಲ್ಲಿ ಫಲಿತಾಂಶ ನಿರೂಪಿಸಿದೆ. ಹಾಗೇಯೇ, ಈ ಚುನಾವಣೆಯಲ್ಲಿ ವಿಪರೀತ ಪ್ರಚೋದನಾಕಾರಿ ಹೇಳಿಕೆಗಳು, ವೈಯಕ್ತಿಕ ನಿಂದನೆಗಳು ದಾಖಲಾದವು. ಆದರೆ, ಇವು ಯಾವುವೂ ಮತದಾರರ ನಿರ್ಧಾರದ ಮೇಲೆ ಪ್ರಭಾವ ಬೀರಲಿಲ್ಲ. ಲಂಗುಲಗಾಮು ಇಲ್ಲದ ಹೇಳಿಕೆಗಳು ಮತಗಳನ್ನು ತಂದು ಕೊಡುವುದರ ಬದಲು ನಷ್ಟಕ್ಕೆ ಕಾರಣವಾದವು.
Vijaya Karnataka Web Rahul Gandhi


ಚುನಾವಣೆ ಗೆಲ್ಲಲು ಯಾವುದೇ ಗಿಮಿಕ್‌ಗಳು, ಪೊಳ್ಳು ಆಶ್ವಾಸನೆಗಳು ಸಾಕಾಗುವುದಿಲ್ಲ. ಬದಲಿಗೆ ವಿಶ್ವಾಸಭರಿತ ವಾಗ್ದಾನಗಳು, ಈ ಹಿಂದೆ ಮಾಡಿದ ಅಭಿವೃದ್ಧಿ ಪರ ಕೆಲಸಗಳೇ ಶ್ರೀರಕ್ಷೆಯಾಗುತ್ತವೆ ಎಂಬುದನ್ನು ಆಪ್‌ ಸಾದರಪಡಿಸಿದೆ. ಆಪ್‌ನ ಈ ದಿಗ್ವಿಜಯವು ಅದರ ನೆಲೆಯನ್ನು ದಿಲ್ಲಿಯ ಆಚೆಗೂ ವಿಸ್ತರಿಸಲು ಬಲ ತುಂಬಲಿದೆ. ಹಾಗೆಯೇ, ಮುಂಬರುವ ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ಸ್ಪಷ್ಟವಾದ ಮಾರ್ಗದರ್ಶಿ ಸೂತ್ರಗಳನ್ನು ಹಾಕಿಕೊಟ್ಟಿದೆ. ಅಭಿವೃದ್ಧಿ ರಾಜಕಾರಣವೊಂದೇ ಶಾಶ್ವತ; ಮಿಕ್ಕಿದ್ದೆಲ್ಲ ತಾತ್ಕಾಲಿಕ ಎಂಬುದನ್ನು ದಿಲ್ಲಿ ಚುನಾವಣೆಯ ಫಲಿತಾಂಶ ಸಾರಿ ಹೇಳಿದೆ.

1. ನಾಯಕತ್ವದ ಕೊರತೆ: ದಿಲ್ಲಿಕಾಂಗ್ರೆಸ್‌ನಲ್ಲಿನಾಯಕತ್ವದ ಕೊರತೆ ಎದ್ದು ಕಾಣಿತು. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ವರ್ಚಸ್ಸು ಹೆಚ್ಚಿಗೆ ಕೆಲಸ ಮಾಡ್ಲಿಲ್ಲ.

2. ಮುಖ್ಯಮಂತ್ರಿ ಅಭ್ಯರ್ಥಿ ಇರಲಿಲ್ಲ: ಕೇಜ್ರಿವಾಲ್‌ಗೆ ಸರಿಗಟ್ಟುವ ಸಿಎಂ ಅಭ್ಯರ್ಥಿ ಕಾಂಗ್ರೆಸ್‌ನಲ್ಲೂಇರಲಿಲ್ಲ. ಉನ್ನತ ನಾಯಕತ್ವ ಈ ತಲೆಕೆಡಿಸಿಕೊಂಡಂತೆ ಕಾಣಲೂ ಇಲ್ಲ.

3. ಟೀಕೆ-ಟಿಪ್ಪಣಿ: ಕಾಂಗ್ರೆಸ್‌ ನಾಯಕರು ಆಪ್‌ನಂತೆ ಜಾಣತನ ಪ್ರದರ್ಶಿಸಲಿಲ್ಲ. ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಮುಂದಾದ್ದು ಕೂಡ ಹಿನ್ನಡೆಗೆ ಕಾರಣವಾಯಿತು.

4. ಲಾಭ ಪಡೆಯದ ಕಾಂಗ್ರೆಸ್‌: 15 ವರ್ಷಗಳ ಕಾಲ ದಿಲ್ಲಿಆಳಿದ್ದ ಕಾಂಗ್ರೆಸ್‌, ತನ್ನ ಆಡಳಿತದ ಒಳ್ಳೆಯ ಕೆಲಸಗಳನ್ನು ಜನರ ಮುಂದಿಡುವಲ್ಲಿವಿಫಲವಾಯಿತು.

5. ಶಸ್ತ್ರತ್ಯಾಗ: ಕಾಂಗ್ರೆಸ್‌ ತಾನು ಗೆಲ್ಲುವುದಕ್ಕಿಂತಲೂ ಬಿಜೆಪಿ ಸೋಲುವುದು ಮುಖ್ಯ ಎಂದು ಭಾವಿಸದಂತಿತ್ತು. ಹಾಗಾಗಿಯೇ ಆಪ್‌ ಗೆಲುವಿನಲ್ಲಿತನ್ನ ಗೆಲುವು ಕಾಣುತ್ತಿದೆ!

66ರ ಪೈಕಿ 63ರಲ್ಲಿ ಠೇವಣಿ ನಷ್ಟ, ಹೀನಾಯ ಸೋಲಿನ ಬೆನ್ನಲ್ಲೇ ದಿಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಜೀನಾಮೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ