ಆ್ಯಪ್ನಗರ

ಎರಡು ರೂಪಾಯಿಗೆ ಕೆ.ಜಿ. ಹಿಟ್ಟು: ದಿಲ್ಲಿ ಜನತೆಗೆ ಬಿಜೆಪಿ ಭರವಸೆ

"ಗೋಧಿ ಅಥವಾ ಧಾನ್ಯವನ್ನು ಈಗಿನ ಸರಕಾರ ಕೆ.ಜಿಗೆ ಎರಡು ರೂಪಾಯಿ ದರದಲ್ಲಿ ವಿತರಿಸುತ್ತಿದೆ. ಆದರೆ ಅದನ್ನು ಹಿಟ್ಟು ಮಾಡಿಸಲು ಕೆ.ಜಿಗೆ ಐದು ರೂಪಾಯಿ ವೆಚ್ಚ ಮಾಡಬೇಕಾಗಿದೆ. ಹೀಗಾಗಿ ನಾವು ಅಧಿಕಾರಕ್ಕೆ ಬಂದರೆ ಎರಡು ರೂಪಾಯಿಗೆ ಒಂದು ಕೆ.ಜಿ ಹಿಟ್ಟು ನೀಡುತ್ತೇವೆ," ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ವಿವರಿಸಿದ್ದಾರೆ.

Agencies 31 Jan 2020, 8:58 pm
ಹೊಸದಿಲ್ಲಿ: ವಿಧಾನಸಭೆ ಚುನಾವಣೆಗೆ ಎಂಟು ದಿನ ಇರುವಾಗ ಬಿಜೆಪಿಯು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಡವರಿಗೆ ಕೆ.ಜಿ.ಗೆ ಎರಡು ರೂಪಾಯಿ ದರದಲ್ಲಿ ಹಿಟ್ಟು ಪೂರೈಸುವುದು ಪ್ರಮುಖ ಆಶ್ವಾಸನೆಯಾಗಿದೆ. ನಗರದ ವಾಯು ಮಾಲಿನ್ಯವನ್ನು ನಿಯಂತ್ರಿಸುವುದರ ಜತೆಗೆ ದಿಲ್ಲಿ ಜನರಿಗೆ ಪರಿಶುದ್ಧ ನೀರು ಪೂರೈಸುವುದಾಗಿಯೂ ಪಕ್ಷ ಭರವಸೆ ನೀಡಿದೆ.
Vijaya Karnataka Web BJP Manifesto Release


'ಸಂಕಲ್ಪ ಪತ್ರ'ವನ್ನು ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ, ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ಪ್ರಕಾಶ್‌ ಜಾವಡೇಕರ್‌, ಡಾ. ಹರ್ಷವರ್ಧನ್‌ ಶುಕ್ರವಾರ ಬಿಡುಗಡೆ ಮಾಡಿದರು. "ಗೋಧಿ ಅಥವಾ ಧಾನ್ಯವನ್ನು ಈಗಿನ ಸರಕಾರ ಕೆ.ಜಿಗೆ ಎರಡು ರೂಪಾಯಿ ದರದಲ್ಲಿ ವಿತರಿಸುತ್ತಿದೆ. ಆದರೆ ಅದನ್ನು ಹಿಟ್ಟು ಮಾಡಿಸಲು ಕೆ.ಜಿಗೆ ಐದು ರೂಪಾಯಿ ವೆಚ್ಚ ಮಾಡಬೇಕಾಗಿದೆ. ಹೀಗಾಗಿ ನಾವು ಅಧಿಕಾರಕ್ಕೆ ಬಂದರೆ ಎರಡು ರೂಪಾಯಿಗೆ ಒಂದು ಕೆ.ಜಿ ಹಿಟ್ಟು ನೀಡುತ್ತೇವೆ," ಎಂದು ತಿವಾರಿ ವಿವರಿಸಿದರು.

ಪ್ರಣಾಳಿಕೆಯ ಮುಖ್ಯಾಂಶಗಳು

- ದಿಲ್ಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ

- ಕಲುಷಿತಗೊಂಡಿರುವ ಯಮುನಾ ನದಿ ಶುದ್ಧೀಕರಣಕ್ಕೆ ಯಮುನಾ ಅಭಿವೃದ್ಧಿ ಮಂಡಳಿ ರಚನೆ

- ಆಯುಷ್ಮಾನ್‌ ಭಾರತ್‌, ಕಿಸಾನ್‌ ಸಮ್ಮಾನ್‌ ನಿಧಿಯಂತಹ ಕೇಂದ್ರ ಪ್ರಾಯೋಜಿತ ಯೋಜನೆಗಳ ಜಾರಿ

- ಬೀಗಮುದ್ರೆ ಕಾರ್ಯಾಚರಣೆಗೆ ಶಾಶ್ವತ ಪರಿಹಾರ, ಅನಧಿಕೃತ ಕಾಲೊನಿಗಳ ಸಕ್ರಮ ಮತ್ತು ನಿಯಂತ್ರಣಕ್ಕೆ ಕ್ರಮ

- ಬಡ ಕುಟುಂಬದಿಂದ ಬಂದ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್‌ ಸ್ಕೂಟರ್‌ ವಿತರಣೆ

ದಿಲ್ಲಿಯ 1,000 ಮೊಹಲ್ಲಾ ಕ್ಲಿನಿಕ್‌ಗಳ ಸೌಲಭ್ಯದ ಕುರಿತು ಕುಟುಕು ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿಕೊಂಡು ಬಿಜೆಪಿ ನಕಲಿ ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಇದು ಜನರ ದಾರಿ ತಪ್ಪಿಸುವ ತಂತ್ರ.
ಅರವಿಂದ್‌ ಕೇಜ್ರಿವಾಲ್‌, ದಿಲ್ಲಿ ಸಿಎಂ

ಇದಕ್ಕೆ ಎಎಪಿ ಆಕ್ರೋಶ ವ್ಯಕ್ತಪಡಿಸಿದೆ. "ಬಿಜೆಪಿ ಪ್ರಕಟಿಸಿರುವ ಪ್ರಣಾಳಿಕೆಯು ಸಂಕಲ್ಪ ಪತ್ರವಲ್ಲ. ಎಲ್ಲ ಜನಪರ ಯೋಜನೆಗಳನ್ನೂ ನಾಶಪಡಿಸುವ 'ಬರ್ಬಾದಿ ಪತ್ರ'," ಎಂದು ಆಪ್‌ ನಾಯಕ ಸಂಜಯ್‌ ಸಿಂಗ್‌ ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌