ಆ್ಯಪ್ನಗರ

ಹರಿಯಾಣದಲ್ಲಿ ಬಿಜೆಪಿ-ಜೆಜೆಪಿ ಹೊಸ ಇನ್ನಿಂಗ್ಸ್‌ : ಚೌಟಾಲಾಗೆ ಡಿಸಿಎಂ ಪಟ್ಟ

ಹರಿಯಾಣದಲ್ಲಿ ಬಿಜೆಪಿಯ 2ನೇ ಇನ್ನಿಂಗ್ಸ್‌ ಆರಂಭಕ್ಕೆ ಮಹೂರ್ತ ನಿಗದಿಯಾಗಿದ್ದು, ಭಾನುವಾರ ಮಧ್ಯಾಹ್ನ 2ನೇ ಬಾರಿಗೆ ಸಿಎಂ ಆಗಿ ಎಂಎಲ್‌ ಖಟ್ಟರ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂತೆಯೇ ಜೆಜೆಪಿ ನಾಯಕ ದುಷ್ಯಂತ್‌ ಚೌಟಾಲಾ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

TIMESOFINDIA.COM 26 Oct 2019, 4:25 pm
ಚಂಡೀಗಡ: ಬಿಜೆಪಿಯ ಎಂಎಲ್‌ ಖಟ್ಟರ್‌ 2ನೇ ಬಾರಿಗೆ ಹರಿಯಾಣದ ಮುಖ್ಯಮಂತ್ರಿಯಾಗಿ ಭಾನುವಾರ 2.30ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದಾರೆ.
Vijaya Karnataka Web BJP


ಜೆಜೆಪಿ ನಾಯಕ, ದುಷ್ಯಂತ್‌ ಚೌಟಾಲಾ ಇದೇ ವೇದಿಕೆಯಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶನಿವಾರ ಚಂಡೀಗಡದಲ್ಲಿ ನಡೆದ ಬಿಜೆಪಿ ಸಭೆಯ ಬಳಿಕ ರಾಜ್ಯಪಾಲ ಸತ್ಯದಿಯೊ ನಾರೈನ್‌ ಅವರನ್ನು ಭೇಟಿಯಾದ ಬಿಜೆಪಿ ನೇತೃತ್ವದ ನಿಯೋಗ, ಸರಕಾರ ರಚನೆಗೆ ಅನುಮತಿ ಕೇಳಿದೆ.

ಬಿಜೆಪಿಗೆ ತಮ್ಮ ಐದು ಮಂದಿ ಶಾಸಕರ ಬೆಂಬಲ ನೀಡುವುದಾಗಿ ಅವರು ಘೋಷಣೆ ಮಾಡಿದ್ದರು. ಈ ಬಳಿಕ ಬಿಜೆಪಿ ಗೋಪಾಲ್‌ ಕಾಂಡಾ ಅವರ ಬೆಂಬಲ ಪಡೆಯದೇ ಇರಲು ನಿರ್ಧರಿಸಿತ್ತು.ರಾಜ್ಯಪಾಲರ ಭೇಟಿ ವೇಳೆ ಖಟ್ಟರ್‌ ತಮ್ಮ ಪ್ರಸ್ತುತ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶಾಸಕಾಂಗ ಪಕ್ಷದ ನಾಯಕನಾಗಿ ಖಟ್ಟರ್‌ ಆಯ್ಕೆ, ಭಾನುವಾರ ಪ್ರಮಾಣ ವಚನ ಸಾಧ್ಯತೆ

ಏತನ್ಮಧ್ಯೆ ದಿಲ್ಲಿಯ ತಿಹಾರ್‌ ಜೈಲಿನಲ್ಲಿರುವ ದುಷ್ಯಂತ್‌ ತಂದೆ ಅಜಯ್‌ ಚೌಟಾಲಾ ಅವರಿಗೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ 2 ವಾರಗಳ ಫರ್‌ಲಾ(ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಭೇಟಿ ಮಾಡಲು ಅವಕಾಶ) ಮಂಜೂರು ಮಾಡಲಾಗಿದೆ. ಶನಿವಾರ ಸಂಜೆ ಅಥವಾ ಅ.28 ರ ಬೆಳಗ್ಗೆ ಅವರು ತಿಹಾರ್‌ ಜೈಲಿನಿಂದ 2 ವಾರಗಳ ಕಾಲ ಹೊರಬರಲಿದ್ದಾರೆ. ತಿಹಾರ್‌ ಜೈಲಿನ ಡಿಜಿ ಸಂದೀಪ್‌ ಗೋಯಲ್‌ ಈ ಸಂಬಂಧ ಸ್ಪಷ್ಟನೆಯನ್ನೂ ನೀಡಿದ್ದಾರೆ.

ನಮ್ಮ ಉದ್ದೇಶ, ನೀತಿಗಳಿಗೆ ಮನ್ನಣೆ ನೀಡುವವರಿಗೆ ನಮ್ಮ ಬೆಂಬಲ ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌