ಆ್ಯಪ್ನಗರ

5 ರೂ. ನಾಣ್ಯಗಳ ಗಂಟು ತಂದು ಠೇವಣಿ ಸಲ್ಲಿಸಿದ ಐದು ರೂ. ಡಾಕ್ಟರ್

ಸಕ್ಕರೆ ನಾಡಿನಲ್ಲಿ ಜನಪ್ರಿಯ ವೈದ್ಯ

Vijaya Karnataka Web 23 Apr 2018, 4:26 pm
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಐದು ರೂಪಾಯಿ ವೈದ್ಯ ಎಂದೇ ಖ್ಯಾತರಾಗಿರುವ ಡಾ.ಶಂಕರೇಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
Vijaya Karnataka Web 5 ರೂಪಾಯಿ ನಾಣ್ಯದ ಗಂಟು
5 ರೂಪಾಯಿ ನಾಣ್ಯದ ಗಂಟು


ಅಚ್ಚರಿಯ ವಿಷಯ ಎಂದರೆ ಐದು ರೂ ವೈದ್ಯ ಎಂದೇ ಹೆಸರುವಾಸಿಯಾಗಿ, ಚಿಕಿತ್ಸೆಗಾಗಿ ಪಡೆದಿದ್ದ ಐದು ರೂಪಾಯಿ ನಾಣ್ಯಗಳನ್ನೇ ನಾಮಪತ್ರದ ಜತೆ ಠೇವಣಿಯಾಗಿ ಸಲ್ಲಿಸಿದ್ದಾರೆ.

10 ಸಾವಿರ ರೂಪಾಯಿಯಷ್ಟು ನಾಣ್ಯಗಳನ್ನು ತಂದು ಶಂಕರೇಗೌಡರು ನಾಮಪತ್ರದ ಜತೆ ಸಲ್ಲಿಸಿದರು.

10 ಸಾವಿರ ರೂಪಾಯಿ ಮೌಲ್ಯದ ಐದು ರೂ. ನಾಣ್ಯಗಳನ್ನು ಸ್ವೀಕರಿಸಿದ ಚುನಾವಣಾಧಿಕಾರಿ ನಂತರ ಇದನ್ನು ನೋಟುಗಳಾಗಿ ಪರಿವರ್ತಿಸಿಕೊಂಡರು.

ಜೆಡಿಎಸ್‌ನಿಂದ ಶಂಕರೇಗೌಡರು ನಾಮಪತ್ರ ಸಲ್ಲಿಸುತ್ತಾರೆ ಎಂಬ ವದಂತಿ ಇತ್ತು.

ಆದರೆ ಜೆಡಿಎಸ್‌ನಿಂದ ಟಿಕೆಟ್‌ ಸಿಗದ ಕಾರಣ ಶಂಕರೇಗೌಡರು ಬಿಜೆಪಿಯ ಕಡೆ ಮುಖ ಮಾಡಿದ್ದಾರೆ ಎಂಬು ಗುಸುಗುಸು ಕೂಡ ಕೇಳಿಬಂದಿತ್ತು.

ಆದರೆ ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಶಂಕರೇಗೌಡರು ನಾಮಪತ್ರ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌