ಆ್ಯಪ್ನಗರ

Siddaramaiah: ವರುಣಾ ಅಲ್ಲ.. ಸಿದ್ದರಾಮಯ್ಯ ಸ್ಪರ್ಧೆಗೆ ಸಜ್ಜಾಗ್ತಿದೆ ಹೊಸ ಕ್ಷೇತ್ರ! ಇಲ್ಲಿ ಸಿದ್ದು ಆಪ್ತರು ಫುಲ್‌ ಆ್ಯಕ್ಟೀವ್‌!

Siddaramaiah Contest in Kushtagi: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರ ಸ್ಪರ್ಧಾ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದರ ಕುರಿತು ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಮತ್ತೆ ವರುಣಾಗೆ ಹೋಗ್ತಾರೆ ಎಂಬ ಮಾತುಗಳ ನಡುವೆಯೇ ಹೊಸ ಕ್ಷೇತ್ರವೊಂದು ಅವರ ಪಟ್ಟಿಗೆ ಬಂದಿದ್ದು, ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಸ್ಪರ್ಧಿಸ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಸಿದ್ದು ಆಪ್ತ, ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಕುಷ್ಟಗಿ ಕ್ಷೇತ್ರದಲ್ಲಿ ಫುಲ್‌ ಆ್ಯಕ್ಟೀವ್‌ ಆಗಿದ್ದು, ಎಲ್ಲ ಅನುಮಾನಗಳಿಗೆ ರೆಕೆ-ಪುಕ್ಕ ಬಂದಂತಾಗಿದೆ.

Edited byಅವಿನಾಶ ವಗರನಾಳ | Vijaya Karnataka Web 20 Mar 2023, 9:37 am

ಹೈಲೈಟ್ಸ್‌:

  • ಕೋಲಾರ, ವರುಣದ ಬಳಿಕ ಹೊಸ ಕ್ಷೇತ್ರದತ್ತ ಮುಖ ಮಾಡಿದ ಸಿದ್ದರಾಮಯ್ಯ
  • ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಸಾಧ್ಯತೆ
  • ಸಿದ್ದು ಆಪ್ತ, ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಕುಷ್ಟಗಿ ಕ್ಷೇತ್ರದಲ್ಲಿ ಫುಲ್‌ ಆ್ಯಕ್ಟೀವ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Siddaramaiah searching constituency
ಸಿದ್ದರಾಮಯ್ಯ
* ಶ್ರೀಕಾಂತ ಅಕ್ಕಿ ಕೊಪ್ಪಳ
ರಾಜ್ಯದಲ್ಲೀಗ ಪ್ರತಿ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದೇ ದೊಡ್ಡ ಸುದ್ದಿಯಾಗಿದ್ದು ಚರ್ಚೆಗೆ ಗ್ರಾಸ ಒದಗಿಸಿದೆ. ಕೋಲಾರ ಸೇಫ್‌ ಅಲ್ಲಎಂದು ಎಐಸಿಸಿ ವರಿಷ್ಠ ರಾಹುಲ್‌ ಗಾಂಧಿಯವರು ಸಿದ್ದುಗೆ ಹೊಸದಿಲ್ಲಿಯ ಸಭೆಯಲ್ಲಿ ಹೇಳಿದ್ದಾರೆ ಎಂದ ಬಳಿಕ ಮತ್ತೆ ವರುಣಾ ಇಲ್ಲವೇ ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದತ್ತ ಸಿದ್ದು ಬರಬಹುದು ಎಂಬ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಶುರುವಾಗಿವೆ.ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉಮೇದಿನಲ್ಲಿ ಕಾಂಗ್ರೆಸ್‌ ಇದೆ.
ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ಸಿದ್ದರಾಮಯ್ಯ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನೂ ಸಿದ್ದರಾಮಯ್ಯಗೆ ಪ್ರತಿ ಪಕ್ಷಗಳಿಗಿಂತ ಸ್ವಪಕ್ಷದವರೇ ಹೆಚ್ಚಿನ ಮಟ್ಟದಲ್ಲಿಈ ಬಾರಿ ಮುಳುವಾಗಲಿದ್ದಾರೆ ಎಂಬ ಮಾತಿದೆ. ಹೀಗಾಗಿ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿಈವರೆಗೆ ಸಿದ್ದರಾಮಯ್ಯನವರಿದ್ದರು. ಕೊನೆಗೂ ಅಳೆದು ತೂಗಿ, ಮುನಿಯಪ್ಪ ಬಂಡಾಯ ಶಮನಗೊಳಿಸಿ, ಕೋಲಾರದಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದರು.ಆದರೀಗ ಕೋಲಾರದಲ್ಲಿಅಂದುಕೊಂಡಂತೆ ಗೆಲುವು ಸುಲಭವಿಲ್ಲಎಂಬ ವಾತಾವರಣ ಬೆಳಕಿಗೆ ಬಂದಿದ್ದು ಸಿದ್ದು ಯಾವ ಕ್ಷೇತ್ರದತ್ತ ಮುಖ ಮಾಡುತ್ತಾರೆ ಎನ್ನುವ ಚರ್ಚೆ ನಡೆದಿದೆ.

ಕುಷ್ಟಗಿಯತ್ತ ಮುಖ?
ಕಳೆದ ತಿಂಗಳು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ ಜನ್ಮ ದಿನಾಚರಣೆ ಅಂಗವಾಗಿ ಕುಷ್ಟಗಿಯಲ್ಲಿಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯನವರಿಗೆ ಕುಷ್ಟಗಿ ಕ್ಷೇತ್ರದಲ್ಲಿಸ್ಪರ್ಧೆ ಮಾಡಿ ಎಂದು ಅವರ ಅಭಿಮಾನಿಗಳು, ಹಿತೈಷಿಗಳು, ಸ್ವತಃ ಶಾಸಕ ಬಯ್ಯಾಪೂರ ಬಹಿರಂಗವಾಗಿ ಆಹ್ವಾನ ಮಾಡಿದ್ದರು. ಆದರೆ, ಪ್ರೀತಿಯ ಮನವಿಯನ್ನು ನಯವಾಗಿಯೇ ತಿರಸ್ಕರಿಸಿದ್ದ ಸಿದ್ದು ತಾವು ಕುಷ್ಟಗಿಯಿಂದ ಸ್ಪರ್ಧಿಸುವುದಿಲ್ಲಎಂದು ಹೇಳಿದ್ದರು.

ಕೋಲಾರ ಸ್ಪರ್ಧೆಯಿಂದ ಬಹುತೇಕ ಹಿಂದೆ ಸರಿದ ಸಿದ್ದರಾಮಯ್ಯ, ವರುಣದತ್ತ ಮುಖ: ರಾಜಕೀಯ ಪರಿಣಾಮಗಳೇನು?
ಆದರೆ, ಸಿದ್ದು ಅತ್ಯಾಪ್ತ ಬಣದಲ್ಲಿರುವ ಸತೀಶ ಜಾರಕಿಹೊಳಿ ಅವರು ಮಾತ್ರ ಪ್ರತಿ ವಾರಕ್ಕೊಮ್ಮೆ ಕುಷ್ಟಗಿ ಕ್ಷೇತ್ರಕ್ಕೆ ಭೇಟಿ ನೀಡಿ ಗಮನ ಸೆಳೆಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿಸಿದ್ದರಾಮಯ್ಯ ಬಾದಾಮಿಯಿಂದ ನಿಂತಾಗ ಅವರ ಗೆಲುವಿಗೆ ಹೆಗಲು ಕೊಟ್ಟು ನಿಂತಿದ್ದರು. ಹೀಗಾಗಿ ಈ ಬಾರಿ ಕೊನೆ ಗಳಿಗೆಯಲ್ಲಿಸಿದ್ದು ಕುಷ್ಟಗಿಗೆ ಬಂದರೂ ಬರಬಹುದು ಎಂಬ ಲೆಕ್ಕಾಚಾರದೊಂದಿಗೆಯೇ ಸಿದ್ದು ಪರ ಸತೀಶ ಜಾರಕಿಹೊಳಿ ಕುಷ್ಟಗಿ ಕ್ಷೇತ್ರದಲ್ಲಿಸೈಲೈಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿವೆ.

Siddaramaiah : ಸಿದ್ದರಾಮಯ್ಯ ದಲಿತ ದ್ರೋಹಿ; ಕೋಲಾರ ಚುನಾವಣೆಗೆ 6 ಕೋಟಿ ರೂ. ಕೇಳಿದ್ದಾರೆ - ದಲಿತ ಮುಖಂಡ ನಾರಾಯಣಸ್ವಾಮಿ
ಜಾರಕಿಹೊಳಿಗೆ ಹೆಚ್ಚಿನ ಒಲವು:
ಶನಿವಾರ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಶಾಲಾ ಮಕ್ಕಳಿಗೆ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ನಿಂದ ಡೆಸ್ಕ್‌ ವಿತರಿಸಲಾಗಿದೆ. ತನ್ನ ಕ್ಷೇತ್ರ ಬಿಟ್ಟು ಕುಷ್ಟಗಿಯಲ್ಲಿಸತೀಶ್‌ ಜಾರಕಿಹೊಳಿ ಡೆಸ್ಕ್‌ ವಿತರಣೆ ಮಾಡಿರುವ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರ ಇಲ್ಲ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇಲ್ಲದಿದ್ದರೇ ಒಂದು ವೇಳೆ ಕುಷ್ಟಗಿ ಕ್ಷೇತ್ರದ ಮೇಲೆ ಜಾರಕಿಹೊಳಿಗೆ ಯಾಕೆ ಹೆಚ್ಚಿನ ಒಲವಿದೆ ಎಂಬ ಪ್ರಶ್ನೆಗಳು ಮೂಡಿವೆ.

Varthur Prakash: ಸಿದ್ದರಾಮಯ್ಯರೇ ನನ್ನ ವಿರುದ್ಧ ಸ್ಪರ್ಧಿಸುತ್ತಿಲ್ಲ, ಬೇರೆಯವರು ನನಗೆ ಯಾವ ಲೆಕ್ಕ: ವರ್ತೂರು ಪ್ರಕಾಶ್‌
ಕುಷ್ಟಗಿಯಲ್ಲಿ ಸಿದ್ದು ಸೇಫ್‌!
ಜಿಲ್ಲೆಯ ಪೈಕಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸಿದ್ದು ಬರ್ತಾರೆ ಎನ್ನುವ ಮಾತುಗಳಿದ್ದವು. ಆದರೀಗ ಕೊಪ್ಪಳಕ್ಕಿಂತ ಸಿದ್ದುಗೆ ಕುಷ್ಟಗಿ ಸೇಫ್‌ ಎನ್ನುವ ಲೆಕ್ಕಾಚಾರಗಳಿವೆ. ಇಲ್ಲಿ ಕುರುಬರು ಸೇರಿ ಅಹಿಂದ ವರ್ಗದ ಮತಗಳು ಹೆಚ್ಚಿವೆ. ಜತೆಗೆ ಸಿದ್ದು ಅಭ್ಯರ್ಥಿಯಾದರೇ ಕುಷ್ಟಗಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ದೊಡ್ಡನಗೌಡ ಪಾಟೀಲ್‌ ಕೊನೆ ಗಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ಸಿದ್ದು ಪರ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳಿವೆ. ಹೀಗಾಗಿ ರಾಜ್ಯದಲ್ಲಿಸಿದ್ದುಗೆ ಕುಷ್ಟಗಿಯೇ ಸೇಫ್‌ ಎನ್ನಲಾಗುತ್ತಿದೆ.


ಅಂದುಕೊಂಡಂತೆ ಸಿದ್ದು ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಬಂದರೇ ಕಲ್ಯಾಣ ಕರ್ನಾಟಕದ 22 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರವೂ ಇದೆ. ಇನ್ನೂ, ಇಲ್ಲಿನ ಹಾಲಿ ಶಾಸಕ ಅಮರೇಗೌಡ ಬಯ್ಯಾಪೂರ್‌, ಸಿದ್ದರಾಮಯ್ಯನವರು ಕುಷ್ಟಗಿಗೆ ಬಂದರೇ ಹೆಚ್ಚಿನ ಮತಗಳ ಅಂತರದಲ್ಲಿಗೆಲ್ಲಿಸಿ ಕೊಡುವೆವು. ಆದರೆ, ಅವರೇ ಈ ಹಿಂದೆಯೇ ನಾನು ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಬರುವುದಿಲ್ಲಎಂದಿದ್ದಾರೆ ಎಂದು ಹೇಳಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ