ಹೊಸದಿಲ್ಲಿ: ಕರ್ನಾಟಕ ವಿಧಾನಸಭಾ ಚುನಾವಣೆ 2018 ಫಲಿತಾಂಶದಲ್ಲಿ 104 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸಹಜವಾಗಿಯೇ ರಾಜ್ಯಪಾಲ ವಜುಭಾಯಿ ವಾಲಾ ಸರಕಾರ ರಚಿಸುವಂತೆ ಬಿಎಸ್ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದರು.
ಆದರೆ ಬುಧವಾರ ತಡ ರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಸರಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿತ್ತು.
ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮನವಿಯನ್ನು ದೇಶದ ಸರ್ವೋಚ್ಚ ನ್ಯಾಯಾಲಯದ ತ್ರಿ ಸದಸ್ಯ ಪೀಠ ತಿರಸ್ಕರಿಸುವುದರೊಂದಿಗೆ ಕಾನೂನು ಹೋರಾಟದಲ್ಲೂ ಹಿನ್ನಡೆ ಅನುಭವಿಸಿದೆ. ಇದರಂತೆ ನಿಗದಿತ ಸಮಯದಂತೆ ಬಿಎಸ್ವೈ ಗುರುವಾರ ಬೆಳಗ್ಗೆ 9 ಗಂಟೆಗೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.
ಬಿಜೆಪಿ ಕಾನೂನು ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಮುಕುಲ್ ರೋಹ್ಟಗಿ ಮಂಡಿಸಿರುವ ವಾದ. ತಮ್ಮ ವಾದದಲ್ಲಿ ಎಲ್ಲೂ ಯಡಿಯೂರಪ್ಪ ಅಥವಾ ಬಿಜೆಪಿ ಬಗ್ಗೆ ಕಿಂಚಿತ್ತು ಮಾತು ಎತ್ತದ ರೋಹ್ಟಗಿ, ಸುಪ್ರೀಂ ಕೋರ್ಟ್ ಮುಂದೆ ಬಹಳಷ್ಟು ಕೌಶಲ್ಯ ಭರಿತವಾಗಿ ರಾಜ್ಯಪಾಲರ ವಿವೇಚನಾ ಅಧಿಕಾರದ ಬಗ್ಗೆ ವಾದ ಮಂಡಿಸಿದರು. ಇದು ಕೊನೆಗೆ ಕಾನೂನು ಸಮರ ಗೆಲುವಿನಲ್ಲೂ ಮಾಸ್ಟರ್ ಸ್ಟ್ರೋಕ್ ಆಗಿ ಪರಿಣಮಿಸಿತು.
ತ್ವರಿತ ವಿಚಾರಣೆ ನಡೆಸಬೇಕೆಂದು ಕಾಂಗ್ರೆಸ್, ಜೆಡಿಎಸ್ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ನ್ಯಾಯಪೀಠ ವಿಚಾರಣೆಯನ್ನು ಮಧ್ಯರಾತ್ರಿ 1.45ಕ್ಕೆ ಆರಂಭಿಸಿತು. ಇದಕ್ಕಾಗಿ ತ್ರಿಸದಸ್ಯ ಪೀಠವನ್ನು ರಚನೆ ಮಾಡಲಾಗಿತ್ತು. ನ್ಯಾಯಮೂರ್ತಿ ಎಕೆ ಸಿಕ್ರಿ, ಅಶೋಕ್ ಭೂಷಣ್ ಮತ್ತು ಬೋಬ್ಡೆ ಸೇರಿದ ಪೀಠದಿಂದ ಸುಪ್ರೀಂ ಕೋರ್ಟ್ನ ಹಾಲ್ ನಂಬರ್ 6ರಲ್ಲಿ ಸುಮಾರು ನಾಲ್ಕು ತಾಸುಗಳಷ್ಟು ಸುದೀರ್ಘ ಅವಧಿಯ ವರೆಗೆ ಕಾನೂನು ಹೋರಾಟ ಸಾಗಿತ್ತು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಮತ್ತು ಕೇಂದ್ರದ ಪರ ವಕೀಲ ತುಷಾರ್ ಮೆಹ್ತಾ ಹಾಗೂ ಬಿಜೆಪಿ ಪರ ಮುಕುಲ್ ರೋಹಟಗಿ ವಾದವನ್ನು ಮಂಡಿಸಿದ್ದರು. ಮೊದಲು ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಬಿಜೆಪಿ ಬಹುಮತವನ್ನು ಪ್ರಶ್ನಿಸಿದ್ದರು. ಬಿಜೆಪಿ ಬಹುಮತ ಹೊಂದಿರದ ಹೊರತಾಗಿಯೂ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ತಡೆಯಾಜ್ಞೆ ನೀಡಲು ಮನವಿ ಮಾಡಿದ್ದರು.
ಅತ್ತ ಅಭಿಷೇಕ್ ಮನು ಸಿಂಘ್ವಿ ವಾದವನ್ನೆಲ್ಲ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಒಂದೊಂದಾಗಿ ಮುರಿದರು. ರಾಜ್ಯಪಾಲರ ವಿವೇಚನೆ ಅಧಿಕಾರವನ್ನು ಮಾತ್ರ ಬೊಟ್ಟು ಮಾಡಿದ ಅಭಿಷೇಕ್ ಕಾನೂನು ಹೋರಾಟದಲ್ಲಿ ಮೇಲುಗೈ ಸಾಧಿಸಿದರು.
ಇಬ್ಬರು ಶಾಸಕರ ಪರವಾಗಿ ತಾವು ವಾದ ಮಂಡಿಸುವುದಾಗಿ ತಿಳಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಮಧ್ಯರಾತ್ರಿಯಲ್ಲಿ ವಿಚಾರಣೆ ನಡೆಸುವ ಅಗತ್ಯವೂ ಇರಲಿಲ್ಲ, ಬಹುಮತ ಸಾಬೀತುಪಡಿಸುವ ವಿಷಯವನ್ನು ಬೆಳಗಿನ ಜಾವ ನಾಲ್ಕು ಗಂಟೆಗೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ಇಡೀ ಆಕಾಶವೇ ಮುರಿದು ಬೀಳುತ್ತದೆಯೇ ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಈಗಾಗಲೇ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಪೂರೈಸದಂತೆ ತಡೆಯಲು ಸಾಧ್ಯವಿಲ್ಲ. ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ಮುಕುಲ್ ರೋಹ್ಟಗಿ ಮನವರಿಕೆ ಮಾಡಿಕೊಟ್ಟಿರು.
ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಬೇಕಿದ್ದರೆ ಸುಪ್ರೀಂ ಕೋರ್ಟ್ ಕಿತ್ತು ಹಾಕಬಹುದು ಆದರೆ ಪ್ರಮಾಣವಚನ ಸ್ವೀಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಮುಕುಲ್ ರೋಹ್ಟಗಿ ಬಲವಾದ ವಾದ ಮಂಡಿಸಿದ್ದರು.
ಈ ನಡುವೆ ಕರ್ನಾಟಕ ಸೇರಿದಂತೆ ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ನಾಟಕೀಯ ಬೆಳವಣಿಗೆಗಳನ್ನು ಕಂಡ ದಿನವಾಗಿ ಮೇ 16 ಮತ್ತು 17 ಮಾರ್ಪಾಟ್ಟಿತ್ತು. ಇಡೀ ದಿನವೂ ರಾಜಕೀಯ ಬೆಳವಣಿಗೆ ಕಂಡ ನಂತರ ಕಾನೂನು ಸಮರದಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ.
ಆದರೆ ಬುಧವಾರ ತಡ ರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಸರಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿತ್ತು.
ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮನವಿಯನ್ನು ದೇಶದ ಸರ್ವೋಚ್ಚ ನ್ಯಾಯಾಲಯದ ತ್ರಿ ಸದಸ್ಯ ಪೀಠ ತಿರಸ್ಕರಿಸುವುದರೊಂದಿಗೆ ಕಾನೂನು ಹೋರಾಟದಲ್ಲೂ ಹಿನ್ನಡೆ ಅನುಭವಿಸಿದೆ. ಇದರಂತೆ ನಿಗದಿತ ಸಮಯದಂತೆ ಬಿಎಸ್ವೈ ಗುರುವಾರ ಬೆಳಗ್ಗೆ 9 ಗಂಟೆಗೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.
ಬಿಜೆಪಿ ಕಾನೂನು ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಮುಕುಲ್ ರೋಹ್ಟಗಿ ಮಂಡಿಸಿರುವ ವಾದ. ತಮ್ಮ ವಾದದಲ್ಲಿ ಎಲ್ಲೂ ಯಡಿಯೂರಪ್ಪ ಅಥವಾ ಬಿಜೆಪಿ ಬಗ್ಗೆ ಕಿಂಚಿತ್ತು ಮಾತು ಎತ್ತದ ರೋಹ್ಟಗಿ, ಸುಪ್ರೀಂ ಕೋರ್ಟ್ ಮುಂದೆ ಬಹಳಷ್ಟು ಕೌಶಲ್ಯ ಭರಿತವಾಗಿ ರಾಜ್ಯಪಾಲರ ವಿವೇಚನಾ ಅಧಿಕಾರದ ಬಗ್ಗೆ ವಾದ ಮಂಡಿಸಿದರು. ಇದು ಕೊನೆಗೆ ಕಾನೂನು ಸಮರ ಗೆಲುವಿನಲ್ಲೂ ಮಾಸ್ಟರ್ ಸ್ಟ್ರೋಕ್ ಆಗಿ ಪರಿಣಮಿಸಿತು.
ತ್ವರಿತ ವಿಚಾರಣೆ ನಡೆಸಬೇಕೆಂದು ಕಾಂಗ್ರೆಸ್, ಜೆಡಿಎಸ್ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ನ್ಯಾಯಪೀಠ ವಿಚಾರಣೆಯನ್ನು ಮಧ್ಯರಾತ್ರಿ 1.45ಕ್ಕೆ ಆರಂಭಿಸಿತು. ಇದಕ್ಕಾಗಿ ತ್ರಿಸದಸ್ಯ ಪೀಠವನ್ನು ರಚನೆ ಮಾಡಲಾಗಿತ್ತು. ನ್ಯಾಯಮೂರ್ತಿ ಎಕೆ ಸಿಕ್ರಿ, ಅಶೋಕ್ ಭೂಷಣ್ ಮತ್ತು ಬೋಬ್ಡೆ ಸೇರಿದ ಪೀಠದಿಂದ ಸುಪ್ರೀಂ ಕೋರ್ಟ್ನ ಹಾಲ್ ನಂಬರ್ 6ರಲ್ಲಿ ಸುಮಾರು ನಾಲ್ಕು ತಾಸುಗಳಷ್ಟು ಸುದೀರ್ಘ ಅವಧಿಯ ವರೆಗೆ ಕಾನೂನು ಹೋರಾಟ ಸಾಗಿತ್ತು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಮತ್ತು ಕೇಂದ್ರದ ಪರ ವಕೀಲ ತುಷಾರ್ ಮೆಹ್ತಾ ಹಾಗೂ ಬಿಜೆಪಿ ಪರ ಮುಕುಲ್ ರೋಹಟಗಿ ವಾದವನ್ನು ಮಂಡಿಸಿದ್ದರು. ಮೊದಲು ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಬಿಜೆಪಿ ಬಹುಮತವನ್ನು ಪ್ರಶ್ನಿಸಿದ್ದರು. ಬಿಜೆಪಿ ಬಹುಮತ ಹೊಂದಿರದ ಹೊರತಾಗಿಯೂ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ತಡೆಯಾಜ್ಞೆ ನೀಡಲು ಮನವಿ ಮಾಡಿದ್ದರು.
ಅತ್ತ ಅಭಿಷೇಕ್ ಮನು ಸಿಂಘ್ವಿ ವಾದವನ್ನೆಲ್ಲ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಒಂದೊಂದಾಗಿ ಮುರಿದರು. ರಾಜ್ಯಪಾಲರ ವಿವೇಚನೆ ಅಧಿಕಾರವನ್ನು ಮಾತ್ರ ಬೊಟ್ಟು ಮಾಡಿದ ಅಭಿಷೇಕ್ ಕಾನೂನು ಹೋರಾಟದಲ್ಲಿ ಮೇಲುಗೈ ಸಾಧಿಸಿದರು.
ಇಬ್ಬರು ಶಾಸಕರ ಪರವಾಗಿ ತಾವು ವಾದ ಮಂಡಿಸುವುದಾಗಿ ತಿಳಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಮಧ್ಯರಾತ್ರಿಯಲ್ಲಿ ವಿಚಾರಣೆ ನಡೆಸುವ ಅಗತ್ಯವೂ ಇರಲಿಲ್ಲ, ಬಹುಮತ ಸಾಬೀತುಪಡಿಸುವ ವಿಷಯವನ್ನು ಬೆಳಗಿನ ಜಾವ ನಾಲ್ಕು ಗಂಟೆಗೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ಇಡೀ ಆಕಾಶವೇ ಮುರಿದು ಬೀಳುತ್ತದೆಯೇ ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಈಗಾಗಲೇ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಪೂರೈಸದಂತೆ ತಡೆಯಲು ಸಾಧ್ಯವಿಲ್ಲ. ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ಮುಕುಲ್ ರೋಹ್ಟಗಿ ಮನವರಿಕೆ ಮಾಡಿಕೊಟ್ಟಿರು.
ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಬೇಕಿದ್ದರೆ ಸುಪ್ರೀಂ ಕೋರ್ಟ್ ಕಿತ್ತು ಹಾಕಬಹುದು ಆದರೆ ಪ್ರಮಾಣವಚನ ಸ್ವೀಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಮುಕುಲ್ ರೋಹ್ಟಗಿ ಬಲವಾದ ವಾದ ಮಂಡಿಸಿದ್ದರು.
ಈ ನಡುವೆ ಕರ್ನಾಟಕ ಸೇರಿದಂತೆ ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ನಾಟಕೀಯ ಬೆಳವಣಿಗೆಗಳನ್ನು ಕಂಡ ದಿನವಾಗಿ ಮೇ 16 ಮತ್ತು 17 ಮಾರ್ಪಾಟ್ಟಿತ್ತು. ಇಡೀ ದಿನವೂ ರಾಜಕೀಯ ಬೆಳವಣಿಗೆ ಕಂಡ ನಂತರ ಕಾನೂನು ಸಮರದಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ.