ಆ್ಯಪ್ನಗರ

ಕರ್ನಾಟಕ ಮತ್ತು ಉ.ಪ್ರ ಮಧ್ಯೆ ಭಾವಬಂಧವಿದೆ: ಯೋಗಿ

ಕರ್ನಾಟಕ ಹಾಗೂ ಉತ್ತರ ಪ್ರದೇಶ ಮಧ್ಯೆ ಭಾವ ಬಂಧನವಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ, ಬಿಜೆಪಿ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Vijaya Karnataka Web 4 May 2018, 3:47 pm
ವಿಜಯಪುರ: ಕರ್ನಾಟಕ ಹಾಗೂ ಉತ್ತರ ಪ್ರದೇಶ ಮಧ್ಯೆ ಭಾವ ಬಂಧನವಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ, ಬಿಜೆಪಿ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Vijaya Karnataka Web Yogi


ಇಂದು ಮುದ್ದೇ ಬಿಹಾಳದಲ್ಲಿ ಚುನಾವಣಾ ಪ್ರಚಾರ ನಡೆಸಿದ ಯೋಗಿ, ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಕನ್ನಡದ ಜನತೆಗೆ ನನ್ನ ಹಾರ್ದಿಕವಾದ ಸ್ವಾಗತ ಎಂದ ಯೋಗಿ ಕರ್ನಾಟಕ ಮತ್ತು ಉತ್ತರ ಪ್ರದೇಶದ ನಡುವೆ ಭಾವನಾತ್ಮಕ ಸಂಬಂಧವಿದೆ. ಅಯೋಧ್ಯೆಯ ಶ್ರೀರಾಮ ತಮ್ಮ 14 ವರ್ಷದ ವನವಾಸದ ಕಾಲದಲ್ಲಿ ಕರ್ನಾಟಕಕ್ಕೂ ಬಂದಿದ್ದರು. ರಾಮನಿಗೆ ಭಂಟನಾಗಿದ್ದ ವೀರ ಹನುಮಾನ ಹುಟ್ಟಿದ್ದು ಸಹ ಕರ್ನಾಟಕದಲ್ಲಿ ಎಂದರು.

ಧರ್ಮಸ್ಥಳದ ಮಂಜುನಾಥನನ್ನ ಸ್ಮರಿಸಿದ ಯೋಗಿ, ಮಂಜುನಾಥನೇ ಗೋರಕಪುರದ ಗೋರಕನಾಥ ಎಂದು ಪ್ರತಿಪಾದಿಸಿದರು.

ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಯೋಗಿ. ಅವರಿಗೆ ಅಭಿವೃದ್ದಿ ಮಾಡಬೇಕೆಂಬ ಸಂಕಲ್ಪವಿಲ್ಲ. ಜಾತಿ-ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣರಾಗುತ್ತಿದ್ದಾರೆ. ಕಾಂಗ್ರೆಸ್‌ ಅಜೆಂಡಾದಲ್ಲಿ ರೈತರ ಪ್ರಗತಿಯ ಬಗ್ಗೆ, ಯುವಕರ ಭವಿಷ್ಯದ ಬಗ್ಗೆ ವಿಚಾರಗಳೇ ಇಲ್ಲ. ಕಾಂಗ್ರೆಸ್ ಭ್ರಷ್ಟಾಚಾರದ ಕೂಪವಾಗಿದೆ. ಅಭಿವೃದ್ದಿ, ಯುವಕರ, ಸಂಸ್ಕೃತಿಯ ವಿರೋಧಿಯಾಗಿದೆ. ಕೈಗೆ ಅಧಿಕಾರದಲ್ಲಿ‌ ಮುಂದುವರೆಯುವ ನೈತಿಕತೆ ಇಲ್ಲ.
ಸಿಎಂ ಸಿದ್ದುಗೆ ಅಧಿಕಾರದಲ್ಲಿರುವ ಯಾವುದೇ ಯೋಗ್ಯತೆ ಇಲ್ಲ, ಎಂದವರು ಕಿಡಿಕಾರಿದ್ದಾರೆ.

ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ನಿಜವಾದ ಕಾಳಜಿ ಇರುವುದು ಬಿಜೆಪಿ ಎಂದ ಅವರು, ನಮ್ಮ ಪಕ್ಷ ಮುಸ್ಲಿಂ ಮಹಿಳೆಯರಿಗೆ ಸುರಕ್ಷೆ, ಸ್ವಾತಂತ್ರ್ಯ ನೀಡಿದೆ. ತ್ರಿವಳಿ ತಲಾಕ್ ನಿಷೇಧ ಜಾರಿಗೆ ತಂದಿದ್ದು ಬಿಜೆಪಿ, ಎಂದಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಅನ್ನದಾತನ ವಿಕಾಸಕ್ಕಾಗಿ ಕೆಲಸ ಮಾಡಲಿದೆ. ಸಂಕಷ್ಟದಲ್ಲಿರುವ ರೈತರ ಕೈಹಿಡಿಯಲಿದೆ, ಎಂದವರು ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌