ಆ್ಯಪ್ನಗರ

ಹುಚ್ಚುಹುಚ್ಚಾಗಿ ಮಾತನಾಡುವವರಿಗೆ ಏನು ಉತ್ತರ ಕೊಡಲಿ: ಸಿ.ಪಿ ಯೋಗೇಶ್ವರ್ ಹೇಳಿಕೆಗೆ ಎಚ್ಡಿಕೆ ಪ್ರತಿಕ್ರಿಯೆ

HD Kumaraswamy - 2018ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದ್ದವು ಎಂದು ಸಿಪಿ ಯೋಗೇಶ್ವರ್ ನೀಡಿರುವ ಹೇಳಿಕೆಗೆ ಮಾಜಿ ಮುುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಹುಚ್ಚುಹುಚ್ಚಾಗಿ ಮಾತನಾಡುವವರಿಗೆ ಏನೂ ಉತ್ತರ ಕೊಡುವುದಕ್ಕೆ ಆಗಲ್ಲ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಾವು ಬಿಜೆಪಿಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ನಮ್ಮದೇನಿದ್ದರೂ ನೇರ ಒಪ್ಪಂದವಷ್ಟೇ ಎಂದು ಹೇಳಿದ್ದಾರೆ.

Authored byಇರ್ಷಾದ್ ಉಪ್ಪಿನಂಗಡಿ | Edited byಚೇತನ್ ಓ.ಆರ್. | Vijaya Karnataka Web 28 Mar 2023, 12:19 pm

ಹೈಲೈಟ್ಸ್‌:

  • ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಒಳಒಪ್ಪಂದವಾಗಿತ್ತು ಎಂದಿದ್ದ ಸಿಪಿ ಯೋಗೇಶ್ವರ್ ಹೇಳಿಕೆಗೆ ಎಚ್ ಡಿ ಕುಮಾರಸ್ವಾಮಿ ತಿರುಗೇಟು.
  • ಹುಚ್ಚು ಹುಚ್ಚಾಗಿ ಮಾತನಾಡುವವರಿಗೆ ಏನೂ ಪ್ರತಿಕ್ರಿಯೆ ಕೊಡೋದಕ್ಕೆ ಆಗಲ್ಲ ಎಂದು ಹೇಳಿದ ಮಾಜಿ ಸಿಎಂ.
  • ಕಳೆದ ಚುನಾವಣೆಯಲ್ಲಿ ನಾವು ಯಾರ ಜೊತೆಗೂ ಒಪ್ಪಂದ ಮಾಡಿಕೊಂಡಿರಲಿಲ್ಲ ಎಂದು ಹೇಳಿಕೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web HD Kumaraswamy to meet Mamata Banerjee in Kolkata this evening
ಬೆಂಗಳೂರು: ಹುಚ್ಚುಚ್ಚಾಗಿ ಮಾತನಾಡುವವರಿಗೆ ನಾನು ಏನೆಂದು ಉತ್ತರ ಕೊಡಲಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಸಿಪಿ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. 2018 ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜೊತೆಗೆ ಒಳ ಒಪ್ಪಂದ ಆಗಿತ್ತು ಎಂದು ಸಿಪಿ ಯೋಗೀಶ್ವರ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಲೆ ಇಲ್ಲದೆ ಹುಚ್ಚುಚ್ಚಾಗಿ ಮಾತಾಡೋವ್ರಿಗೆ ಏನು ಉತ್ತರ ಕೊಡಲಿ? ಯಾವ ಒಪ್ಪಂದವೂ ಇಲ್ಲ ನಮಗೆ. ನಮ್ಮದು ನೇರ ಒಪ್ಪಂದ ಅಷ್ಟೆ. ಅವರಿಗೆ ನಾನು ಎದುರಾಳಿ ಇರಬೇಕು. ಆದರೆ ನನಗೆ ಅಲ್ಲಿ ಯಾರು ಎದುರಾಳಿ ಇಲ್ಲ ಎಂದರು‌.‌ 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಒಳ ಒಪ್ಪಂದ ನಡೆದಿತ್ತು ಎಂದು ಸಿಪಿ ಯೋಗೇಶ್ವರ್ ಆರೋಪ ಮಾಡಿದ್ದರು.


ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮಾತನಾಡಿ, “ಸರ್ಕಾರ ಇದನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಇದಕ್ಕೆ ಕಾರಣ ಸರ್ಕಾರದವರೇ. ಜೆಡಿಎಸ್ ನಿಲುವು ಸಂವಿಧಾನದ ಪರ.‌ಸಂವಿಧಾನದಲ್ಲಿ ಏನು ಮೀಸಲಾತಿ ಗೈಡ್ ಲೆನ್ಸ್ ಇದ್ಯೋ ಅದೇ ರೀತಿ ಆಗಬೇಕು’’ ಎಂದರು.

“ಸಮಾಜ ಹಾಳು ಮಾಡುವ, ಜಾತಿ ಮಧ್ಯೆ ತಂದಿಡುವ ಕೆಲಸ ಆಗಬಾರದು. ಇದಕ್ಕೆ ಕಾರಣ ನೀವುಗಳೇ. ಹತ್ತು ಜಿಲ್ಲೆಯಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವವರು ಇದ್ದಾರೆ. ಇದೆಲ್ಲಾ ಇಟ್ಟುಕೊಂಡು ಸ್ವೇಚ್ಛೆಯಾಗಿ ಆದೇಶ ಕೊಡಲು ಹೇಳಿದ್ದು ಯಾರು? ಮತಕ್ಕಾಗಿ, ಚುನಾವಣೆಗಾಗಿ ಹೀಗೆ ಮಾಡಿದರೆ ಹೇಗೆ? ಮುಸ್ಲಿಂ ಬಂಧುಗಳು ಬೀದಿಗಿಳಿದಿದ್ದರೆ ಹೇಗಾಗ್ತಿತ್ತು?’’ ಎಂದು ಪ್ರಶ್ನಿಸಿದರು.

HD Kumaraswamy - ನೋಡ್ತಾ ಇರಿ, ಕಾಂಗ್ರೆಸ್ 75ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ: ಕುಮಾರಸ್ವಾಮಿ ಭವಿಷ್ಯ
“ಅಮಾಯಕ ಜನ ಬಲಿಯಾಗಿದ್ದರೆ ಯಾರು ಹೊಣೆ? ರಕ್ತಪಾತ ಮಾಡಲು ಕೈ ಹಾಕಲು ಮುಂದಾಗಿದ್ದಾರೆ.‌ ಸಂಘರ್ಷ ಆಗಬೇಕು ಅಷ್ಟೆ ಅವರಿಗೆ. ಮುಸ್ಲಿಂ ಬಂಧುಗಳು ತಾಳ್ಮೆ ಇರಲಿ. ಹುಡುಗಾಟಿಕೆಯಿಂದ ಮಾಡಿರುವ ಮೀಸಲಾತಿಗೆ ಬೆಂಬಲ ಇಲ್ಲ. ಸರ್ಕಾರಿ ನೌಕರಿ ಯಾವ ರೀತಿ ಕೊಡ್ತಾ ಇದ್ದೀರ, ಹಣ ಪಡೆದು ನೌಕರಿ ಕೊಡ್ತಾ ಇದ್ದಾರೆ. ಮೀಸಲಾತಿ ಮೇಲೆ ನೌಕರಿ‌ ಕೊಡ್ತಾ ಇಲ್ಲ. ಮೀಸಲಾತಿ ತಗೊಂಡು ಏನ್ ಮಾಡೋದು ಹಾಗಾದರೆ. ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆಯೋದು ಅಷ್ಟೆ ಅಲ್ಲ, ಈ ಹಣ ಫಿಕ್ಸ್ ಮಾಡಿ ನೌಕರಿ ಕೊಡ್ತೀರಲಾ ಅದನ್ನು ತೆಗೆದು ಹಾಕ್ತೀವಿ’’ ಎಂದು ಅವರು ಎಚ್ಚರಿಕೆ ನೀಡಿದರು.

ಇನ್ನು, ಇದೇ ಸಂದರ್ಭದಲ್ಲಿ ಮಾಡಾಳ್ ಬಂಧನ ವಿಚಾರವಾಗಿ ಮಾತನಾಡಿ, “ಮಾಡಾಳ್ ಬಂಧನ ಯಾವಾಗಲೋ ಆಗಬೇಕಿತ್ತು. ಸತ್ಯಾಂಶ ಏನಿದೆ ನೋಡಬೇಕಲ್ವಾ? ಅಡಿಕೆ ಬೆಳೆಗಾರ ಅಂತ ಹೇಳ್ತಾ ಇದ್ದಾರೆ. ಪ್ರತಿ ವರ್ಷ ನೂರಾರು ಕೋಟಿ ವ್ಯವಹಾರ ಮಾಡ್ತೀವಿ ಅಂತಾರೆ.‌ವ್ಯವಹಾರ ಮಾಡಿದ್ರೂ ಆದರೆ ಅಷ್ಟು ನಗದು ಇಟ್ಟುಕೊಳ್ಳುವ ಹಾಗಿಲ್ಲ. ಇನ್ನೇನು ನಾಟಕ ನಡೆಯುತ್ತೆ ನೋಡೋಣ’’ ಎಂದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ