ಆ್ಯಪ್ನಗರ

DK Shivakumar: ಮೋದಿ ಎಷ್ಟು ಬಾರಿ ಬೇಕಾದ್ರೂ ಕರ್ನಾಟಕಕ್ಕೆ ಬರಲಿ, ನಮಗೆ ಬೇಜಾರಿಲ್ಲ: ಡಿಕೆ ಶಿವಕುಮಾರ್‌

DK Shivakumar On Narendra Modi: ಕರ್ನಾಟಕದಲ್ಲಿ ಚುನಾವಣೆಯ ಕಾವು ಏರುತ್ತಿದ್ದು, ಮತದಾನಕ್ಕೆ 32 ದಿನ ಮಾತ್ರ ಉಳಿದಿವೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. 20ಕ್ಕೂ ಹೆಚ್ಚು ಕಡೆ ಚುನಾವಣಾ ರ‍್ಯಾಲಿ ಕೂಡ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್‌ ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟು ಬಾರಿ ಬೇಕಾದರೂ ಕರ್ನಾಟಕಕ್ಕೆ ಬರಲಿ. ನಮಗೇನು ಬೇಜಾರಿಲ್ಲ ಎಂದಿದ್ದಾರೆ.

Edited byಅವಿನಾಶ ವಗರನಾಳ | Reported byಇರ್ಷಾದ್ ಉಪ್ಪಿನಂಗಡಿ | Vijaya Karnataka Web 8 Apr 2023, 2:44 pm

ಹೈಲೈಟ್ಸ್‌:


  • "ನರೇಂದ್ರ ಮೋದಿ ಎಷ್ಟು ಬಾರಿ ಬೇಕಾದ್ರೂ ಕರ್ನಾಟಕಕ್ಕೆ ಬರಲಿ, ನಮಗೆ ಬೇಜಾರಿಲ್ಲ"
  • ಬಿಜೆಪಿ 60 ರಿಂದ 65 ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂದ ಡಿಕೆ ಶಿವಕುಮಾರ್‌
  • ಏನೋ‌ ಮೇಕಪ್ ಮಾಡಲು ನರೇಂದ್ರ ಮೋದಿ ಬರ್ತಿದ್ದಾರೆ ಎಂದು ವ್ಯಂಗ್ಯವಾಡಿದ ಡಿಕೆಶಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web DK Shivakumar
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (ಸಂಗ್ರಹ ಚಿತ್ರ)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟು ಬಾರಿ ಬೇಕಾದ್ರೂ ರಾಜ್ಯಕ್ಕೆ ಬರಲಿ, ನಮಗೆ ಬೇಜಾರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ
ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿ, ಅವರ ಪಕ್ಷ ರಾಜ್ಯದಲ್ಲಿ ವೀಕ್ ಆಗಿದೆ ಎಂದು ಅರ್ಥ ಆಗಿದೆ. ಬಿಜೆಪಿ ರಾಜ್ಯದಲ್ಲಿ 60 ರಿಂದ 65 ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು. ಈಗಾಗಲೇ ಬಿಜೆಪಿ ರಾಜ್ಯದಲ್ಲಿ ಸೋಲನ್ನು ಒಪ್ಪಿಕೊಳ್ತಿದ್ದಾರೆ. ಏನೋ‌ ಮೇಕಪ್ ಮಾಡಲು ನರೇಂದ್ರ ಮೋದಿ ಬರ್ತಿದ್ದಾರೆ ಎಂದರು.


ಬಿಜೆಪಿ ಕಾರ್ಯಕ್ರಮಗಳಲ್ಲಿ ಜನರು ಸೇರುವುದಿಲ್ಲ ಎಂದು ಚಿತ್ರನಟರನ್ನೂ ಕರೆಸ್ತಾ ಇದ್ದಾರೆ ಎಂದ ಅವರು, ಕಾಂಗ್ರೆಸ್ ಗೆ ಸ್ಟಾರ್ ಕ್ಯಾಂಪೈನರ್ ಬರುವ ವಿಚಾರವಾಗಿ ಮಾತನಾಡಿ, ಸದ್ಯದಲ್ಲಿ ಸ್ಟಾರ್ ಕ್ಯಾಂಪೇನರ್ ಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. ಪಕ್ಷದಲ್ಲಿ ಬಂಡಾಯ ವಿಚಾರವಾಗಿ, ಕಾಂಗ್ರೆಸ್ ಪಾರ್ಟಿ ಸಮುದ್ರ ಇದ್ದಂತೆ. ನೂರಾರು ಹೊಳೆಗಳು ಬಂದು ಸಮುದ್ರಕ್ಕೆ ಸೇರಿಕೊಳ್ಳುತ್ತವೆ. ಎಷ್ಟು ಜನ ಬೇರೆ ಪಾರ್ಟಿಗಳಿಂದ ಕಾಂಗ್ರೆಸ್ ಗೆ ಬಂದಿಲ್ವಾ, ನಾಳೆ ಶಿವಲಿಂಗೇಗೌಡ ಪಕ್ಷ ಸೇರ್ತಿದ್ದಾರೆ. ನಾನೂ ಕೂಡಾ ಅಲ್ಲಿಗೆ ಹೋಗ್ತಿದ್ದೀನಿ ಎಂದರು.

ಅಮುಲ್ ವಿರುದ್ಧ ಅಭಿಯಾನ ವಿಚಾರವಾಗಿ ಮಾತನಾಡಿ, ನಂದಿನಿ ನಮ್ಮದು. 80 ಲಕ್ಷ ರೈತರು ಹಸುಗಳನ್ನು ಸಾಕುತ್ತಿದ್ದಾರೆ. ರೈತರ ಹಾಲಿಗೆ ಕಡಿಮೆ ಬೆಲೆ ಕೊಡ್ತಿದ್ದಾರೆ. ನಂದಿನಿ ಬ್ರ್ಯಾಂಡ್ ಏನ್ ಕಡಿಮೆ ಇದೆ. ಗುಜರಾತ್ ನಿಂದ ಬಂದು ಮಿಕ್ಸ್ ಮಾಡ್ತಿದ್ದಾರೆ. ನಮ್ಮ ರೈತರಿಗೆ ಮೊದಲು ಬೆಲೆ ಕೊಡಬೇಕು.‌ಈ ಬಿಜೆಪಿ ಸರ್ಕಾರವನ್ನು ಕಿತ್ತು ಒಗೆಯಬೇಕು ಎಂದರು. ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಕೈಯಲ್ಲಿ ಏನೂ ಇಲ್ಲ. ಮಿಲ್ಕ್ ಮಿನಿಸ್ಟರ್ ಕೈಯಲ್ಲೂ ಏನೂ ಆಗ್ತಿಲ್ಲ. ಅವರೆಲ್ಲಾ ಕೈಗೆ ಬಳೆ ತೊಟ್ಟುಕೊಂಡು ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PM Modi: ರಾಜ್ಯಾದ್ಯಂತ 20ಕ್ಕೂ ಹೆಚ್ಚು ಕಡೆ ಪ್ರಧಾನಿ ಮೋದಿ ಸಮಾವೇಶ: ಕೆಲ ದಿನ ರಾಜ್ಯದಲ್ಲೇ ವಾಸ್ತವ್ಯ?
ಮೋದಿ ಕರ್ನಾಟಕ ದಂಡಯಾತ್ರೆ!
ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ತಿಂಗಳಿನಿಂದಲೂ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಕೂಡ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಇದಷ್ಟೇ ಅಲ್ಲದೇ ಮುಂದೆ 20ಕ್ಕೂ ಹೆಚ್ಚು ಚುನಾವಣಾ ರ‍್ಯಾಲಿಗಳನ್ನು ಪ್ರಧಾನಿ ಮೋದಿ ನಡೆಸಲಿದ್ದಾರೆ ಎನ್ನಲಾಗಿದೆ. ಇದರ ಜೊತೆ ಎರಡು ದಿನ ಕರ್ನಾಟಕದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ