ಶಿವರಾಮ್
ಅಂಕುಡೊಂಕು, ಕಿರಿದಾದ ರಸ್ತೆಗಳು, ಒತ್ತುವರಿಯಾಗಿರುವ ವೃಷಭಾವತಿ ಕಣಿವೆ, ಅಸಮರ್ಪಕ ಕುಡಿಯುವ ನೀರಿನ ಪೂರೈಕೆ ಮತ್ತಿತರ ಮೂಲಭೂತ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿರುವ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ಗೆ ಸ್ಪರ್ಧೆಯೊಡ್ಡಲು ಬಿಜೆಪಿ- ಕಾಂಗ್ರೆಸ್ ಹೆಣಗಾಡುತ್ತಿವೆ.
ಜೆಡಿಎಸ್ನ ಹಾಲಿ ಶಾಸಕ ಕೆ. ಗೋಪಾಲಯ್ಯ ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಹಾಗೂ ಕಾಂಗ್ರೆಸ್ನಿಂದ ಸಚಿವ ಡಿ.ಕೆ. ಶಿವಕುಮಾರ್ ಆಪ್ತ, ಎನ್ಎಸ್ಯುಐ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಸ್ಪರ್ಸಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ನಿಂದ ಪರಾಭವಗೊಂಡಿದ್ದ ನೆ.ಲ. ನರೇಂದ್ರಬಾಬು ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆಯಾದ ದಿನವೇ ಪಕ್ಷದಲ್ಲಿ ಭಿನ್ನಮತ ಸೋಟಗೊಂಡಿತ್ತು. ಟಿಕೆಟ್ ಕೈತಪ್ಪಿದ್ದರಿಂದ ಮಾಜಿ ಉಪ ಮೇಯರ್ ಎಸ್. ಹರೀಶ್ ಹಾಗೂ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಕಾರ್ಪೊರೇಟರ್ ಎಂ. ನಾಗರಾಜ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಜೆಡಿಎಸ್- ಬಿಜೆಪಿ ನಡುವೆಯೇ ಪೈಪೋಟಿ
ಕಳೆದ ಬಾರಿ ಕಾಂಗ್ರೆಸ್ನಲ್ಲಿನ ಅಂತಃಕಲಹದಿಂದ ನೆ.ಲ. ನರೇಂದ್ರಬಾಬು ಪರಾಭವಗೊಂಡಿದ್ದರು. ಅದು ಜೆಡಿಎಸ್ನ ಕೆ. ಗೋಪಾಲಯ್ಯ ಅವರಿಗೆ ವರವಾಗಿ ಪರಿಣಮಿಸಿತು. ಆನಂತರ ನರೇಂದ್ರಬಾಬು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಇವರ ಜತೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಕೂಡ ಬಿಜೆಪಿ ಸೇರ್ಪಡೆಗೊಂಡರು. ಇದರಿಂದ ಕಾಂಗ್ರೆಸ್ನ ಬಲ ಕುಗ್ಗತೊಡಗಿತು.ಪ್ರಸ್ತುತ ಮೇಲ್ನೋಟಕ್ಕೆ ಜೆಡಿಎಸ್- ಬಿಜೆಪಿ ನಡುವೆಯೇ ಪೈಪೋಟಿ ಕಂಡು ಬರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಜೆಡಿಎಸ್ ಭದ್ರವಾಗಿ ನೆಲೆಯೂರಿರುವ ಕ್ಷೇತ್ರಗಳಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಪ್ರಮುಖವಾದುದು.
ಕಾಂಗ್ರೆಸ್ನದ್ದು ವಿಚಿತ್ರ ಸ್ಥಿತಿ
ಇನ್ನು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಕೊನೇ ಗಳಿಗೆವರೆಗೂ ಅಭ್ಯರ್ಥಿ ಆಯ್ಕೆಯೇ ತಲೆನೋವಾಗಿ ಪರಿಣಮಿಸಿತ್ತು. ಏಕೆಂದರೆ, ಕ್ಷೇತ್ರದಲ್ಲಿ ಅಭ್ಯರ್ಥಿಗೆ ಸೂಕ್ತ ನಾಯಕರೇ ಇಲ್ಲದ ಕಾರಣ ಹೊರಗಿನ ಅಭ್ಯರ್ಥಿಗಳನ್ನು ಪರಿಚಯಿಸುವುದು ಅನಿವಾರ್ಯವಾಗಿತ್ತು. ಅಂತಿಮವಾಗಿ ಎನ್ಎಸ್ಯುಐ ರಾಜ್ಯ ಘಟಕದ ಎಚ್.ಎಸ್. ಮಂಜುನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಆಪ್ತರಾಗಿರುವ ಮಂಜುನಾಥ್, ಮೊದಲು ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ, ಅಲ್ಲಿ ಮಾಜಿ ಮೇಯರ್ ಜಿ. ಪದ್ಮಾವತಿ ಅವರಿಗೆ ಟಿಕೆಟ್ ನೀಡಬೇಕಾದಂತಹ ಪರಿಸ್ಥಿತಿ ಇದ್ದುದರಿಂದ ಕೊನೇ ಗಳಿಗೆಯಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಯಿತು. ‘ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳು ಚದುರುವುದಿಲ್ಲ. ಕ್ಷೇತ್ರದಲ್ಲಿನ ಜನ ಬದಲಾವಣೆ ಬಯಸಿದ್ದಾರೆ’ ಎಂಬ ನಿರೀಕ್ಷೆಯೊಂದಿಗೆ ಮಂಜುನಾಥ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಕ್ಷೇತ್ರವನ್ನು ಭದ್ರಪಡಿಸಿಕೊಂಡಿರುವ ಕೆ. ಗೋಪಾಲಯ್ಯ, ಕಳೆದ ಎರಡು-ಮೂರು ವರ್ಷಗಳಿಂದಲೇ ಸದ್ದಿಲ್ಲದೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ವಾರ್ಡ್ವಾರು ಬಲಾಬಲ
ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿಯ ಏಳು ವಾರ್ಡ್ಗಳು ಸೇರಿವೆ. ಈ ಪೈಕಿ ನಾಲ್ಕರಲ್ಲಿ ಜೆಡಿಎಸ್ ಚುಕ್ಕಾಣಿ ಹಿಡಿದಿದ್ದರೆ, ಕಾಂಗ್ರೆಸ್ ಎರಡು ಹಾಗೂ ಬಿಜೆಪಿ ಒಂದರಲ್ಲಿ ಅಧಿಕಾರ ಹಿಡಿದಿದೆ. ಶಾಸಕ ಗೋಪಾಲಯ್ಯನವರ ಪತ್ನಿ, ಮಾಜಿ ಉಪ ಮೇಯರ್ ಎಸ್.ಪಿ. ಹೇಮಲತಾ ವೃಷಭಾವತಿ ನಗರ ವಾರ್ಡ್ ಪ್ರತಿನಿಸುತ್ತಿದ್ದಾರೆ.
ಮತದಾರರ ವಿವರ
ಒಟ್ಟು ಮತದಾರರು: 2,92,332
ಪುರುಷರು: 1,51,006
ಮಹಿಳೆಯರು: 1,41,274
ಇತರರು: 52
2013ರ ಫಲಿತಾಂಶ
66,127
ಕೆ. ಗೋಪಾಲಯ್ಯ (ಜೆಡಿಎಸ್)
50,757
ನೆ.ಲ. ನರೇಂದ್ರಬಾಬು (ಕಾಂಗ್ರೆಸ್)
23,545ಎಸ್. ಹರೀಶ್ (ಬಿಜೆಪಿ)
ಒಟ್ಟು ಚಲಾವಣೆಯಾದ ಮತಗಳು: 1,47,849
ಅಂಕುಡೊಂಕು, ಕಿರಿದಾದ ರಸ್ತೆಗಳು, ಒತ್ತುವರಿಯಾಗಿರುವ ವೃಷಭಾವತಿ ಕಣಿವೆ, ಅಸಮರ್ಪಕ ಕುಡಿಯುವ ನೀರಿನ ಪೂರೈಕೆ ಮತ್ತಿತರ ಮೂಲಭೂತ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿರುವ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ಗೆ ಸ್ಪರ್ಧೆಯೊಡ್ಡಲು ಬಿಜೆಪಿ- ಕಾಂಗ್ರೆಸ್ ಹೆಣಗಾಡುತ್ತಿವೆ.
ಜೆಡಿಎಸ್ನ ಹಾಲಿ ಶಾಸಕ ಕೆ. ಗೋಪಾಲಯ್ಯ ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಹಾಗೂ ಕಾಂಗ್ರೆಸ್ನಿಂದ ಸಚಿವ ಡಿ.ಕೆ. ಶಿವಕುಮಾರ್ ಆಪ್ತ, ಎನ್ಎಸ್ಯುಐ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಸ್ಪರ್ಸಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ನಿಂದ ಪರಾಭವಗೊಂಡಿದ್ದ ನೆ.ಲ. ನರೇಂದ್ರಬಾಬು ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆಯಾದ ದಿನವೇ ಪಕ್ಷದಲ್ಲಿ ಭಿನ್ನಮತ ಸೋಟಗೊಂಡಿತ್ತು. ಟಿಕೆಟ್ ಕೈತಪ್ಪಿದ್ದರಿಂದ ಮಾಜಿ ಉಪ ಮೇಯರ್ ಎಸ್. ಹರೀಶ್ ಹಾಗೂ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಕಾರ್ಪೊರೇಟರ್ ಎಂ. ನಾಗರಾಜ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಕಳೆದ ಬಾರಿ ಕಾಂಗ್ರೆಸ್ನಲ್ಲಿನ ಅಂತಃಕಲಹದಿಂದ ನೆ.ಲ. ನರೇಂದ್ರಬಾಬು ಪರಾಭವಗೊಂಡಿದ್ದರು. ಅದು ಜೆಡಿಎಸ್ನ ಕೆ. ಗೋಪಾಲಯ್ಯ ಅವರಿಗೆ ವರವಾಗಿ ಪರಿಣಮಿಸಿತು. ಆನಂತರ ನರೇಂದ್ರಬಾಬು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಇವರ ಜತೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಕೂಡ ಬಿಜೆಪಿ ಸೇರ್ಪಡೆಗೊಂಡರು. ಇದರಿಂದ ಕಾಂಗ್ರೆಸ್ನ ಬಲ ಕುಗ್ಗತೊಡಗಿತು.ಪ್ರಸ್ತುತ ಮೇಲ್ನೋಟಕ್ಕೆ ಜೆಡಿಎಸ್- ಬಿಜೆಪಿ ನಡುವೆಯೇ ಪೈಪೋಟಿ ಕಂಡು ಬರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಜೆಡಿಎಸ್ ಭದ್ರವಾಗಿ ನೆಲೆಯೂರಿರುವ ಕ್ಷೇತ್ರಗಳಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಪ್ರಮುಖವಾದುದು.
ಕಾಂಗ್ರೆಸ್ನದ್ದು ವಿಚಿತ್ರ ಸ್ಥಿತಿ
ಇನ್ನು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಕೊನೇ ಗಳಿಗೆವರೆಗೂ ಅಭ್ಯರ್ಥಿ ಆಯ್ಕೆಯೇ ತಲೆನೋವಾಗಿ ಪರಿಣಮಿಸಿತ್ತು. ಏಕೆಂದರೆ, ಕ್ಷೇತ್ರದಲ್ಲಿ ಅಭ್ಯರ್ಥಿಗೆ ಸೂಕ್ತ ನಾಯಕರೇ ಇಲ್ಲದ ಕಾರಣ ಹೊರಗಿನ ಅಭ್ಯರ್ಥಿಗಳನ್ನು ಪರಿಚಯಿಸುವುದು ಅನಿವಾರ್ಯವಾಗಿತ್ತು. ಅಂತಿಮವಾಗಿ ಎನ್ಎಸ್ಯುಐ ರಾಜ್ಯ ಘಟಕದ ಎಚ್.ಎಸ್. ಮಂಜುನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಆಪ್ತರಾಗಿರುವ ಮಂಜುನಾಥ್, ಮೊದಲು ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ, ಅಲ್ಲಿ ಮಾಜಿ ಮೇಯರ್ ಜಿ. ಪದ್ಮಾವತಿ ಅವರಿಗೆ ಟಿಕೆಟ್ ನೀಡಬೇಕಾದಂತಹ ಪರಿಸ್ಥಿತಿ ಇದ್ದುದರಿಂದ ಕೊನೇ ಗಳಿಗೆಯಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಯಿತು. ‘ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳು ಚದುರುವುದಿಲ್ಲ. ಕ್ಷೇತ್ರದಲ್ಲಿನ ಜನ ಬದಲಾವಣೆ ಬಯಸಿದ್ದಾರೆ’ ಎಂಬ ನಿರೀಕ್ಷೆಯೊಂದಿಗೆ ಮಂಜುನಾಥ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಕ್ಷೇತ್ರವನ್ನು ಭದ್ರಪಡಿಸಿಕೊಂಡಿರುವ ಕೆ. ಗೋಪಾಲಯ್ಯ, ಕಳೆದ ಎರಡು-ಮೂರು ವರ್ಷಗಳಿಂದಲೇ ಸದ್ದಿಲ್ಲದೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ವಾರ್ಡ್ವಾರು ಬಲಾಬಲ
ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿಯ ಏಳು ವಾರ್ಡ್ಗಳು ಸೇರಿವೆ. ಈ ಪೈಕಿ ನಾಲ್ಕರಲ್ಲಿ ಜೆಡಿಎಸ್ ಚುಕ್ಕಾಣಿ ಹಿಡಿದಿದ್ದರೆ, ಕಾಂಗ್ರೆಸ್ ಎರಡು ಹಾಗೂ ಬಿಜೆಪಿ ಒಂದರಲ್ಲಿ ಅಧಿಕಾರ ಹಿಡಿದಿದೆ. ಶಾಸಕ ಗೋಪಾಲಯ್ಯನವರ ಪತ್ನಿ, ಮಾಜಿ ಉಪ ಮೇಯರ್ ಎಸ್.ಪಿ. ಹೇಮಲತಾ ವೃಷಭಾವತಿ ನಗರ ವಾರ್ಡ್ ಪ್ರತಿನಿಸುತ್ತಿದ್ದಾರೆ.
ಮತದಾರರ ವಿವರ
ಒಟ್ಟು ಮತದಾರರು: 2,92,332
ಪುರುಷರು: 1,51,006
ಮಹಿಳೆಯರು: 1,41,274
ಇತರರು: 52
2013ರ ಫಲಿತಾಂಶ
66,127
ಕೆ. ಗೋಪಾಲಯ್ಯ (ಜೆಡಿಎಸ್)
50,757
ನೆ.ಲ. ನರೇಂದ್ರಬಾಬು (ಕಾಂಗ್ರೆಸ್)
23,545ಎಸ್. ಹರೀಶ್ (ಬಿಜೆಪಿ)
ಒಟ್ಟು ಚಲಾವಣೆಯಾದ ಮತಗಳು: 1,47,849