ಆ್ಯಪ್ನಗರ

Karnataka Trust Vote: ಪ್ರಮಾಣ ವಚನ ಸ್ವೀಕರಿಸದಿದ್ದರೆ ಬಿಜೆಪಿಗೆ ಪ್ಲಸ್‌

ವಿಧಾನಸಭೆಗೆ ಆಯ್ಕೆಯಾದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸದಸ್ಯರನ್ನು ಪ್ರಮಾಣ ವನಚ ಸ್ವೀಕರಿಸಿದಂತೆ ನೋಡಿಕೊಳ್ಳುವುದು ಬಿಜೆಪಿಗೆ ಒಳಿತಾಗುತ್ತದೆ.

TIMESOFINDIA.COM 19 May 2018, 3:18 pm
ಹೊಸದಿಲ್ಲಿ: ವಿಧಾನಸಭೆಗೆ ಆಯ್ಕೆಯಾದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸದಸ್ಯರನ್ನು ಪ್ರಮಾಣ ವಚನ ಸ್ವೀಕರಿಸದಂತೆ ನೋಡಿಕೊಳ್ಳುವುದು ಬಿಜೆಪಿಗೆ ಒಳಿತಾಗುತ್ತದೆ.
Vijaya Karnataka Web assembly


ಒಂದೆಡೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಪ್ರತಿಪಕ್ಷಗಳು ಸಜ್ಜಾಗಿದ್ದರೆ, ರಾಜಕೀಯ ಮೇಲಾಟಗಳ ಮೂಲಕ ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ಸನ್ನದ್ಧವಾಗಿದೆ. ಈ ಪ್ರಕ್ರಿಯೆಯಲ್ಲಿ ಸಂಜೆ 4ಕ್ಕೆ ನಿಗದಿಯಾಗಿರುವ ವಿಶ್ವಾಸ ಮತ ಯಾಚನೆಗೆ ಮುನ್ನ ಕೆಲ ಸದಸ್ಯರನ್ನು ಪ್ರಮಾಣವಚನ ಸ್ವೀಕರಿಸದಂತೆ ನೋಡಿಕೊಂಡರೆ, ಬಿಜೆಪಿ ಸರಕಾರ ರಚನೆ ಮಾಡುವುದು ಖಚಿತಗೊಳ್ಳಲಿದೆ.

ಪ್ರಮಾಣ ವಚನ ಸ್ವೀಕರಿಸಿದ ಬಳಿಕವಷ್ಟೇ ಚುನಾಯಿತ ಸದಸ್ಯರು ಶಾಸಕರಾಗುತ್ತಾರೆ. ಶಾಸಕರಾದರೆ ಮಾತ್ರ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸಲಾಗದು. ಪ್ರಮಾಣ ವಚನ ಸ್ವೀಕರಿಸದ ಸದಸ್ಯರು ವಿಧಾನಸಭೆಯ ಯಾವುದೇ ಪ್ರಕ್ರಿಯೆ, ಕಾರ್ಯಕಲಾಪಗಳಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ. ಸಂವಿಧಾನದ 188ನೇ ಕಾಯ್ದೆಯಲ್ಲಿ ಈ ವಿಚಾರವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ