ಆ್ಯಪ್ನಗರ

ಬೇಂದ್ರ ಅವರ ಕುರುಡು ಕಾಂಚಾಣ ಕವನದಿಂದ ಕಾಂಗ್ರೆಸ್‌ಗೆ ಚುಚ್ಚಿದ ಮೋದಿ

ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ.

Vijaya Karnataka Web 6 May 2018, 9:21 pm
ಹುಬ್ಬಳ್ಳಿ: ಮೇ15ರಂದು ಕಾಂಗ್ರೆಸ್‌ನವರಿಗೆ ಕರ್ನಾಟಕದ ಜನರು ಕಹಿ ಔಷಧ ಕುಡಿಸಲಿದ್ದಾರೆ. ಆಗ ಕಾಂಗ್ರೆಸ್‌ನವರು ಧಾರವಾಡದ ಪೇಡಾ ತಿನ್ನಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
Vijaya Karnataka Web ಮೋದಿ
ಮೋದಿ


ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು..

ಧಾರವಾಡದ ಪೇಡಾ ಏಕ್ ಭಾರತ್ ಶ್ರೇಷ್ಠ ಭಾರತದ ಪ್ರತೀಕವಾಗಿದೆ ಎಂದರು.

ಕಾಂಗ್ರೆಸ್‌ಗೆ ಪ್ರತಿ ಪೈಸೆಯ ಲೆಕ್ಕ ಕೇಳುವ ಸಮಯ. ವೈದ್ಯರಿಗೆ ಹೊಡೆದು ಹೆಮ್ಮೆಪಡುವ ವ್ಯಕ್ತಿಯನ್ನು ಕಾಂಗ್ರೆಸ್ ಮಂತ್ರಿ ಮಾಡಿದೆ. ಇಂತಹ ಮಂತ್ರಿಯಿಂದ ಜನರ ಕಲ್ಯಾಣ ಸಾಧ್ಯವೇ? ಮಲಗಿರುವ ಕಾಂಗ್ರೆಸ್ ಸರ್ಕಾರದಿಂದ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಲೈನ್ ಆಗಿಲ್ಲ ಎಂದು ಮೋದಿ ದೂರಿದರು.

ಸಹೋದರಿ ಸೋನಿಯಾ ಸರ್ಕಾರ ಅಡಕೆಯನ್ನು ವಿಷ ಎಂದು ಪರಿಗಣಿಸಿತ್ತು. ನಮಗೆ ಕನಸುಗಳಿವೆ, ಸಂಕಲ್ಪವಿದೆ, ಪೂರ್ಣಗೊಳಿಸುವ ಸಾಮರ್ಥ್ಯವಿದೆ.
ಕಾಂಗ್ರೆಸ್‌ನವರ ಕನಸು ಪರಿವಾರದಿಂದ ಪ್ರಾರಂಭವಾಗಿ ಪರಿವಾರದಲ್ಲೇ ಪೂರ್ಣಗೊಳ್ಳುತ್ತೆ ಎಂದರು.

ವರಕವಿ ದ.ರಾ. ಬೇಂದ್ರೆಯವರ ಒಂದು ಮಾತು ಕಾಂಗ್ರೆಸ್‌ನವರಿಗೆ ಫಿಟ್ ಆಗುತ್ತೆ. ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು ಎಂದು ಮೋದಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌