ಆ್ಯಪ್ನಗರ

Rahul Gandhi: ಮುರುಡೇಶ್ವರ ದೇಗುಲಕ್ಕೆ ಭೇಟಿ ನೀಡದೇ ತೆರಳಿದ ರಾಹುಲ್‌

ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದ ಪೊಲೀಸರು

Vijaya Karnataka Web 27 Apr 2018, 10:55 am
ಮುರುಡೇಶ್ವರ: ಇಲ್ಲಿನ ಮುರುಡೇಶ್ವರದ ಗಾಲ್ಫ್ ಕ್ಲಬ್ ನಲ್ಲಿ ಗುರುವಾರ ರಾತ್ರಿ ವಾಸ್ತವ್ಯ ಹೂಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇವಾಲಯಕ್ಕೆ ಭೇಟಿ ನೀಡದೆ ತೆರಳಿದ್ದಾರೆ.
Vijaya Karnataka Web ಮುರುಡೇಶ್ವರ ದೇಗುಲ
ಮುರುಡೇಶ್ವರ ದೇಗುಲ


ಇಲ್ಲಿಯೇ ರಾತ್ರಿ ವಾವ್ತವ್ಯ ಹೂಡಿದ್ದ ರಾಹುಲ್‌ ಗಾಂಧಿ ಮುರುಡೇಶ್ವರದ ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆ ಸಾರ್ವಜನಿಕರು ಮತ್ತು ಕಾರ್ಯಕರ್ತರಿಗಿತ್ತು.

ಪೊಲೀಸರು‌ ಕೂಡ‌ ರಾಹುಲ್‌ ಆಗಮನದ ನಿರೀಕ್ಷೆಯಲ್ಲಿ‌ ದೇವಸ್ಥಾನದ ಸುತ್ತ ಬಿಗಿ‌ ಬಂದೋಬಸ್ತ್ ಕೈಗೊಂಡಿದ್ದರು
.
ಆದರೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿದ ರಾಹುಲ್ ಹೆಲಿಕಾಪ್ಟರ್ ಮೂಲಕ‌ ದಕ್ಷಿಣ ಕನ್ನಡದ ಬಂಟ್ವಾಳಕ್ಕೆ ತೆರಳಿದರು.

ಭದ್ರತೆ ಹೆಸರಿನಲ್ಲಿ ಕಾಯಿಸಿದ್ದ ಪೊಲೀಸರು ಹಾಗೂ ನಾಯಕರ ವಿರುದ್ಧ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌