ಆ್ಯಪ್ನಗರ

ಅದೇ ರಾಗಾ.....ಅದೇ ಭಾಷಣ...ನುಡಿದಂತೆ ನಡೆದಿದ್ದೇವೆ...

ಹಳೆಯ ಭಾಷಣವನ್ನೇ ಮತ್ತೆ ಮಾಡಿದ ರಾಹುಲ್‌ ಗಾಂಧಿ

Vijaya Karnataka Web 9 May 2018, 6:36 pm
ಬೆಂಗಳೂರು: ಬೆಂಗಳೂರು ಅಭಿವೃದ್ಧಿಗೆ ಮಾದರಿ. ದೇಶದ ಉಳಿದ ನಗರಗಳ ಬೆಳವಣಿಗೆಗೆ ಬೆಂಗಳೂರು 5 ವರ್ಷದಿಂದ ಮಾದರಿಯಾಗಿದೆ. ಹಸಿವು ಮುಕ್ತ ಕಾರ್ಯಕ್ರಮ ಜಾರಿಯಾಗಿದೆ. ನುಡಿದಂತೆ, ನಡೆದಿದ್ದೇವೆ. ಸಿದ್ದರಾಮಯ್ಯ ಸರಕಾರ ಎಲ್ಲ ಭರವಸೆಗಳನ್ನು ಈಡೇರಿಸಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿಳಿಸಿದ್ದಾರೆ.
Vijaya Karnataka Web ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ


ಬೆಂಗಳೂರಿನಲ್ಲಿ ಪ್ರಚಾರ ಭಾಷಣ ಮಾಡಿದ ರಾಹುಲ್‌ ಗಾಂಧಿ ಹಳೆಯ ಅಂಶಗಳನ್ನೇ ಬಹುತೇಕ ಪ್ರಸ್ತಾಪಿಸಿದರು.

Hal, beml ಕಾರ್ಖಾನೆ ತೆರೆದಾಗ ರಾಜ್ಯದ ಹೊರಗಿರುವವರು ಆಡಿಕೊಂಡಿದ್ದರು. ಕಾರ್ಖಾನೆಗಳಿಂದ , ಬೆಂಗಳೂರಿನಲ್ಲಿ ಕಾರ್ಖಾನೆ ತೆರೆದರೆ ಏನು ಪ್ರಯೋಜನ‌ ಅಂದಿದ್ದವರು ಈಗ ಕಾರ್ಖಾನೆಗಳ ಸಾಧನೆಯಿಂದ ಆಶ್ಚರ್ಯ ಪಟ್ಟಿದ್ದಾರೆ ಎಂದರು.

ಎಲ್ಲ ಸಂಸ್ಕೃತಿಗಳ ಜತೆಗೆ ಸಹಭಾಳ್ವೆ ಮಾಡುವುದು ನಮ್ಮ ಸಂಸ್ಕೃತಿ. ಆದಿವಾಸಿ, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರಧಾನಿ ಬಾಯಿ ಬಿಚ್ಚುತ್ತಿಲ್ಲ ಏಕೆ ? ಎಂದು ಪ್ರಶ್ನಿಸಿದರು.

15 ಲಕ್ಷ ಪ್ರತಿ ಖಾತೆಗೆ ಕೊಡ್ತೀನಿ ಅಂದವರು ನಿಮ್ಮ ಜೇಬಿನಲ್ಲಿದ್ದ ಚಿಲ್ಲರೆ ಹಣವನ್ನೂ ಕಿತ್ತು ನೀರವ್ ಮೋದಿಗೆ ಕೊಟ್ಟರು ಎಂದು ದೂರಿದರು.

ಭ್ರಷ್ಟಾಚಾರಿಗಳನ್ನು ಜತೆಯಲ್ಲಿಟ್ಟುಕೊಂಡು ಮೋದಿ ಭಾಷಣ ಮಾಡ್ತಾರೆ. ರೆಡ್ಡಿ ಬ್ರದರ್ಸ್ ಅನ್ನು ಜೈಲಿಂದ ಹೊರಗೆ ಕರೆಸಿದ್ದು ಏಕೆ ಎಂದು ಈಗ ಗೊತ್ತಾಗ್ತಾ ಇದೆ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ