ಆ್ಯಪ್ನಗರ

Badami Constituency: ಬಾದಾಮಿಯಲ್ಲಿ ಸಿಎಂ ವಿರುದ್ಧ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ ಶ್ರೀ ರಾಮುಲು

ತೀವ್ರ ಹಣಾಹಣಿ , ಸುದ್ದಿಗೆ ಗ್ರಾಸವಾಗಿರುವ ಬಾದಾಮಿಯಲ್ಲಿ ಬಿಜೆಪಿಯಿಂದ ಸಂಸದ ಶ್ರೀ ರಾಮುಲು ನಾಮಪತ್ರ ಸಲ್ಲಿಸಿದ್ದು, ವದಂತಿಗಳಿಗೆ ತೆರೆ ಬಿದ್ದಿದೆ.

Vijaya Karnataka Web 24 Apr 2018, 3:49 pm
ಬಾಗಲಕೋಟ:ತೀವ್ರ ಹಣಾಹಣಿ , ಸುದ್ದಿಗೆ ಗ್ರಾಸವಾಗಿರುವ ಬಾದಾಮಿಯಲ್ಲಿ ಬಿಜೆಪಿಯಿಂದ ಸಂಸದ ಶ್ರೀ ರಾಮುಲು ನಾಮಪತ್ರ ಸಲ್ಲಿಸಿದ್ದು, ವದಂತಿಗಳಿಗೆ ತೆರೆ ಬಿದ್ದಿದೆ.
Vijaya Karnataka Web ramulu


ಹೈಕಮಾಂಡ್ ಸೂಚನೆ ಮೇರೆಗೆ ಪಕ್ಷದ ಶಿಸ್ತಿನ ಸಿಪಾಯಿ, ಕಾರ್ಯಕರ್ತನಾಗಿ ನಾಮಪತ್ರ ಸಲ್ಲಿಸಲು ಬಂದಿದ್ದೇನೆ.ಯಾವುದೇ ಲೆಕ್ಕಾಚಾರ ಹಾಕಿ ರಾಜಕಾರಣ ಮಾಡೋ ವ್ಯಕ್ತಿಗಳು ನಾವಲ್ಲ. ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಮೊದಲಿನಿಂದಲೂ ಗಟ್ಟಿಯಾಗಿರೋ ಕ್ಷೇತ್ರ.ತಾಯಿ ಬನಶಂಕರಿ ಆಶೀರ್ವಾದ ಸೇರಿದಂತೆ ಎಲ್ಲರ ಆಶೀರ್ವಾದದಿಂದ ಗೆಲುವು ಸಾಧಿಸುತ್ತೇನೆ ಎಂದು ಶ್ರೀ ರಾಮುಲು ಹೇಳಿದರು.
ಉಭಯ ನಾಯಕರ ನಾಮಪತ್ರ ಸಲ್ಲಿಕೆಯ ಹಿನ್ನೆಲೆಯಲ್ಲಿ ಬಾದಾಮಿಯಲ್ಲಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

ಶ್ರೀರಾಮುಲು ವೀರಶೈವ ಲಿಂಗಾಯತ ಶ್ರದ್ದಾಕೇಂದ್ರ ಶಿವಯೋಗ ಮಂದಿರ ಹಾಗೂ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಬಿಎಸ್ ವೈ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮತ್ತಿರರು ಸಾಥ್ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌