ಬೆಂಗಳೂರು: ವಿಧಾನಸಭೆಗೆ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಶುಕ್ರವಾರ (ಮೇ 25) ಮಧ್ಯಾಹ್ನ 12.15ಕ್ಕೆ ನಡೆಯಲಿದ್ದು, ಬಳಿಕ ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತಯಾಚಿಸಲಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್ ಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಪೀಕರ್ ಆಯ್ಕೆ ಪ್ರಕ್ರಿಯೆಯಲ್ಲಿ ಧ್ವನಿ ಅಥವಾ ಕೈ ಎತ್ತುವ ಮೂಲಕ ಕಣದಲ್ಲಿರುವ ಅಭ್ಯರ್ಥಿಯನ್ನು ಬೆಂಬಲಿಸಬಹುದು. ಅಗತ್ಯ ಬಿದ್ದರೆ, ಮತ ಚಲಾವಣೆ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಒಟ್ಟು ಹಾಜರಾದ ಶಾಸಕರ ಪೈಕಿ ಯಾರಿಗೆ ಬಹುಮತ ದೊರೆಯುತ್ತದೆಯೋ ಅವರನ್ನು ಸ್ವೀಕರ್ ಆಗಿ ಆಯ್ಕೆ ಮಾಡಲಾಗುತ್ತದೆ ಎಂದು ಎಸ್.ಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಶಾಸಕ ಸುರೇಶ್ ಕುಮಾರ್ ಹಾಗೂ ಕಾಂಗ್ರೆಸ್ನ ರಮೇಶ್ ಕುಮಾರ್ ವಿಧಾನಸಭೆ ಸ್ಪೀಕರ್ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಶುಕ್ರವಾರದ ವಿಧಾನಸಭಾ ಕಾರ್ಯಕಲಾಪ ಹೀಗಿದೆ.
1. ಸಭಾಧ್ಯಕ್ಷರ ಆಯ್ಕೆ
2. ಕಾರ್ಯದರ್ಶಿ ವರದಿ- ವಿಧೇಯಕಗಳ ವರದಿ
3. ವಿಶ್ವಾಸಮತ ಯಾಚನೆ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಪೀಕರ್ ಆಯ್ಕೆ ಪ್ರಕ್ರಿಯೆಯಲ್ಲಿ ಧ್ವನಿ ಅಥವಾ ಕೈ ಎತ್ತುವ ಮೂಲಕ ಕಣದಲ್ಲಿರುವ ಅಭ್ಯರ್ಥಿಯನ್ನು ಬೆಂಬಲಿಸಬಹುದು. ಅಗತ್ಯ ಬಿದ್ದರೆ, ಮತ ಚಲಾವಣೆ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಒಟ್ಟು ಹಾಜರಾದ ಶಾಸಕರ ಪೈಕಿ ಯಾರಿಗೆ ಬಹುಮತ ದೊರೆಯುತ್ತದೆಯೋ ಅವರನ್ನು ಸ್ವೀಕರ್ ಆಗಿ ಆಯ್ಕೆ ಮಾಡಲಾಗುತ್ತದೆ ಎಂದು ಎಸ್.ಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಶಾಸಕ ಸುರೇಶ್ ಕುಮಾರ್ ಹಾಗೂ ಕಾಂಗ್ರೆಸ್ನ ರಮೇಶ್ ಕುಮಾರ್ ವಿಧಾನಸಭೆ ಸ್ಪೀಕರ್ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಶುಕ್ರವಾರದ ವಿಧಾನಸಭಾ ಕಾರ್ಯಕಲಾಪ ಹೀಗಿದೆ.
1. ಸಭಾಧ್ಯಕ್ಷರ ಆಯ್ಕೆ
2. ಕಾರ್ಯದರ್ಶಿ ವರದಿ- ವಿಧೇಯಕಗಳ ವರದಿ
3. ವಿಶ್ವಾಸಮತ ಯಾಚನೆ