ಬೆಂಗಳೂರು: ಶಾಸಕ ಬಿಜೆಪಿಯ ಸುರೇಶ್ ಕುಮಾರ್ , ಕಾಂಗ್ರೆಸ್ನ ರಮೇಶ್ ಕುಮಾರ್ ಅವರು ವಿಧಾನಸಭೆ ಸ್ಪೀಕರ್ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸುರೇಶ್ ಕುಮಾರ್ ನಾಮಪತ್ರ ಸಲ್ಲಿಕೆ ವೇಳೆ ಶಾಸಕ ಸುನಿಲ್ ಕುಮಾರ್ ಮತ್ತು ಡಾ. ಅಶ್ವತ್ಥ್ ನಾರಾಯಣ ಜತೆಗಿದ್ದರು.
ಪಕ್ಷದ ರಾಜ್ಯಾಧ್ಯಕ್ಷರ ಸೂಚನೆಯಂತೆ ನಾಮಪತ್ರ ಸಲ್ಲಿಸಿದ್ದೇನೆ. ನಾಳೆ ಚುನಾವಣೆ ಇದೆ, ಏನಾಗೋತ್ತೋ ನೋಡೋಣ,ನಮಗೆ ಸಂಖ್ಯಾಬಲ ಇದೆ ಕಾದು ನೋಡಿ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ರಮೇಶ್ ಕುಮಾರ್ ನಾಮಪತ್ರ ಸಲ್ಲಿಸುವಾಗ ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತಿತರ ಕಾಂಗ್ರೆಸ್ ನಾಯಕರು ಜತೆಗಿದ್ದರು.
ಒಮ್ಮತದಿಂದ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ಅವರನ್ನ ಆಯ್ಕೆ ಮಾಡಿದ್ದೇವೆ.ನಾನು ,ಪರಮೇಶ್ವರ್ ಸೂಚಿಸಿ ಅನುಮೋದನೆ ಮಾಡಿದ್ದೇವೆ. ಇವರು ಒಮ್ಮತದ ಅಭ್ಯರ್ಥಿ ಆಗಿರುವುದರಿಂದ ಇವರ ಗೆಲುವು ಖಚಿತ ಎಂದು ಹೇಳಿದ್ದರು.
ಪಕ್ಷದ ರಾಜ್ಯಾಧ್ಯಕ್ಷರ ಸೂಚನೆಯಂತೆ ನಾಮಪತ್ರ ಸಲ್ಲಿಸಿದ್ದೇನೆ. ನಾಳೆ ಚುನಾವಣೆ ಇದೆ, ಏನಾಗೋತ್ತೋ ನೋಡೋಣ,ನಮಗೆ ಸಂಖ್ಯಾಬಲ ಇದೆ ಕಾದು ನೋಡಿ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಒಮ್ಮತದಿಂದ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ಅವರನ್ನ ಆಯ್ಕೆ ಮಾಡಿದ್ದೇವೆ.ನಾನು ,ಪರಮೇಶ್ವರ್ ಸೂಚಿಸಿ ಅನುಮೋದನೆ ಮಾಡಿದ್ದೇವೆ. ಇವರು ಒಮ್ಮತದ ಅಭ್ಯರ್ಥಿ ಆಗಿರುವುದರಿಂದ ಇವರ ಗೆಲುವು ಖಚಿತ ಎಂದು ಹೇಳಿದ್ದರು.