ಆ್ಯಪ್ನಗರ

ಗಾಂಧಿನಗರದಲ್ಲಿ ದಿನೇಶ್‌ ಗುಂಡೂರಾವ್‌ಗೆ ಸೋಲು : ವಿಕ ಓದುಗರ ಅಭಿಮತ

​​​ಸ್ಯಾಂಡಲ್‌ವುಡ್‌ ತಾಣ ಗಾಂಧಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಅವರಿಗೆ ಅಣ್ಣಮ್ಮ ದೇವಿ ಹರಸುತ್ತಾಳೆ ಎಂದು ವಿಕ ಓದುಗರು ಅಭಿಪ್ರಾಯಿಸಿದ್ದಾರೆ.

Vijaya Karnataka Web 4 May 2018, 4:14 pm
ಬೆಂಗಳೂರು: ಸ್ಯಾಂಡಲ್‌ವುಡ್‌ ತಾಣ ಗಾಂಧಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಅವರಿಗೆ ಅಣ್ಣಮ್ಮ ದೇವಿ ಹರಸುತ್ತಾಳೆ ಎಂದು ವಿಕ ಓದುಗರು ಅಭಿಪ್ರಾಯಿಸಿದ್ದಾರೆ.
Vijaya Karnataka Web Gandhinagara poll


'ಸ್ಯಾಂಡಲ್‌ವುಡ್‌ ತಾಣ ಗಾಂಧಿನಗರದಲ್ಲಿ ಗೆಲ್ಲೋದ್‌ ಯಾರು?' ಎಂಬ ಪ್ರಶ್ನೆಯೊಂದಿಗೆ ಗುರುವಾರ ಸಂಜೆ 5 ಗಂಟೆಯಿಂದ 6 ಗಂಟೆಯ ವರೆಗೆ ನಡೆಸಲಾದ ಫೇಸ್‌ಬುಕ್‌ ಲೈವ್‌ನಲ್ಲಿ 1000 ಮಂದಿ ಪ್ರತಿಕ್ರಿಯಿಸಿದ್ದು, 369 ಮಂದಿ ವಾವ್‌ ಇಮೋಜಿ ಕ್ಲಿಕ್‌ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಗೆಲ್ಲುತ್ತಾರೆ ಎಂದಿದ್ದಾರೆ.


ಜೆಡಿಎಸ್‌ ಅಭ್ಯರ್ಥಿ ಪರ 319 ಹ್ಹ ಹ್ಹ ಹ್ಹ ಇಮೋಜಿಗಳು ವ್ಯಕ್ತವಾಗಿದ್ದು, ರನ್ನರ್‌ಅಪ್‌ ಆಗಲಿದ್ದಾರೆ ಎಂದಿದ್ದಾರೆ. ಇನ್ನು ಹಾಲಿ ಶಾಸಕ ದಿನೇಶ್‌ ಗುಂಡೂರಾವ್‌ ಪರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ 270 ಲವ್‌ ಇಮೋಜಿಗಳು ಬಂದಿವೆ.

ಕಳೆದ ನಾಲ್ಕು ಚುನಾವಣೆಗಳಲ್ಲಿ ಮೇಲುಗೈ ಸಾಧಿಸಿರುವ ಕಾಂಗ್ರೆಸ್‌ಗೆ ಈ ಬಾರಿ ಅಣ್ಣಮ್ಮ ದೇವಿ ಕೈ ಕೊಡುತ್ತಾಳಾ? ಸತತ ಗೆಲುವಿಗೆ ಸಪ್ತಗಿರಿಗೌಡ ಬ್ರೇಕ್‌ ಹಾಕುತ್ತಾರಾ? ಇವರಿಬ್ಬರಿಗೆ ಪೈಪೋಟಿ ನೀಡುತ್ತಿರುವ ವಿ.ನಾರಾಯಣಸ್ವಾಮಿ ಗೆಲುವು ಸಾಧಿಸುತ್ತಾರಾ? ಎಂದು ತಿಳಿಯಲು ಮೇ 15 ಚುನಾವಣೆ ಫಲಿತಾಂಶ ಪ್ರಕಟಗೊಳ್ಳಬೇಕಷ್ಟೇ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌