ಆ್ಯಪ್ನಗರ

ಬಿಎಸ್‌ವೈ ಸಿಎಂ ಅಭ್ಯರ್ಥಿ ಯಾಕೆ? ಯುವತಿ ಪ್ರಶ್ನೆಗೆ ಇರಾನಿ ತಬ್ಬಿಬ್ಬು

ಹಿರಿಯರಾದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು ಸರಿನಾ?

Vijaya Karnataka Web 29 Apr 2018, 11:41 am
ಬೆಳಗಾವಿ: ಬಿಜೆಪಿಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುತ್ತಿದೆ. ಯುವಕರೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಆದರೆ, ಕರ್ನಾಟಕದ ಚುನಾವಣೆಯಲ್ಲಿ ಹಿರಿಯರಾದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು ಸರಿನಾ?
Vijaya Karnataka Web ಇರಾನಿ


ಇಂಥದೊಂದು ಪ್ರಶ್ನೆ ನಿರೀಕ್ಷಿಸದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೊಂಚ ತಬ್ಬಿಬ್ಬಾದರು. ಈ ಘಟನೆ ನಡೆದಿದ್ದು ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಡಾ.ಬಿ.ಎಸ್‌.ಜೀರೆಗೆ ಸಭಾಭವನದಲ್ಲಿ ಆಯೋಜಿಸಲಾಗಿದ್ದ ‘ಕರುನಾಡ ಮಹಿಳಾ ಜಾಗೃತಿ ಸಂವಾದ’ದಲ್ಲಿ.

ಸಂವಾದ ಆರಂಭದಿಂದಲೇ ‘ಯುವ ಜನಾಂಗ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡಬೇಕು. ಯುವಕರಿಂದ ಕೂಡಿದ ನವಭಾರತ ನಿರ್ಮಾಣಕ್ಕೆ ಬಿಜೆಪಿ ಹಲವು ಯೋಜನೆ ರೂಪಿಸಿದೆ' ಎಂದು ಇರಾನಿ ಹೇಳುತ್ತಿದ್ದರು. ಈ ಹಂತದಲ್ಲಿ ಯುವತಿಯ ಪ್ರಶ್ನೆಯಿಂದ ಅವರು ತಬ್ಬಿಬ್ಬಾದರು. ‘ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಯುವ ನಾಯಕ ಅಖಿಲೇಶ್‌ ಯಾದವ್‌ಗೆ ರಾಜ್ಯದ ಆಡಳಿತದ ಜವಾಬ್ದಾರಿ ಕೊಟ್ಟಾಗ ಏನಾಯಿತು ಎನ್ನುವ ಉದಾಹರಣೆ ನಮ್ಮೆಲ್ಲರ ಮುಂದಿದೆ.

ಅನುಭವದ ಕೊರತೆಯಿಂದ ಅಧಿಕಾರ ವಹಿಸಿಕೊಂಡಷ್ಟೆ ಭರದಲ್ಲಿ ಅದನ್ನು ಕಳೆದುಕೊಂಡರು. ಹಾಗಾಗಿ ಯಾವುದೇ ಆಡಳಿತ ವ್ಯವಸ್ಥೆಗೆ ಅನುಭವಿಗಳು ಬೇಕೇ ಬೇಕು. ಅದೇ ಪ್ರಕಾರ ಕರ್ನಾಟಕದಲ್ಲಿ ಯಡಿಯೂರಪ್ಪ ಬಿಜೆಪಿ ನೇತೃತ್ವ ವಹಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಸಿದ್ದರಾಮಯ್ಯ ಅವರಿಗೂ ವಯಸ್ಸಾಗಿದೆ,’’ ಎಂದರು.

ಹಾಗೆಯೇ, ಮಾತೆತ್ತಿದರೆ ಬಿಜೆಪಿ ಡಿಜಿಟಲ್‌ ಇಂಡಿಯಾ ಎನ್ನುತ್ತಿದೆ. ಆದರೆ, ಬಹುತೇಕ ಎಟಿಎಂಗಳಲ್ಲಿ ನೋ ಕ್ಯಾಶ್‌ ಬೋರ್ಡ್‌ ಕಾಣುತ್ತಿರುವುದೇಕೆ?’’ ಎನ್ನುವ ಸಂವಾದದ ಮತ್ತೊಂದು ಪ್ರಶ್ನೆ ಸಚಿವೆ ಇರಾನಿಯನ್ನು ಗೊಂದಲಕ್ಕೀಡು ಮಾಡಿತು. ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌