ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಆಡಳಿತರೂಢ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದ) 83 ಕ್ಷೇತ್ರಗಳಿಗೆ ಬುಧವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ತನ್ನ ಪಾಲಿನ ಇನ್ನೆರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ ಇರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಹಾಲಿ ಕ್ಷೇತ್ರ ಧರ್ಮಡಂನಿಂದಲೇ ಸ್ಪರ್ಧೆ ಮಾಡಲಿದ್ದಾರೆ. ಇದೇ ವೇಳೆ ಎರಡೆರಡು ಬಾರಿ ಮಂತ್ರಿಗಳಾಗಿ ಆಯ್ಕೆಯಾದವರಿಗೆ ಟಿಕೆಟ್ ನಿರಾಕರಿಸಲಾಗಿದೆ.
83 ಅಭ್ಯರ್ಥಿಗಳ ಪೈಕಿ ಸಿಪಿಎಂ ಬೆಂಬಲಿತ ಒಂಬತ್ತು ಮಂದಿ ಪಕ್ಷೇತರರು ಕೂಡ ಸೇರಿದ್ದಾರೆ. ಇನ್ನುಳಿದ ಮಂಜೇಶ್ವರಂ ಹಾಗೂ ದೇವಿಕುಳ ಕ್ಷೇತ್ರಗಳಿಗೆ ಶೀಘ್ರವೇ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದು ಸಿಪಿಐಎಂ ಹೇಳಿದೆ.
ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ಮಟ್ಟನ್ನೂರ್ನಿಂದ ಕಣಕ್ಕಿಳಿಯಲಿದ್ದು, ಉನ್ನತ ಶಿಕ್ಷಣ ಸಚಿವ ಕೆ.ಟಿ ಜಲೀಲ್ ಅವರು ತಾವನೂರ್ನಿಂದ ಕಣಕ್ಕಿಳಿಯಲಿದ್ದಾರೆ.
ಕಾರ್ಮಿಕ ಸಚಿವ ಟಿ.ಪಿ ರಾಮಕೃಷ್ಣನ್, ಇಂಧನ ಸಚಿವ ಎಂಎಂ ಮಣಿ, ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್, ಮೀನುಗಾರಿಕ ಸಚಿವೆ ಮೆರ್ಸಿಕುಟ್ಟಿ ಅಮ್ಮ ಹಾಗೂ ಸ್ವ ಆಡಳಿತ ಸಚಿವ ಎ.ಸಿ ಮೊಯ್ದಿನ್ ಅವರಿಗೆ ಟಿಕೆಟ್ ನೀಡಲಾಗಿದೆ.
ಸಿಪಿಐಎಂ ರಾಜ್ಯ ಸದಸ್ಯರಾದ ಎಂ.ವಿ ಗೋವಿಂದ ಮಾಸ್ಟರ್, ಕೆ. ರಾಧಾಕೃಷ್ಣನ್, ಪಿ ರಾಜೀವ್ ಹಾಗೂ ಕೆ.ಎನ್ ಬಾಲಗೋಪಾಲ್ ಕೂಡ ಕಣದಲ್ಲಿದ್ದಾರೆ. ಇಟ್ಟು 12 ಮಂದಿ ಮಹಿಳೆಯರಿಗೆ ಟಿಕೆಟ್ ಘೋಷಣೆಯಾಗಿದೆ.
ಎರಡೆರಡು ಬಾರಿ ಮಂತ್ರಿಗಳಾದವರಿಗೆ ಇಲ್ಲ ಟಿಕೆಟ್
ಇದೇ ವೇಳೆ ಎರಡೆರಡು ಬಾರಿ ಸಚಿವರಾದವರಿಗೆ ಸಿಪಿಐಎಂ ಟಿಕೆಟ್ ನಿರಾಕರಿಸಿದೆ. ಟಿಎಂ ಥಾಮಸ್ ಐಸಾಕ್, ಇ.ಪಿ ಜಯರಾಜನ್, ಆರ್ ರವೀಂದ್ರನಾಥ್, ಜಿ ಸುಧಾಕರನ್ ಹಾಗೂ ಎ.ಕೆ ಬಾಲನ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಯಾರಿಗೂ ಮನಃಪೂರ್ವಕವಾಗಿ ಟಿಕೆಟ್ ನಿರಾಕರಣೆ ಮಾಡಲಾಗಿಲ್ಲ. ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಎರಡೆರಡು ಬಾರಿ ಮಂತ್ರಿಗಳಾದವರಿಗೆ ಟಿಕೆಟ್ ನೀಡಿಲ್ಲ ಎಂದು ಸಿಪಿಐಎಂ ಸ್ಪಷ್ಟ ಪಡಿಸಿದೆ.
ಏಪ್ರಿಲ್ ಆರರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ. ಎಡರಂಗ ನೇತೃತ್ವದ ಎಲ್ಡಿಎಫ್ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವ ಉಮೇದಿನಲ್ಲಿದೆ.
83 ಅಭ್ಯರ್ಥಿಗಳ ಪೈಕಿ ಸಿಪಿಎಂ ಬೆಂಬಲಿತ ಒಂಬತ್ತು ಮಂದಿ ಪಕ್ಷೇತರರು ಕೂಡ ಸೇರಿದ್ದಾರೆ. ಇನ್ನುಳಿದ ಮಂಜೇಶ್ವರಂ ಹಾಗೂ ದೇವಿಕುಳ ಕ್ಷೇತ್ರಗಳಿಗೆ ಶೀಘ್ರವೇ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದು ಸಿಪಿಐಎಂ ಹೇಳಿದೆ.
ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ಮಟ್ಟನ್ನೂರ್ನಿಂದ ಕಣಕ್ಕಿಳಿಯಲಿದ್ದು, ಉನ್ನತ ಶಿಕ್ಷಣ ಸಚಿವ ಕೆ.ಟಿ ಜಲೀಲ್ ಅವರು ತಾವನೂರ್ನಿಂದ ಕಣಕ್ಕಿಳಿಯಲಿದ್ದಾರೆ.
ಕಾರ್ಮಿಕ ಸಚಿವ ಟಿ.ಪಿ ರಾಮಕೃಷ್ಣನ್, ಇಂಧನ ಸಚಿವ ಎಂಎಂ ಮಣಿ, ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್, ಮೀನುಗಾರಿಕ ಸಚಿವೆ ಮೆರ್ಸಿಕುಟ್ಟಿ ಅಮ್ಮ ಹಾಗೂ ಸ್ವ ಆಡಳಿತ ಸಚಿವ ಎ.ಸಿ ಮೊಯ್ದಿನ್ ಅವರಿಗೆ ಟಿಕೆಟ್ ನೀಡಲಾಗಿದೆ.
ಸಿಪಿಐಎಂ ರಾಜ್ಯ ಸದಸ್ಯರಾದ ಎಂ.ವಿ ಗೋವಿಂದ ಮಾಸ್ಟರ್, ಕೆ. ರಾಧಾಕೃಷ್ಣನ್, ಪಿ ರಾಜೀವ್ ಹಾಗೂ ಕೆ.ಎನ್ ಬಾಲಗೋಪಾಲ್ ಕೂಡ ಕಣದಲ್ಲಿದ್ದಾರೆ. ಇಟ್ಟು 12 ಮಂದಿ ಮಹಿಳೆಯರಿಗೆ ಟಿಕೆಟ್ ಘೋಷಣೆಯಾಗಿದೆ.
ಎರಡೆರಡು ಬಾರಿ ಮಂತ್ರಿಗಳಾದವರಿಗೆ ಇಲ್ಲ ಟಿಕೆಟ್
ಇದೇ ವೇಳೆ ಎರಡೆರಡು ಬಾರಿ ಸಚಿವರಾದವರಿಗೆ ಸಿಪಿಐಎಂ ಟಿಕೆಟ್ ನಿರಾಕರಿಸಿದೆ. ಟಿಎಂ ಥಾಮಸ್ ಐಸಾಕ್, ಇ.ಪಿ ಜಯರಾಜನ್, ಆರ್ ರವೀಂದ್ರನಾಥ್, ಜಿ ಸುಧಾಕರನ್ ಹಾಗೂ ಎ.ಕೆ ಬಾಲನ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಯಾರಿಗೂ ಮನಃಪೂರ್ವಕವಾಗಿ ಟಿಕೆಟ್ ನಿರಾಕರಣೆ ಮಾಡಲಾಗಿಲ್ಲ. ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಎರಡೆರಡು ಬಾರಿ ಮಂತ್ರಿಗಳಾದವರಿಗೆ ಟಿಕೆಟ್ ನೀಡಿಲ್ಲ ಎಂದು ಸಿಪಿಐಎಂ ಸ್ಪಷ್ಟ ಪಡಿಸಿದೆ.
ಏಪ್ರಿಲ್ ಆರರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ. ಎಡರಂಗ ನೇತೃತ್ವದ ಎಲ್ಡಿಎಫ್ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವ ಉಮೇದಿನಲ್ಲಿದೆ.